Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಸ್ವಾಮಿ ಲಿಂಗಷ್ಟ

ಮೂಲತ: ಹರಿಹರ ತಾಲ್ಲೂಕಿನವರಾದ ಶ್ರೀ ಸ್ವಾಮಿ ಅಂಗಪ್ಪ, ಶಿಕ್ಷಣ ಹಾಗೂ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸದೇ ಮನೆಯಲ್ಲೇ ಇರಿಸಿಕೊಂಡಿದ್ದವರ ಮನ ಒಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತ ಅಕ್ಷರಕ್ರಾಂತಿಗೆ ಕಾರಣರಾದವರು. ತಮ್ಮ ನಿವೃತ್ತಿಯ ನಂತರ ಆಧ್ಯಾತ್ಯ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದು, ಹಲವು ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಬಡವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪಠ್ಯಪುಸ್ತಕಗಳನ್ನು ಕೊಡಿಸಿ, ಶಾಲಾ ಶುಲ್ಕವನ್ನು ಕೂಡ ತಾವೇ ಕಟ್ಟುವುದರ ಮೂಲಕ ತಮ್ಮ ಧೀಮಂತಿಕೆ ಮೆರೆಯುತ್ತಿದ್ದಾರೆ.