Categories
ರಂಗಭೂಮಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಲಾಡ ಸಾಹೇಬ

ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿನ ಹಿಲಯ ತಲೆಮಾಲನ ಪ್ರತಿಭಾವಂತ ಕಲಾವಿದರು ಶ್ರೀ ಲಾಡ ಸಾಹೇಬ ಅವರು.
೧೯೧೬ರಲ್ಲಿ ಬಿಜಾಪುರ ಜಿಲ್ಲೆ ಬಾಗಲಕೋಟೆ ತಾಲೂಕಿನ ಅಮೀನಗಡದಲ್ಲಿ ಜನನ. ಎಸ್.ಆರ್. ಕಂಠಿ ನಾಟಕ ಕಂಪನಿಯಿಂದ ನಾಟಕ ರಂಗಕ್ಕೆ ಪದಾರ್ಪಣ. ನಂತರ ಶಿರಹಟ್ಟಿ ವೆಂಕೋಬರಾಯರ ಕಂಪನಿ, ಭಾಗ್ಯದಯ ನಾಟ್ಯ ಸಂಘ, ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ, ಶ್ರೀ ಶೈಲ ನಾಟಕ ಸಂಘ ಮೊದಲಾದ ಹಲವಾರು ವೃತ್ತಿ ನಾಟಕ ಕಂಪನಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯ. ಅಲ್ಲದೆ ಸ್ಥಳೀಯ ಹವ್ಯಾಸಿ ಕಂಪನಿಗಳಲ್ಲಿಯೂ ಅಭಿನಯಿಸಿರುವ ಶ್ರೀ ಲಾಡ ಸಾಹೇಬ ಅವರು ನಟರಾಜ ನಾಟ್ಯ ಸಂಘ ವೃತ್ತಿ ನಾಟಕ ಕಂಪನಿ ಸ್ಥಾಪಕರು. ಶ್ರೀ ಲಾಡ ಸಾಹೇಬ ಅವರು ಅಭಿನಯಿಸಿದ ಕೃಷ್ಣ, ಶಿವಾಜಿ, ನಾರದ ಮೊದಲಾದ ಪೌರಾಣಿಕ ಪಾತ್ರಗಳಲ್ಲದೆ ಪಠಾಣ ಪಾಶ ನಾಟಕದ ಒಕ್ಕಲಗಿತ್ತಿ, ಮಲ್ಲಮ್ಮ ನಾಟಕದ ನಾಗಮ್ಮ, ಪ್ರಪಂಚ ಪರೀಕ್ಷೆ ನಾಟಕದ ದೇವರಾಣಿ ವೈದಲಾದ ಸ್ತ್ರೀಪಾತ್ರಗಳು ಜನಪ್ರಿಯವಾದವು. ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳ ಪ್ರಮುಖ ಪಾತ್ರಗಳಲ್ಲಿಯೂ ಅದ್ಭುತವಾಗಿ ಅಭಿನಯಿಸಿದ ಹೆಗ್ಗಳಿಕೆ ಶ್ರೀಯುತರದು.
ಸುಮಾರು ಎಪ್ಪತ್ತು ವರ್ಷಗಳಗೂ ಹೆಚ್ಚು ಕಾಲ ಕಲಾಸೇವೆಯಲ್ಲಿ ನಿರತರಾದ ಶ್ರೀ ಲಾಡ ಸಾಹೇಬ ಅವರು ತನ್ಮಯತೆಯಿಂದ ಅಭಿಯಿಸಿದ ಪಾತ್ರಗಳು ಪ್ರೇಕ್ಷಕರ ಮನಸೂರೆಗೊಂಡು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು.
ರಂಗಭೂಮಿಯನ್ನೇ ಬದುಕಾಗಿಸಿಕೊಂಡ ಪುರುಷ ಪಾತ್ರ ಹಾಗೂ ಸ್ತ್ರೀಪಾತ್ರ ಎರಡರಲ್ಲಿಯೂ ಅಭಿನಯಿಸಿ ತಮ್ಮ ಅಭಿನಯ ಕೌಶಲದಿಂದ ಪ್ರೇಕ್ಷಕರ ಮನಸೂರೆಗೊಂಡ ವೃತ್ತಿ ರಂಗಭೂಮಿಯ ಥೀಮಂತ ಕಲಾವಿದರ ಶ್ರೀ ಲಾಡ ಸಾಹೇಬ ಅವರು.