ಪ್ರಮುಖ ಘಟನಾವಳಿಗಳು:
1500: ಪೋರ್ಚುಗೀಸ್ ಪರಿಶೋಧಕ ಮತ್ತು ನಾವಿಕ ಪೆಡ್ರೋ ಆಲ್ವಾರೆಜ್ ಭಾರತದ ಕ್ಯಾಲಿಕಟ್ಟಿಗೆ ಆಗಮಿಸಿ ಭಾರತದಲ್ಲಿ ಮೊದಲ ಯೂರೋಪಿಯನ್ ಕಾರ್ಖಾನೆಯನ್ನು ತೆರೆದರು.
1788: ನ್ಯೂಯಾರ್ಕ್ ನಗರ ಅಮೇರಿಕಾದ ಮೊದಲ ರಾಜಧಾನಿ ಆಯಿತು.
1789: ಅಮೇರಿಕಾದ ಸರ್ಕಾರವು ತನ್ನ ಮೊದಲ ಸಾಲವನ್ನು ಪಡೆಯಿತು.
1881: ಅಮೇರಿಕಾದ ಲೇವಿಸ್ ಹಾರ್ವಡ್ ಲ್ಯಾಟಿಮರ್ ಕಾರ್ಬನ್ ಫಿಲಮೆಂಟ್ ಇರುವ ವಿದ್ಯುತ್ ದೀಪವನ್ನು ಕಂಡುಹಿಡಿದರು ಮತ್ತು ಅದಕ್ಕಾಗಿ ಪೇಟೆಂಟ್ ಪಡೆದರು.
1898: ಚಲನಚಿತ್ರ ಮಾಡಲು ಬಳಸುವ ಸೆಲುಲಾಯಿಡ್ ಛಾಯಾಗ್ರಹಣದ ಪೊರೆಗೆ ಹ್ಯಾನಿಬಲ್ ವಿಲ್ಲಿಸ್ಟನ್ ಗುಡ್ವಿನ್ ಪೇಟೆಂಟ್ ಪಡೆದರು.
1948: ಭಾರತದ ಉಪ ಪ್ರಧಾನ ಮಂತ್ರಿ ವಲ್ಲಭಾಯಿ ಪಟೇಲ್ ಹೈದರಾಬಾದನ್ನು ಭಾರತೀಯ ಒಕ್ಕೂಟದಲ್ಲಿ ಸಂಯೋಜಿಸಲು ಸೈನ್ಯಕ್ಕೆ ಆದೇಶ ನೀಡಿದರು.
1948: ನ್ಯೂಯಾರ್ಕಿನ ನಗರದಲ್ಲಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಪ್ರಾರಂಭಿಸಲಾಯಿತು. ಕಲೆಗಳನ್ನು ಪ್ರದರ್ಶಿಸುವಲ್ಲಿ ಪರಿಣತಿ ಪಡೆದ ಮೊದಲ ಸಾರ್ವಜನಿಕ ಶಾಲೆ ಇದು.
1949: ಅಮೇರಿಕಾದ ಲೇಡೀಸ್ ಪ್ರೊಫೆಷನಲ್ ಗಾಲ್ಫ್ ಅಸೋಸಿಯೇಷನ್ ಅನ್ನು ಸ್ಥಾಪಿಸಲಾಯಿತು.
1955: ಸ್ವಿಜರ್ಲ್ಯಾಂಡಿನ ಸಂಶೋಧಕ ಜಾರ್ಜ್ ಡೆ ಮೆಸ್ಟ್ರಾಲ್ “ವೆಲ್ಕ್ರೋ” ಪೇಟೆಂಟ್ ಪಡೆದರು.
1956: ಐಬಿಎಂ ವಿಶ್ವದ ಮೊದಲ ಹಾರ್ಡ್ ಡಿಸ್ಕ್ ಆದ “ಐಬಿಎಂ 305” ಉತ್ಪಾದಿಸಿ ಪರಿಚಯಿಸಿತು. ಇದು 5 ಎಂಬಿಗಳ ದತ್ತಾಂಶವನ್ನು ಸಂಗ್ರಹಿಸಬಹುದಾಗಿತ್ತು.
