Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಹದೇವಪ್ಪ ಈರಪ್ಪ ನಡಿಗೇರ್

ಜಾನಪದ ಕ್ಷೇತ್ರದಲ್ಲಿ ಗಾಯಕರಾಗಿ ಹೆಜ್ಜೆಗುರುತು ಮೂಡಿಸಿದ ಗ್ರಾಮೀಣ ಪ್ರತಿಭೆ ಸಹದೇವಪ್ಪ ಈರಪ್ಪ ನಡಿಗೇರ್, ಹೊಸ ತಲೆಮಾರಿಗೆ ಕಲೆ ಕಲಿಸಿದ ಜಾನಪದ ಗುರು, ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ೧೯೫೭ರಲ್ಲಿ ಜನಿಸಿದ ಸಹದೇವಪ್ಪ ಬಡತನದಲ್ಲೆ ಬೆಳೆದವರು. ಎಸ್‌ಎಸ್‌ಎಲ್‌ಸಿವರೆಗಷ್ಟೇ ಓದಿದವರು. ಬಾಲ್ಯದಲ್ಲೇ ಸೆಳೆದ ಜನಪದ ಹಾಡುಗಾರಿಕೆಗೆ ಮನಸೋತವರು, ಹಿರಿಯ ಕಲಾವಿದರಿಂದ ಜಾನಪದದ ಹಲವು ಬಗೆಯ ಗಾಯನದ ಅಭ್ಯಾಸ, ಜಾನಪದ ಗೀತೆ, ಭಾವಗೀತೆ, ಗೀಗೀಪದ, ಲಾವಣಿಪದಗಳನ್ನು ಹಾಡುವುದರಲ್ಲಿ ನಿಷ್ಣಾತರು. ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ವಿಶೇಷ ಪರಿಶ್ರಮ. ಹಳ್ಳಿಹಳ್ಳಿಗೆ ತೆರಳಿ ತತ್ವಪದಗಾಯನ ಉಣಬಡಿಸಿದ ಕಲಾವಿದರು, ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸಾವಿರಾರು ಮಕ್ಕಳಿಗೆ ಜಾನಪದ ಗಾಯನದ ಕಲೆಗಾರಿಕೆಯನ್ನು ಧಾರೆ ಎರೆದ ಕಲಾಗುರು. ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರು. ೪೬ ವರ್ಷಗಆಂದಲೂ ಕಲಾಸೇವೆಯಲ್ಲಿ ತೊಡಗಿರುವ ಸಹದೇವಪ್ಪ ಕಲೆಯೇ ಉಸಿರು. ಕಲೆ ಉಳಿಸುವುದೇ ಬದುಕಿನ ಹೆಗ್ಗುರಿ. ಹಲವು ಸಂಘಸಂಸ್ಥೆಗಳಿಂದ ಸನ್ಮಾನಿತರು. ಈಗಲೂ ಕಲಾಕೈಂಕರ್ಯದಲ್ಲಿ ತನ್ನಯವಾಗಿರುವ ಕಲಾನಿಷ್ಠ ದೇಸಿ ಪ್ರತಿಭೆ.