Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುರೇಶ್ ಅರಸ್

ರಾಷ್ಟ್ರದ ಪ್ರತಿಭಾವಂತ ಚಿತ್ರ ಸಂಕಲನಕಾರರಲ್ಲೊಬ್ಬರು ಶ್ರೀ ಸುರೇಶ್ ಅರಸ್ ಅವರು. ೧೫೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನ ಮಾಡಿರುವ ಹಿಲಮೆ ಶ್ರೀಯುತರದು.
ಮಣಿರತ್ನಂ ಅವರ ನಾಯಗನ್ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸುರೇಶ್ ಅರಸ್ ಆರಂಭದ ದಿನಗಳಲ್ಲೇ ಹೆಚ್ಚಾಗಿ ಸಂಕಲನ ಮಾಡಿದ್ದು ಕಲಾತ್ಮಕ ಚಿತ್ರಗಳಿಗೆ.
ಸಂಗಮ ಸಾಕ್ಷಿ, ತುಳು ಚಿತ್ರದ ಮೂಲಕ ಸ್ವತಂತ್ರ ಸಂಕಲನಕಾರರಾಗಿ ಚಿತ್ರರಂಗ ಪ್ರವೇಶಿಸಿದ ಸುರೇಶ್ ಅರಸ್ ಬ್ಯಾಂಕರ್ ಮಾರ್ಗಯ್ಯ, ಸಂತ ಶಿಶುನಾಳ ಷಲೀಫ, ಬೆಂಕಿ, ಮೂರು ದಾಲಗಳು, ನಕ್ಕಳಾ ರಾಜಕುಮಾಲ, ಮಿಥಿಲೆಯ ಸೀತೆಯರು, ಪಂಚಮವೇದ ಮುಂತಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ಸಂಕಲನ ಮಾಡಿದ ಹೆಗ್ಗಆಕೆಗೆ ಪಾತ್ರರು.
ಬೆಂಗಳೂಲಿನಲ್ಲಿ ಜ್ಯೋತಿ ಸಂಕಲನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಅರಸ್ ಪ್ರಸ್ತುತ ಚೆನ್ನೈನಲ್ಲಿ ಅತ್ಯಾಧುನಿಕ ಸಂಕಲನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳ ಚಲನಚಿತ್ರಗಳನ್ನು ಸಂಕಲನ ಮಾಡಿರುವ ಶ್ರೀ ಸುರೇಶ್ ಅರಸ್ ಶ್ರೀಲಂಕಾ, ಮಾಲಷಸ್ ದೇಶಗಳ ಚಲನಚಿತ್ರಗಳನ್ನು ಸಂಕಲನ
ಮಾಡಿದ ಕೀರ್ತಿಗೆ ಭಾಜನರು.
ರಾಜ್ಯಸರ್ಕಾರದಿಂದ ಎರಡು ಬಾಲ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಪಡೆದಿರುವ ಶ್ರೀ ಸುರೇಶ್ ಅರಸ್ ನಾಡು ಕಂಡ ಅತ್ಯುತ್ತಮ ಸಂಕಲನಕಾರ.