ಗುರುವಿನ ಮಾರ್ಗದರ್ಶನದಂತೆ ಅರಿವಿನ ದಾರಿಗೆ ಬೆಳಕಾಗಿ ಬಾಳಿದ ಶಿಕ್ಷಣ ತಜ್ಞ ಹಿರಿಯ ಚೇತನ ಲಿಂಗಸುಗೂರು ಷಡಕ್ಷರಪ್ಪನವರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಲಿಂಗಸುಗೂರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡ ಉಸಿರಾಡುವಂತೆ ಮಾಡಿದ ಧೀಮಂತ ವ್ಯಕ್ತಿ ಷಡಕ್ಷರಪ್ಪನವರು. ಕಡುಬಡತನ ಬೆನ್ನಿಗೆ ಕಟ್ಟಿಕೊಂಡು ಮುಂದೆ ಓದಲಾಗದೆ ಅನಿವಾರ್ಯವಾಗಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಶ್ರೀಯುತರು ಹಿರಿಯರ ಮಾರ್ಗದರ್ಶನದಲ್ಲಿ ಬಹುಬೇಗನೇ ಉತ್ತಮ ಶಿಕ್ಷಕರೆನಿಸಿದರು. ನೇರ ನುಡಿಯ ಶಿಸ್ತಿನ ಸಿಪಾಯಿ ಷಡಕ್ಷರಪ್ಪನವರು ತಾವು ವರ್ಗವಾದ ಶಾಲೆಗಳಲ್ಲೆಲ್ಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಇಸ್ಲಾಂ ಆಳ್ವಿಕೆಯಲ್ಲಿದ್ದ ಬೀದರ್ನಲ್ಲಿ ಕನ್ನಡ ಭಾಷೆ ಪ್ರಚಾರ ಮಾಡಿ ಜನಮನವನ್ನು ಕನ್ನಡದೆಡೆಗೆ ಸೆಳೆದ ಶ್ರೀಯುತರು ೧೯೭೦ರಲ್ಲೇ ಅವರ ಶೈಕ್ಷಣಿಕ ಸಾಧನೆಗೆ ರಾಜ್ಯ ಪ್ರಶಸ್ತಿ ಪಡೆದರು. ೧೯೭೪ರಲ್ಲಿ ಸೇವೆಯಿಂದ ನಿವೃತ್ತರಾದರೂ ಶೈಕ್ಷಣಿಕ ಸಂಸ್ಥೆಯೊಂದಿಗಿನ ಸಂಬಂಧ ಅವರನ್ನು ಬಿಡಲಿಲ್ಲ. ಅವರ ಶಿಕ್ಷಣ ಪ್ರೇಮ, ಶಿಕ್ಷಣ ಪ್ರಸಾರಕ್ಕೆ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ತಮ್ಮ ಇಳಿವಯಸ್ಸಿನಲ್ಲೂ ಶಿಕ್ಷಣ ಪ್ರಸಾರವನ್ನೇ ಕಾಯಕವೆಂದು ನಂಬಿ ಬದುಕುತ್ತಿರುವ ಹಿರಿಯ ಜೀವ ಶ್ರೀ ಷಡಕ್ಷರಪ್ಪನವರು.
Categories
ಶ್ರೀ ಷಡಕ್ಷರಪ್ಪ ಲಿಂಗಸುಗೂರು
