ಪದವೀಧರರಾದರೂ ಪಗಾರ ತರುವ ನೌಕರಿ ಸಿಗಲಿಲ್ಲವೆಂದು ನಿರಾಶರಾಗದೆ ಪ್ರಗತಿಶೀಲ ರೈತರಾಗಿ ಪ್ರಕೃತಿಯನ್ನು ಅಪ್ಪಿಕೊಂಡ ಅಪರೂಪದ ಕೃಷಿಕ ಶ್ರೀಯುತ ಹೆಚ್.ಆರ್. ಚಂದ್ರೇಗೌಡ ಅವರು.
ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಗ್ರಾಮ ಹಳಿಯೂರಿನ ಶ್ರೀಮಂತ ಕೃಷಿ ಕುಟುಂಬದಲ್ಲಿ ೧೯೫೨ರಲ್ಲಿ ಹುಟ್ಟಿದ ಶ್ರೀಯುತರು ಬಾಲ್ಯದಿಂದಲೂ ಹಿಡಿದ ಕಾರ್ಯ-ಸಾಧಿಸುವ ಛಲಗಾರರು. ಅವರ ಈ ಛಲ ಮತ್ತು ಅವಿರತ ದುಡಿಮೆ ಅವರನ್ನಿಂದು ಕೃಷಿತಜ್ಞರನ್ನಾಗಿಸಿದೆ. ೨೪ ಎಕರೆ ಜಮೀನಿನ ಯಶಸ್ವೀ ರೈತ ಒಡೆಯನೆನಿಸಿದೆ.
ಸಾವಯವ ಕೃಷಿಯನ್ನು ಸಾಕ್ಷಾತ್ಕರಿಸಿಕೊಂಡು ಮಳೆಯ ಹನಿಹನಿಯನ್ನೂ ಮಿತವಾಗಿ ಬಳಸಿಕೊಂಡು ಕೃಷಿಗೆ ಪೂರಕವಾಗಿ ಗೊಬ್ಬರ, ನೀರಾವರಿ, ಅರಣ್ಯ, ಹೈನುಗಾರಿಕೆ, ಎಲ್ಲದರಲ್ಲೂ ಯಶಸ್ವಿಯಾದ ಶ್ರೀಯುತರ ಸಾಧನೆಗೆ ಸಂದ ಗೌರವ ಪುರಸ್ಕಾರಗಳು ಹತ್ತಾರು.
‘ನೆಲ ನಂಬಿ ಕೆಟ್ಟವರಿಲ್ಲ’ ಎಂಬ ನಾಣ್ಣುಡಿಗೆ ತಕ್ಕಂತೆ ಬದುಕಿ ತೋರಿಸುತ್ತಿರುವ ನಾಡಿನ ರೈತ ಬಾಂಧವರಿಗೆ ಮಾದರಿಯಾಗಿರುವ ಆದರ್ಶ ಕೃಷಿಕ ಶ್ರೀ ಹೆಚ್.ಆರ್.ಚಂದ್ರೇಗೌಡರು.
Categories
ಶ್ರೀ ಹೆಚ್.ಆರ್. ಚಂದ್ರೇಗೌಡ
