ರಾಮಕೃಷ್ಣ ತಪಸ್ಸೂರ್ಯ
ಕಿರಣಬಿಂಬ ಚಂದ್ರಿಕೆ
ಓ ತಾಯಿ ಅಂಬಿಕೆ –
ನೆಲವ ಜಲವ ಗಿರಿಯ ದರಿಯ
ತಬ್ಬಿನಿಂತ ಕರುಣೆಯೆ
ವಾತ್ಸಲ್ಯ ವರಣೆಯೆ.
ರಾಮಕೃಷ್ಣ ತಪೋವನದ
ಪರ್ಣಕುಟಿಯ ದೀಪವೆ
ಬಳಿಗೆ ಬಂದ ಹಣತೆಗಳಿಗೆ
ಬೆಳಕನಿತ್ತ ಕಿರಣವೆ
ಮೌನ ಪ್ರಭಾವಲಯವೆ.
ಸಂಕಟಗಳ ವನವಸನವ-
ನುಟ್ಟು ನಿಂತ ಶಿಖರವೆ
ನದ-ನದಿಗಳ ವಾತ್ಸಲ್ಯದ
ಹಾಲೂಡುವ ತೀರ್ಥವೇ
ದಿವ್ಯಕೃಪಾರೂಪವೇ.-
Leave A Comment