ಮಕ್ಕಳಿಗೆ ನಮ್ಮ ರಾಷ್ಟ್ರೀಯ ಮೃಗವಾದ ಹುಲಿಯ ದೇಹ ಲಕ್ಷಣಗಳು, ಜೀವನವಿಧಾನ, ಆಹಾರಾಭ್ಯಾಸ ಮತ್ತು ಗುಣ ಸ್ವಭಾವಗಳ ಪರಿಚಯ ಮಾಡಿಸುವುದು ಈ ಕೃತಿ ರಚನೆಯ ಉದ್ದೇಶ. ಹೇಳಬೇಕಾದುದನ್ನು ಕಥಾ ರೂಪದಲ್ಲಿ ತಿಳಿಸುವ ಪ್ರಯತ್ನ ಇಲ್ಲಿ ನಡೆದಿದೆ. ಕಾಡುಪ್ರಾಣಿಯಾದ ಹುಲಿಯಲ್ಲೂ ಮನುಷ್ಯರಲ್ಲಿ ಕಾಣಿಸಿದ ಕೆಲವು ಗುಣ ವಿಶೇಷಗಳಿವೆ. ಹುಲಿ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಾವೇನು ಮಾಡಿದ್ದೇವೆ? ಈ ಪ್ರಯತ್ನದಲ್ಲಿ ನಾವೆಷ್ಟು ಸಫಲರಾಗಿದ್ದೇವೆ? ಇವೇ ಮೊದಲಾದ ವಿಚಾರಗಳ ಕಡೆಗೂ ಬೆಳಕು ಚೆಲ್ಲಲು ಇಲ್ಲಿ ಯತ್ನಿಸಲಾಗಿದೆ. ಹುಲಿಗಳ ಸಂತತಿ ನಾಶ ಹೊಂದುತ್ತಿರುವ ಇಂದಿನ ಸನ್ನಿವೇಶದಲ್ಲಿ, ಇಂತಹದೊಂದು ಪ್ರಯತ್ನ ಸ್ವಾಗತಾರ್ಹ ಎನ್ನುವ ಅನಿಸಿಕೆ ನನ್ನದು. ಈ ಕೃತಿ ರಚನೆಯಲ್ಲಿ ಶ್ರೀ ಎಸ್.ಎಫ್. ಉಪ್ಪಿನ ಅವರ “ನಮ್ಮ ವನ್ಯ ಪ್ರಾಣಿಗಳು” ಮತ್ತು ಅಜ್ಜಂಪುರ ಕೃಷ್ಣ ಸ್ವಾಮಿ ಅವರ “ವನಸಿರಿ” ಈ ಪುಸ್ತಕಗಳು ನನಗೆ ನೆರವಾಗಿವೆ. ಸಂಬಂಧಪಟ್ಟ ಲೇಖಕರಿಗೆ ನಾನು ಆಭಾರಿ.
ಈ ಪುಸ್ತಕವನ್ನು ಪ್ರಕಟಿಸಿ, ಉಪಕಾರ ಮಾಡಿದವರು ನನ್ನ ನಿರಂತರ ಪ್ರೋತ್ಸಾಹಕರಾದ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ ಶ್ರೀ ಕೆ. ಭುವನಾಭಿರಾಮ ಉಡುಪರು. ಅವರಿಗೆ ನಾನು ಚಿರಋಣಿ.
ಈ ಪುಸ್ತಕಕ್ಕೆ ಚಿತ್ರಗಳನ್ನು ಬರೆದುಕೊಟ್ಟು ಸಹಕರಿಸಿದ ಮಿತ್ರ ಬಾಲ ಮಧುರಕಾನನ ಮತ್ತು ನನ್ನ ಮೊಮ್ಮಗಳು ಪ್ರೀತಿ ಎಚ್. ರಾವ್, ಇದನ್ನು ಅಂದವಾಗಿ ಮುದ್ರಿಸಿದ ಕಿನ್ನಿಗೋಳಿ ಯುಗಪುರುಷ ಗ್ರಾಫಿಕ್ಸ್ ನ ಗೆಳೆಯರು ಇವರೆಲ್ಲರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಕಿರುಹೊತ್ತಗೆಯಿದು ಹೊರಬರುತ್ತಿರುವ ಈ ಸಂದರ್ಭದಲ್ಲಿ ಹಿಂದೆ ನನಗೆ ಮಹದುಪಕಾರ ಮಾಡಿದ್ದ ಹಿರಿಯರಾದ ದಿ.ಕೊ.ಅ. ಉಡುಪ ಮತ್ತು ಧರ್ಮದರ್ಶಿ. ಹರಿಕೃಷ್ಣ ಪುನರೂರು ಅವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ.
ಪಳಕಳ ಸೀತಾರಾಮ ಭಟ್ಟ
ಶಿಶುಸಾಹಿತ್ಯ ಮಾಲೆ.
ಮಿತ್ತಬೈಲು
Leave A Comment