ಒಂದ್ ಹಾರ್ತ ಕುಕ್ಕ ಒಂದ್ ಕೂರ್ತ ಕುಕ್ಕ
ಒಂದ್ ಬಡ್ತಿಗೆ ಇಟ್ರೆ ಒಂಬತ್ತ್ ಹೆಡ್ಗಿ ಮಾಯ್ನ್ಕಾಯ್ ಬಿತ್ತ್
ಚೊಟ್ಟಿಗ್ ಗೆಂಟ್ಲಾಕಿ ಮಂಡ್ಕಿಗ್ ಗೆಂಟ್ಹಾಕಿ ಮನಿಗ್ ತರ್ವಂಥವ್ನಾದ
ಹೆಣ್ಣೇ ಅಂದ್ರ್ಹೆಣ್ಣ್ ಮಾತಾಡ್ಲಿಲ್ಲೆ
ಥೂರಂಡೆ ಅಂದ್ರ್ಕೂಡ್ಲೆ ಏನ್ ಸ್ವಾಮಿ ಅಂದ್ ಕೇಳ್ದಳೋ |
ಏಳ್ ನಾಯೀನ್ ಕಟ್ಕಂಡ್ ಏಳ್ ಹೊಲನ ಬ್ಯಾಂಟಿಗ್ ಹೋದನೋ
ಹಿಡಿದಿ ಎಂದ್ರ್ ಹಿಡಿಲಿಲ್ಲೆ ಎಡಗಾಲಗೊದ್ದನೋ
ಏಳ್ ಮರಿ ಹೆಕ್ಕಿತೋ ಏಳ್ ಮಿಗೀನ್ ಹಿಡಿಯಿತೋ
ಕೋಡಿಗ್ ಗೆಂಟ್ಹಾಕಿ ಕೊಳ್ಚಿಗ್ ಗೆಂಟ್ಹಾಕಿ ಮನಿಗ್ಹೊತ್ತ್ ತಂದನೋ
ಹೆಣ್ಣೇ ಅಂದ್ರ್ ಹೆಣ್ಣ್ ಮಾತಾಡ್ಲಿಲ್ಲೆ
ಥೂ ರಂಡೆ ಅಂದ್ರ್ ಕೂಡ್ಲೆ ಏನ್ಸ್ವಾಮಿ ಅಂದ್ ಕೇಳ್ದಳೋ |
ಏಳ್ ಹರಿನೇ ಕಟ್ಕಂಡ್ ಏಳ್ಹೊಳಿ ಸಾನಕ್ಹೋದನೋ
ಏಳ್ ಹೆಡ್ಗಿ ಸಿಗ್ಡಿ ಸಿಕ್ಕುವಂತಾಯಿತೋ
ಕಡ್ಡಕ್ ಗೆಂಟ್ಹಾಕಿ ಮೀಸೀಗ್ ಗೆಂಟ್ಹಾಕಿ ಮನಿಗ್ಹೊತ್ತ್ ತಂದನೋ
ಹೆಣ್ಣೆ ಅಂದ್ರ್ ಹೆಣ್ಣ್ ಮಾತಾಡ್ಲಿಲ್ಲೆ
ಥೂ ರಂಡೆ ಅಂದ್ರ್ ಕೂಡ್ಲೆ ಏನ್ಸ್ವಾಮಿ ಅಂದ್ ಕೇಳ್ದಳೋ !
ಒಂಬತ್ತ್ ಹೆಡ್ಗಿ ಮಾಯ್ನ್ಕಾಯಿ ಚಟ್ನಿ ಮಾಡಂತ್ಹೇಳ್ದನೋ
ಏಳ್ ಮಿಗೀನ್ ಕೋಡ್ ತೆಗ್ದೇ, ಕೊಳ್ಚಿ ತೆಗ್ದೇ ಪಲ್ಯ ಮಾಡಂತ್ಹೇಳ್ದನೋ
ಏಳ್ ಹೆಡ್ಗಿ ಸಿಗ್ಡೀನ್ ಗಡ್ಡ ತೆಗ್ದೇ ಮೀಸಿ ತೆಗ್ದೇ ಪಲ್ಯ ಮಾಡಂತ್ಹೇಳ್ದನೋ
ಹತ್ತ್ ಖಂಡ್ಗ ಅಕ್ಕಿನ ಅನ್ನು ಮಾಡಂತ್ಹೇಳ್ದನೋ
ಹೂಂ ಸ್ವಾಮಿ, ಮಾಡಂತ್ಹೇಳೂಕ್ ಉಪ್ಪಿಲ್ಲ್ಯಲೆ ಮೆಣ್ಸಿಲ್ಲೆ
ಹಾಂಗೇ ಹೊಸ್ಮಣ್ನಾಯ್ಕ ಕರ್ತರ್ ಮನಿಗೆ ಹೋದನೋ
ಹೊಸ್ಮಣ್ನಾಯ್ಕ ಏನ್ಬಂದೆ ಅಂದ್ ಕರ್ತರ್ ಕೇಳ್ದರೋ
ಏನಿಲ್ಲೆ ಸ್ವಾಮಿ ಉಪ್ಪಿಲ್ದೆ ಮೆಣ್ಸಿಲ್ದೆ ಹಾಂಗೆ ಇತ್ತ್ಬಂದಿ ಎಂದನೋ
ಥೂ ಬಾಳ್ ತೀರಿದ ಸೂಳಿಮಗನೇ ಅಂದರು
ಬಾಳಿ ಇತ್ತು ತೊಂಡಿ ಇತ್ತು ಹೀರಿ ಇತ್ತು ಚಂಪ್ತಿ ಇತ್ತು