1971: ವಿಶ್ವ ಹಾಕಿ ಅಸೋಸಿಯೇಷನ್ ರೂಪಿತವಾಯಿತು.
1977: ಮೊದಲ ಬಾರಿಗೆ ಡೀಸಲ್ ಬಳಸಿ ಉಪಯೋಗಿಸಬಹುದಾದ ಮೋಟಾರು ವಾಹನವನ್ನು ಜೆನೆರಲ್ ಮೋಟಾರ್ಸ್ ಪರಿಚಯಿಸಿತು.
1998: ಹ್ಯಾಕರ್ಸ್ ಆಕ್ರಮಣದನಂತರ ನ್ಯೂಯಾರ್ಕ್ ಟೈಮ್ಸ್ ತನ್ನ ವೆಬ್ ಸೈಟ್ ಅನ್ನು ಮುಚ್ಚಿತು.
2000: ವೈದ್ಯಕೀಯ ಸಮುದಾಯ ಮತ್ತು ಹಲವು ರಾಜ್ಯ ಸರ್ಕಾರಗಳಿಂದ ಪ್ರತಿಭಟನೆ ನಡೆದರೂ ಸಹ ಅಯೋಡಿನ್ ಇಲ್ಲದ ಉಪ್ಪಿನ ಬಳಕೆಯನ್ನು ನಿಷೇಧದ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆಯಿತು.
2008: ಭಾರತದ ದೆಹೆಲಿಯಲ್ಲಿ ಬಾಂಬ್ ಸ್ಪೋಟದಿಂದಾಗಿ 30 ಜನ ಸಾವನ್ನಪ್ಪಿ 130 ಜನ ಗಾಯಗೊಂಡರು.
ಪ್ರಮುಖ ಜನನ/ಮರಣ:
1893: ಪ್ರಾರ್ಥನಾ ಸಮಾಜದ ಸಂಸ್ಥಾಪಕರಲ್ಲೊಬ್ಬರಾದ ಮಾಮ ಪರಮಾನಂದ್ ನಿಧನರಾದರು.
1928: ಪ್ರಮುಖ ಹಿಂದಿ ಲೇಖಕ ಶ್ರೀಧರ್ ಪಾಠಕ್ ನಿಧನರಾದರು.
1929: ಭಾರತೀಯ ಕಾರ್ಯಕರ್ತ ಜತಿಂದ್ರ ನಾಥ್ ದಾಸ್ ನಿಧನರಾದರು.
1973: ಭಾರತೀಯ ಕವಿ ಮತ್ತು ತತ್ವಜ್ಞಾನಿ ಸಜ್ಜದ್ ಜಹೀರ್ ನಿಧನರಾದರು.
1975: ಭಾರತೀಯ ಹಾಡುಗಾರ ಮತ್ತು ಸಂಗೀತಶಾಸ್ತ್ರಜ್ಞ ಮುಡಿಕೊಂಡನ್ ವೆಂಕಟರಮಣ ಐಯ್ಯರ್ ನಿಧನರಾದರು.
1980: ಭಾರತೀಯ ಫೀಲ್ಡ್ ಹಾಕಿ ಆಟಗಾರ ವಿರೆನ್ ರಸ್ಕ್ವಿನ್ ಜನಿಸಿದರು.
1984: ಬ್ರಹ್ಮಾನಂದ್ ಸಂಸ್ಥೆಗಳ ಸಂಸ್ಥಾಪಕ ಸ್ವಾಮಿ ಬ್ರಹ್ಮಾನಂದ ನಿಧನರಾದರು.
1997: ಕಲ್ಕತ್ತಾದಲ್ಲಿ ರಾಜ್ಯ ಗೌರವಗಳೊಂದಿಗೆ ಮದರ್ ಥೆರೆಸಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
2012: ಭಾರತದ 21ನೇ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರ ನಿಧನರಾದರು.