ಜಾತಿ ಮತ ಭೇದವೆಣಿಸದೆ ಸಮಾಜ ಸೇವಾ ಧರ್ಮವನ್ನು ಕಳೆದ ೬೨ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಬೆಂಗಳೂರಿನ ಶ್ರೀ ಸಾಯಿ ಮಂಡಳಿ.
ಒಂದು ಭಜನೆ ಮಂಡಳಿಯ ರೂಪದಲ್ಲಿ ಪ್ರಾರಂಭವಾದ ಈ ಸಂಸ್ಥೆ ಒಂದು ಸ್ವಂತ ಕಟ್ಟಡ ಹೊಂದಲು ಸುಮಾರು ೫೦ ವರ್ಷಗಳು ಬೇಕಾಯಿತು. ಶ್ರೀ ಶಿರಡಿ ಸಾಯಿಬಾಬಾ ಅವರ ಸರಳ ಜೀವನ, ಉನ್ನತ ಚಿಂತನೆ, ಸಾಮಾಜಿಕ ಕಳಕಳಿಗಳಿಂದಾಗಿ ಹಲವಾರು ಯೋಜನೆಗಳು ಈ ಸಂಸ್ಥೆಯಲ್ಲಿ ರೂಪು ಪಡೆದು ಕಾರ್ಯನಿರ್ವಹಿಸುತ್ತಿವೆ. ಅನ್ನಬ್ರಹ್ಮ ಯೋಜನೆಯಡಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ, ಆರೋಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ಪರೀಕ್ಷಾ ಶಿಬಿರಗಳು, ಕಣ್ಣಿನ ಶಸ್ತ್ರ ಚಿಕಿತ್ಸೆ, ಮುಂತಾದ 2. ಪ್ರಯೋಜನಗಳನ್ನು ಸಾವಿರಾರು ಜನರು ಪಡೆದುಕೊಂಡಿರುತ್ತಾರೆ. ವಿದ್ಯಾಶಾರದೆ ಯೋಜನೆಯಡಿ ಎಂಟು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ, ಲೇಖನ ಸಾಮಗ್ರಿಗಳ ವಿತರಣೆ, ಪ್ರತಿಭಾ ವಿದ್ಯಾರ್ಥಿ ವೇತನ, ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇವಲ್ಲದೆ ಅಂಧ ಮಕ್ಕಳ ಶಾಲೆಗೆ ನಗದು ನೆರವು, ವೃದ್ಧಾಶ್ರಮಗಳಿಗೆ ಉಚಿತ ವಸ್ತ್ರ, ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ, ಅಂಗವಿಕಲರಿಗೆ ಟ್ರೈಸಿಕಲ್ಗಳ ವಿತರಣೆ, ಮುಂತಾದ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಇದು.
ಆರು ದಶಕಗಳಿಂದ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಅಪೂರ್ವ ಸಂಸ್ಥೆ ಬೆಂಗಳೂರಿನ ಶ್ರೀ ಸಾಯಿ ಮಂಡಳಿ.
Categories
ಶ್ರೀ ಶಿರಡಿ ಸಾಯಿ ಮಂಡಳಿ
