Categories
ಜಾನಪದ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸೈದುಸಾಬ ಲಾಡಖಾನ

ಜನಪ್ರಿಯ ಬಯಲಾಟಗಳಲ್ಲಿ ಒಂದಾದ ಶ್ರೀ ಕೃಷ್ಣ ಪಾರಿಜಾತದಲ್ಲಿ ಶ್ರೀಕೃಷ್ಣನ ಪಾತ್ರದಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡವರು ಮುಗಳಖೇಡದ
ಸೈದು ಸಾಬ ಲಾಡ ಖಾನ ಅವರು.
ಚಿಕ್ಕಂದಿನಿಂದಲೇ ಶ್ರೀಕೃಷ್ಣ ಪಾಲಜಾತದ ಒಲವು ಬೆಳೆಸಿಕೊಂಡ ಶ್ರೀ ಲಾಡಖಾನ ಸೇಲಕೊಂಡದ್ದು ಅಂಗಪ್ಪ ಮಾಸ್ತರ ಹುಡೇದ ಅವರಲ್ಲ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಭಕ್ತಿಪ್ರಧಾನ ನಾಟಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದ ಲಾಡ ಖಾನ ಅವರು ಅಂಗಪ್ಪ ಮಾಸ್ತರ ಅಭಿನಯಕ್ಕೆ ಮಾರುಹೋಗಿ ಅವರ ಶಿಷ್ಯರಾದರು. ಮನರಂಜನೆ, ಸಂಗೀತ, ಲಯಗಾಲಕೆ ಹಾಗೂ ಆಧ್ಯಾತ್ಮ ವಿಚಾರಧಾರೆಗಳಿರುವ ಶ್ರೀ ಕೃಷ್ಣ ಪಾಲಜಾತ ಬಯಲಾಟದಲ್ಲಿ ಮುಖ್ಯವಾದ ಶ್ರೀ ಕೃಷ್ಣ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಾಡಿನ ಗಮನ ಸೆಳೆದ ಸೈದು ಸಾಬ ಲಾಡ ಖಾನ ನಾಲೈದು ಪಾರಿಜಾತ ಕಂಪನಿಗಳಲ್ಲಿ ಶ್ರೀ ಕೃಷ್ಣ ಪಾತ್ರಧಾಲಿಯಾಗಿ ಮಿಂಚಿದರು. ಶ್ರೀ ಕೃಷ್ಣ ಪಾಲಜಾತದಲ್ಲಿ ಮುಖ್ಯಪಾತ್ರವಾದ ಶ್ರೀಕೃಷ್ಣನ ಅಭಿನಯಕ್ಕೆ ಹೊಸ ಆಯಾಮ ಕೊಟ್ಟ ಲಾಡಖಾನರವರು ಅನೇಕಲಗೆ ಶ್ರೀಕೃಷ್ಣನ ಪಾತ್ರದ ಅಭಿನಯವನ್ನು ಹೇಳಿಕೊಟ್ಟರು.
ಎತ್ತರ ನಿಲುವು, ಸುಂದರ ರೂಪದ ಸೈದು ಸಾಬರು ಶ್ರೀ ಕೃಷ್ಣನ ಪಾತ್ರಧಾರಿಯಾಗಿ ತಮ್ಮ ಛಾಪು ಮೂಡಿಸಿದರಲ್ಲದೆ, ನಾಲ್ಕು ದಶಕಗಳ ಕಾಲ ಶ್ರೀ ಕೃಷ್ಣ ಪಾಲಜಾತ ಬಯಲಾಟವನ್ನು ಮತ್ತಷ್ಟು ಜನಪ್ರಿಯಗೊಳಿಸಿದರು.
ಕರ್ನಾಟಕವಲ್ಲದೆ, ಮಹಾರಾಷ್ಟ್ರ ರಾಜ್ಯದಲ್ಲೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಸೈದು ಸಾಬ ಲಾಡ ಖಾನ ಆಕಾಶವಾಣಿ, ದೂರದರ್ಶನಗಳ ಮೂಲಕವೂ ಜನಮಾನಸ ತಲುಪಿದ್ದಾರೆ.
ಅಸಂಖ್ಯ ಅಭಿಮಾನಿಗಳನ್ನು, ನೂರಾರು ಶಿಷ್ಯರನ್ನು ಪಡೆದಿರುವ ಲಾಡ ಖಾನ ಇಂದು ಕೃಷ್ಣ ಪಾಲಜಾತ ಕ್ಷೇತ್ರದಿಂದ ನಿವೃತ್ತರಾದರೂ ಜನಮನದಿಂದ ಈಗಲೂ ದೂರವಾಲಿಲ್ಲ.
ಅದ್ಭುತವಾದ ಅಭಿನಯ ಕೌಶಲ್ಯದಿಂದ ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬಿದ ಕೃಷ್ಣ ಪಾರಿಜಾತದ ಅಪ್ರತಿಮ ಕಲಾವಿದ ಶ್ರೀ ಸೈದು ಸಾಬ ಲಾಡ ಖಾನ ಅವರು.