ಸನ್ವಾರ್ ಸನ್ವಾರ್ಕಾಗಿ ನಿಮ್ಗೊಂದ್ ಪಲ್ಯದ್ಕಾಯಿ ಕೊಡ್ವೆನು
ಥೂ ಹೀಸ್ ಮುರಿದ ಸೂಳಿಮಗನೇ ಅಂದರು
ಹೀಸಿತ್ತು ನೇಲಿತ್ತು ನೊಗವಿತ್ತು ಬ್ಯಾಸಾಯಿತ್ತು
ನಿಮ್ಗೊಂದ್ ಜೋಡ್ಗಂಟ ಎಬ್ವೆನು
ಹಾಂಗೇ ಹೊಸ್ಮಣ್ನಾಯ್ಕ ಮನಿಗ್ ಬಂದನೋ
ಹೆಣ್ಣೇ ಅಂದ್ರ್ ಹೆಣ್ಣ್ ಮಾತಾಡ್ಲಿಲ್ಲೆ
ಥೂರಂಡೆ ಅಂದ್ರ್ ಕೂಡ್ಲೆ ಎನ್ಸ್ವಾಮಿ ಅಂದ್ಕೇಳ್ದಳೋ
ಅಡ್ಗಿ ಎಲ್ಲಾ ಆಯ್ತಾ ಹೆಣ್ಣೇ ಅಂದ್ ಕೇಳ್ದನೋ
ಹೂಂ ಸ್ವಾಮಿ ಅಂದ್ ಹೇಳ್ದಳೋ
ಹಾಂಗೇ ಹೊಸ್ಮಣ್ನಾಯ್ಕ ಸಾನ ಸಂಜಾನ ಪೂರೈಸ್ದನೋ
ಒಂದ್ಹತ್ತಾನ್ ಗೈದ್ದಿ ಹರನ ಒಂದ್ ಬಾಳೆಲಿ ತಂದಿರ್ಸಿದ್ನೋ
ಒಂದ್ ಚೌಕದ ಮಣೇನ್ ತಂದಿರ್ಸಿದ್ನೋ
ಹೆಣ್ಣೇ ಅಂದ್ರ್ ಹೆಣ್ಣ್ ಮಾತಾಡ್ಲಿಲ್ಲೆ
ಥೂರಂಡೆ ಅಂದ್ರ್ ಕೂಡ್ಲೆ ಏನ್ ಸ್ವಾಮಿ ಅಂದಳೋ
ಎಲ್ಲಾನೂ ತಂದ್ ಬಳ್ಸ್ ಹೆಣ್ಣೇ ಅಂದ್ ಕೇಳ್ದನೋ
ಹತ್ತ್ ಖಂಡ್ಗ ಅಕ್ಕಿ ಅನ್ನ್ವ ಬಳ್ಸಿದಳೋ
ಏಳ್ ಮಿಗೀನ್ ಪಲ್ಯವ ಬಳ್ಸಿದಳೋ
ಒಂಬತ್ತ್ ಹೆಡ್ಗಿ ಮಾಯ್ನ್ಕಾಯ್ ಚಟ್ನೀನೆ ಬಳ್ಸಿದಳೋ
ಮತ್ತೇನಿತ್ತಂದಾ ಹೊಸ್ಮಣ್ನಾಯ್ಕ ಕೇಳ್ದನೋ
ಮಗೀಗ್ ಮೂರನ್ನ ಮಾತ್ರ ಬೆಚ್ಚಿದ್ದೆ ಅಂತ್ಹೇಳ್ದಳೋ
ಮಗೀನ್ ಬಾಯ್ಗ್ ಮಣ್ಹಾಕ್ ಅಂತ್ ಹೇಳ್ದನೋ
ಮತ್ತೇನಿತ್ತಂದ್ ಹೊಸ್ಮಣ್ನಾಯ್ಕ ಕೇಳ್ದನೋ
ಮತ್ತೇನಿಲ್ಲ ಹತ್ತ್ಖಂಡ್ಗ ಅಕ್ಕಿಯನ್ದ ತೆಳಿ ಇತ್ತೆಂದ್ ಹೇಳ್ದಳೋ
ಅದಷ್ಟ್ ತಂದ್ಹಾಕೆಂದ್ ಹೊಸ್ಮಣ್ನಾಯ್ಕ ಹೇಳ್ದನೋ
ಕಟ್ಟುಡ್ದಾರ ಕಡ್ಡೇ ಹೋಯ್ತ್ ; ಹುಲುದಾರ ಹಕ್ಕೀ ಹೋಯ್ತ್
ಕರ್ತರ್ಮನಿಗ್ ಸುದ್ದಿ ಹೋಯ್ತ್.
* ಹೊಸ್ಮಣ್ನಾಯ್ಕನ ಕತೆ; ಐತಾಳ ಚಂದ್ರಶೇಖರ ಗುಂಡ್ಮಿ (ಸಂ) ಕೈಲಿಥಿ ಕರೆದ ನೊರೆಹಾಲು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೦
Leave A Comment