Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ವೈ.ಎಂ.ಎಸ್. ಶರ್ಮ

ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳ ಸಾಧನೆ ಮಾಡಿರುವ ಹಿಲಯ ಸಮಾಜಸೇವಕರು ಶ್ರೀ ವೈ.ಎಂ.ಎಸ್. ಶರ್ಮ ಅವರು.
೧೯೨೫ರಲ್ಲಿ ಕೋಲಾರದ ಯಳಗೊಂಡಹಳ್ಳಿಯಲ್ಲಿ ಜನನ. ಶ್ರೀ ವೈ.ಎಂ.ಎಸ್. ಶರ್ಮ ಅವರು ಎಂಜಿನಿಯಲಂಗ್ ಶಿಕ್ಷಣ ಪಡೆದಿದ್ದು ಇಂಗ್ಲೆಂಡ್ನಲ್ಲಿ (೧೯೪೬-೫೦)
ಮೈಸೂರು-ಚಾಮರಾಜನಗರ ರೈಲ್ವೆ ಟ್ರಾಕ್ ನಿರ್ವಹಣೆಯ ಹೊಣೆಗಾಲಕೆ ಹೊತ್ತುಕೊಂಡ ಶರ್ಮ ಅವರು ಲಕ್ಷ್ಮಣತೀರ್ಥ ಸೇತುವೆ, ಕನ್ನಂಬಾಡಿ ಡೀಪ್ ಇಡ್ಜ್, ಶ್ರೀರಂಗಪಟ್ಟಣ-ಮೈಸೂರು ನಡುವಣ ರೈಲ್ವೆ ಹಆ ನಿರ್ವಹಣೆ ಮೊದಲಾದ ಕಾಮಗಾಲಗಳ ನೇತೃತ್ವ ವಹಿಸಿದ್ದರು.
ಮೈಸೂರು ಸಂಸ್ಥಾನದ ಹಲವಾರು ಕೆರೆ ನಿರ್ಮಾಣ ಹಾಗೂ ನಿರ್ವಹಣೆಯ ಉಸ್ತುವಾಲ ವಹಿಸಿಕೊಂಡಿದ್ದ ವೈ.ಎಂ.ಎಸ್. ಶರ್ಮ ರೈಲ್ವೆ ಹಾಲ ಹಾಗೂ ಸೇತುವೆ ನಿಲ್ದಾಣದಲ್ಲಿ ಹೊಸಪದ್ಧತಿಗಳನ್ನು ಅಳವಡಿಸಿ ನಿರಾಣ ವೆಚ್ಚದಲ್ಲಿ ಉಳಿತಾಯ ತೋರಿಸಿಕೊಟ್ಟರು. ಅವರು ಬಡವರ ಶ್ರೇಯೋಭಿವೃದ್ಧಿ ಕಾರ್ಯಗಳಿಗೆ ತೊಡಲಿಸಿಕೊಂಡವರು ಹಾಗೂ ಹಲವಾರು ರೋಗಳಿಗೆ ಪುನರ್ವಸತಿ ಕಲ್ಪಿಸಿದವರು.
ವಿದ್ಯಾರ್ಥಿ ಜೀವನದಲ್ಲಿ ಸೈನ್ಯದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಶರ್ಮ ಅವರು ಸ್ವಾತಂತ್ರಾನಂತರ ಕರ್ನಾಟಕದ ಹಲವಾರು ಕಡೆಗಳಲ್ಲಿ ಸೇತುವೆ, ಶಾಲಾಕಟ್ಟಡ, ಸಮುದಾಯ ಭವನ, ಆಸ್ಪತ್ರೆ, ತರಕಾಲ-ಮಾರುಕಟ್ಟೆ ನಿರಾಣ ಕಾರ್ಯದಲ್ಲಿ ದುಡಿದರು.
ಎಂಜಿನಿಯರ್ ಆಗಿ ವೃತ್ತಿ ಜೀವನ ನಡೆಸಿದ ಶರ್ಮ ಅವರು ತನ್ಮೂಲನಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಿದರಲ್ಲದೆ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿಗಾಗಿ ವ್ಯವಸ್ಥೆ ಮಾಡಿದರು.
ಇವಯಸ್ಸಿನಲ್ಲಿಯೂ ಹಲವು ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವವರು ಮೈ.ಎಂ.ಎಸ್. ಶರ್ಮ ಅವರು.