ರಾಜಕಾರಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಾನವಾದ ಸೇವೆ ಸಲ್ಲಿಸಿದವರು ಶಿವಾನಂದ ಕೌಜಲಗಿ. ಪ್ರತಿಷ್ಠಿತ ಕೆ.ಎಲ್.ಇ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದವರಲ್ಲಿ ಪ್ರಮುಖರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಶಿವಾನಂದ ಕೌಜಲಗಿ ಅವರ ಬಿ.ಕಾಂ ಪದವೀಧರರು. ಕಾನೂನು ಪದವಿಯನ್ನೂ ಪಡೆದವರು. ಶಿಕ್ಷಣದಷ್ಟೇ ರಾಜಕಾರಣದಲ್ಲೂ ಆಸಕ್ತಿ ವಹಿಸಿದವರು. ಬೈಲಹೊಂಗಲ ವಿಧಾನಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿದವರು. ಲೋಕೋಪಯೋಗಿ ಸಚಿವರಾಗಿ , ಸಂಸದರಾಗಿ ಜನಸೇವೆ ಮಾಡಿದವರು. ಅಂತೆಯೇ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಪ್ರಸ್ತುತ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
Categories