ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಮೂಕಪ್ಪ ಶಿವಪ್ಪ ಪೂಜಾರ್ ದೇಸೀ ತಳಿಯ ಸಂರಕ್ಷಕ, ಸಾವಯವ ಕೃಷಿಕ ಹಾಗೂ ದೇಸೀ ತಳಿಯ ಬೆಳೆಗಾರ,
ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ‘ಗುಳಿ ರಾಗಿ’ ಪದ್ಧತಿಯನ್ನು ಉಳಿಸಿಕೊಂಡು ಬರುವುದರ ಜೊತೆಗೆ ಈ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮತ್ತೆ ಪುನಶ್ವೇತನ ನೀಡಿದ ಹಿರಿಮೆ ಮೂಕಪ್ಪ ಪೂಜಾರರದ್ದು. ದೇಶಾದ್ಯಂತ ಸಂಚರಿಸಿ ದೇಸೀ ಬಿತ್ತನೆ ಬೀಜಗಳ ಪ್ರಯೋಜನದ ಬಗ್ಗೆ ರೈತರಲ್ಲಿ ಜನಜಾಗೃತಿ ಮೂಡಿಸಿದ ಕೃಷಿಕರು. ಒಣಭೂಮಿ ಭತ್ತದ ಕೃಷಿಯಲ್ಲೂ ಸಹ ಮೂಕಪ್ಪ ಪರಿಣಿತರು. ಕರಿಮುಂಡಗ, ಕರಿದಡಿಬುಡ್ಡ ತಳಿಗಳು ಮಾತ್ರವಲ್ಲದೆ, ದೇಸೀ ತಳಿ ತರಕಾರಿ ಬೀಜಗಳ ಸಂರಕ್ಷಣೆಯಲ್ಲಿ ಸದಾ ನಿರತರು. ದೇಶಾದ್ಯಂತ ನಡೆಯುವ ಬೀಜಮೇಳದ ಉಪನ್ಯಾಸಕರು ಸಹ. ೨೦೧೭ರಲ್ಲಿ ನಡೆದ ವಿಶ್ವ ಸಾವಯವ ಸಮಾವೇಶದಲ್ಲಿ ಪಾಲ್ಗೊಂಡ ಹಿರಿಮೆ ಈ ಕೃಷಿಸಾಧಕರದ್ದು.
Categories
ಶ್ರೀ ಮೂಕಪ್ಪ ಶಿವಪ್ಪ ಪೂಜಾ
