Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಹೀರಾಲಾಲ್ ಮಾರಿ

ವೃತ್ತಿಯಿಂದ ಟೈಲರ್, ಪ್ರವೃತ್ತಿಯಿಂದ ಚಿತ್ರಕಲಾವಿದರಾದವರು ಶ್ರೀ ಹಿರಾಲಾಲ್ ಮಲ್ಲಾರಿ ಅವರು.
೧೯೩೪ರಲ್ಲಿ ರಾಯಚೂರಿನಲ್ಲಿ ಜನನ. ಅತ್ಯಂತ ಬಡಕುಟುಂಬದಲ್ಲಿ ಮನೆಯ ಹಿರಿಯ ಮಗನಾಗಿ ಪ್ರಾಥಮಿಕ ಶಾಲೆಯವರೆಗೆ ಮಾತ್ರ ಕಲಿಕೆ. ನಂತರ ಟೈಲರ್ ವೃತ್ತಿಯ ಆರಂಭ. ಬಿಡುವಿನ ವೇಳೆಯಲ್ಲಿ ಚಿತ್ರರಚನೆ ಅಭ್ಯಾಸ. ಕಲ್ಲು, ಬಂಡೆ, ಗೋಡೆ, ಕಾಗದ, ಸಿಕ್ಕ ಸಿಕ್ಕಲ್ಲಿ ಕಲಾವಿದನ ಮನದಲ್ಲಿ ಮೂಡುವ ಭಾವನೆಗಳಿಗೆ ಚಿತ್ರರೂಪ. ಹವ್ಯಾಸಿ ಕಲಾವಿದರಾಗಿ ಕಲಾಕ್ಷೇತ್ರ ಪ್ರವೇಶಿಸಿದ ಶ್ರೀ ಹಿರಾಲಾಲ್ ಕಲಾವಿದ ಎಂ. ಶಂಕರರಾವ್ ಅವರ ಶಿಷ್ಯರಾಗಿ ಕಲಾವಿದರಾಗಿ ಬೆಳೆದಿರುವುದು ಅವರ ಕಲಾಜೀವನಕ್ಕೆ ಸಾಕ್ಷಿಯಾಗಿದೆ.
೧೯೬೮ರಿಂದ ೨೦೦೨ರ ವರೆಗೆ ಅನೇಕ ಶಿಬಿರ, ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ಬಹುಮಾನಗಳನ್ನು ಪಡೆದು ಪ್ರವರ್ಧಮಾನಕ್ಕೆ ಬೆಳಗುತ್ತಿರುವ ಕಲಾವಿದರು ಶ್ರೀ ಹೀರಾಲಾಲ್ ಮಲ್ಕಾರಿ ಅವರು.