ಚಿತ್ತಪಾಡಿ ಗ್ರಾಮ,
ಅಂಚೆ – ಸಾಲಿಗ್ರಾಮ – ೫೭೫ ೨೨೫,
ಉಡುಪಿ ತಾಲ್ಲೂಕು.
ಎಪ್ಪತ್ತೊಂಬತ್ತರ ಹಾರಾಡಿ ಮಹಾಬಲ ಗಾಣಿಗ ಅವರು ಉಡುಪಿ ಜಿಲ್ಲೆಯ ಚಿತ್ತಪಾಡಿ ಗ್ರಾಮದವರು. ಸುಮಾರು ಐದು ದಶಕಕ್ಕೂ ಮೀರಿ ವೇಷ ಕಲಾವಿದನಾಗಿ ಸೇವೆ ಸಲ್ಲಿಸುತ್ತಿರುವ ಧೀಮಂತ ಕಲೆಗಾರ.
ವೃತ್ತಿಪರ ಮೇಳಗಳಲ್ಲಿ ಪಾಲ್ಗೊಂಡು ಯಾವ ರಂಗಸಜ್ಜಿಕೆಗೂ ಸರಿ; ಯಾವ ವೇಷಕ್ಕೂ ಸರಿ ಎಂಬಂತೆ ಕೌಶಲ್ಯ ಮೆರೆದಿರುವ ಹಾರಾಡಿ ಮಹಾಬಲ ಗಾಣಿಗ ನಮ್ಮ ಮುಂದಿರುವ ಹಿರಿಯ ಚೇತನ.
ಡಾ|| ಕಾರಂತ ಅವರ ಬ್ಯಾಲೆಯಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರ ಶ್ರಮ ಸಾರ್ಥಕ ಅಮೆರಿಕಾ, ಜರ್ಮನಿ, ಹಾಂಗ್ಕಾಂಗ್, ದಕ್ಷಿಣ ಅಮೆರಿಕಾ, ಇಂಗ್ಲೆಂಡ್ ಹೀಗೆ ಹಲವಾರು ದೇಶಗಳಲ್ಲಿ ತಮ್ಮ ಕಲಾಪ್ರದರ್ಶನದಿಂದ ಜನ-ಮನ ಸೂರೆಗೊಂಡವರು.
ಇಂತಹ ಚೇತನಕ್ಕೆ ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಅಭಿನಂದಿಸುತ್ತದೆ.
Leave A Comment