ವೃತ್ತಿಯಿಖಂದ ವ್ಯಾಪಾರಸ್ಥರು ಹಾಗೂ ಬಹುಮುಖಿ ಸಮಾಜಸೇವಾಕರ್ತರು ಶ್ರೀ
ಮೂಲ್ಚಂದ್ ನಹಾರ್ ಅವರು.
ಹಲವಾರು ಜೀವನ ವಿಜ್ಞಾನ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಒಂದು ಲಕ್ಷ ಪ್ರತಿಗಳನ್ನು ಕನ್ನಡದಲ್ಲಿ ಮುದ್ರಿಸಿ ಶಾಲಾವಿದ್ಯಾರ್ಥಿಗಳಿಗೆ ಉಚಿತವಾಗಿ ವಿತಲಸಿರುವ ಇವರು ಬಡಮಕ್ಕಆಗೆ ಕಂಪ್ಯೂಟರ್ ತರಬೇತಿ, ಅಂಧ ಮಕ್ಕಆಗೆ ಬಟ್ಟೆ ವಿತರಣೆ, ದುರ್ಬಲಲಿಗೆ ಉಚಿತ ಆರೋಗ್ಯ ಕೇಂದ್ರ ವ್ಯವಸ್ಥೆ ಒದಲಿಸಿದ್ದಾರೆ.
ಸ್ವತಃ ಅಂಗವಿಕಲರಾದ ಶ್ರೀ ಮೂಲ್ಚಂದ್ ನಹಾರ್ ಅವರು ನೂರಾರು ಅಂಧಮಕ್ಕಳ ಜೀವನದಲ್ಲಿ ಭರವಸೆ ಮೂಡಿಸುವ ನಿಟ್ಟನಲ್ಲ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸುನಾಮಿಯಿಂದ ಸಂತ್ರಸ್ಥರಾದವರಿಗೆ ಅಕ್ಕಿ, ಪಾತ್ರೆ, ಔಷಧಿ, ಬಟ್ಟೆ ಹಾಗೂ ನಗದು ಹಣವನ್ನು ಕಳಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ, ಬೆಂಗಳೂಲನ ಅಡಕಮಾರನಹಳ್ಳಿಯಲ್ಲಿನ ಆರೋಗ್ಯ ಕೇಂದ್ರದ ಮೂಲಕ ಉಚಿತ ಆರೋಗ್ಯ ತಪಾಸಣಿ, ಔಷಧಿ ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳ ತಜ್ಞರಿಂದ ಜೀವನ ಮೌಲ್ಯ ಶಿಕ್ಷಣ ತರಬೇತಿ ಶಿಬಿರಗಳನ್ನು ಶಿಕ್ಷಕಲಗಾಗಿ ಜೀವನ ವಿಜ್ಞಾನ ಪಠ್ಯ ರಚನೆ ಹಾಗೂ ಬೋಧನೆಯ ಬಗ್ಗೆ ಶಿಬಿರಗಳನ್ನು ವ್ಯವಸ್ಥೆ ಮಾಡಿರುವ ಇವರು ತಮ್ಮ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಉಚಿತ ತಪಾಸಣೆ ಹಾಗೂ ಔಷಧಿ ವಿತಲಸುವ ಕಾಯಕವನ್ನು ಕಳೆದ ಎರಡು ದಶಕಗಆಂದಲೂ ನಡೆಸುತ್ತಾ ಬಂದಿದ್ದಾರೆ.
ಸರ್ವಧರ್ಮ ಸಮ್ಮೇಳನವನ್ನು ಸಂಘಟಿಸಿರುವ ಶ್ರೀ ಮೂಲ್ಚಂದ್ ನಹಾರ್ ಅವರು ಅಡಕಮಾರನಹಳ್ಳಿಯ ಭಿಕ್ಷಾಧಾಮದ ಅಧ್ಯಕ್ಷರು.
ಅನೇಕ ಧಾರ್ಮಿಕ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಪಾತ್ರರಾಗಿರುವ ಮೂಲ್ಚಂದ್ ನಹಾ ಅವರು ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ದೀನ ದಲತರ ಏಆಗೆಗಾಲ ಸೇವಾಮನೋಭಾವದಿಂದ ದುಡಿಯುತ್ತಿರುವವರು ಶ್ರೀ ಮೂಲ್ಚಂದ್ ನಹಾ ಅವರು.
Categories
ಶ್ರೀ ಮೂಲ್ಚಂದ್ ನಹಾರ್
