ಇದೊಂದು ಮಕ್ಕಳ ಕವನ ಸಂಕಲನ. ಪ್ರಾಥಮಿಕ ಶಾಲಾ ಹಂತದ ಮಕ್ಕಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಇಲ್ಲಿನ ಕವನಗಳನ್ನು ರಚಿಸಲಾಗಿದೆ. ಆ ಮಕ್ಕಳು ಇವುಗಳ ಸದುಪಯೋಗ ಪಡೆದರೆ ನನ್ನ ಶ್ರಮ ಸಾರ್ಥಕವಾಗುವುದು.
ಈ ಕವನ ಸಂಗ್ರಹವು ಬೆಳಕು ಕಾಣಲು ಕಾರಣರಾದವರು ನನ್ನ ಆತ್ಮೀಯರೂ, ಹಿತೈಷಿಗಳೂ ಆದ ಬೆಂಗಳೂರು ಶ್ರೀ ಪ್ರೇಮಸಾಯಿ ಪ್ರಕಾಶನದ ಶ್ರೀ ಎ.ಎಸ್. ಭಟ್ ಮತ್ತು ಅವರ ಸಾಹಿತಿ ಪತ್ನಿ ಸೌ| ಪ್ರೇಮಾಭಟ್ ಅವರು. ಅವರಿಬ್ಬರ ಉಪಕಾರವನ್ನು ನಾನೆಂದೂ ಮರೆಯಲಾರೆ.
ಇಲ್ಲಿನ ಕವನಗಳನ್ನು ಓದಿ ನೋಡಿದವರು, ಮುನ್ನುಡಿಯ ಮೂಲಕ ನಾಲ್ಕು ಮೆಚ್ಚು ನುಡಿಯಾಡಿ, ಶುಭ ಹಾರೈಸಿದವರು ಹಿರಿಯ ಸಾಹಿತಿ ಮಿತ್ರರಾದ ಶ್ರೀ ಹಾ.ಮಾ.ನಾ. ಅವರು ಶ್ರೀಯುತರಿಗೆ ನನ್ನ ಹೃತ್ಪೂರ್ವಕ ವಂದನೆಗಳು.
ಅಂದವಾದ ಚಿತ್ರಗಳ ಮೂಲಕ ಈ ಪುಸ್ತಕದ ಮೆರುಗನ್ನು ಹೆಚ್ಚಿಸಿದವರು ಕಲಾವಿದ ಮಿತ್ರ ಶ್ರೀ ಮೋನಪ್ಪ ಅವರು ಇದರ ಅಕ್ಷರ ಜೋಡಣೆಯ ಕಾರ್ಯ ನಿರ್ವಹಿಸಿದವರು ಪ್ರತಿಭಾ ಪ್ರಿಂಟರ್ಸ್, ಬೆಂಗಳೂರು ಅವರು, ಇದನ್ನು ಅಂದವಾಗಿ ಮುದ್ರಿಸಿದವರು ಶ್ರೀ ಲಕ್ಷ್ಮೀ ಆರ್ಟ್ ಪ್ರಿಂಟರ್ಸ್, ಬೆಂಗಳೂರು ಅವರು. ಅವರೆಲ್ಲರಿಗೂ ನಾನು ಆಭಾರಿ.
– ಪಳಕಳ ಸೀತಾರಾಮ ಭಟ್ಟ
ಶಿಶು ಸಾಹಿತ್ಯ ಮಾಲೆ
ಮಿತ್ತಬೈಲು
೧೭-೫-೧೯೯೯
Leave A Comment