Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಅನಂತ ತೇರದಾಳ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಅನಂತ ತೇರದಾಳ ಪ್ರಮುಖರು. ಆರು ದಶಕಕ್ಕೂ ಮೀರಿ ಸಂಗೀತಸೇವಾ ನಿರತ ಗಾಯಕಮಣಿ.
ಬೆಳಗಾವಿ ಜಿಲ್ಲೆಯ ಗಡಿನಾಡ ಪ್ರತಿಭೆ ಅನಂತ ತೇರದಾಳರ ಸ್ವರಪ್ರೇಮಕ್ಕೆ ಅಮ್ಮ ಹಾಡುತ್ತಿದ್ದ ದೇವರನಾಮವೇ ಸ್ಫೂರ್ತಿ. ಏಳನೇ ವಯಸ್ಸಿಗೆ ಹಾರ್ಮೋನಿಯಂ ವಾದಕ ಬಾಬುರಾವ್ ಬೋರಕರರಲ್ಲಿ ಸಂಗೀತಾಭ್ಯಾಸ. ಬಿ.ಡಿ. ಜೋಷ್ಯ ಅವರಿಂದ ಗ್ವಾಲಿಯರ್ ಘರಾಣೆ ತರಬೇತಿ. ಸಂಗೀತ ಮಾಂತ್ರಿಕ ಪಂಡಿತ್ ಭೀಮಸೇನ ಜೋಷಿ ಅವರ ಶಿಷ್ಯಗಾರಿಕೆಯ ಭಾಗ್ಯ ಒಲಿದದ್ದು ಪೂರ್ವಜನ್ಮದ ಸುಕೃತ. ‘ಸಂಗೀತ ವಿಶಾರದ’ ಪದವಿ ಬಳಿಕ ಸಂಗೀತವೇ ಬದುಕು-ಉಸಿರು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾಗಿ ಬಡ್ತಿ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದುಬೈ, ಅಬುದಾಬಿ, ಶಾರ್ಜಾ ಸೇರಿದಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಸಭೆಗಳಲ್ಲಿ ಸ್ವರಸೇವೆ. ರಸಿಕರ ಮನಗೆದ್ದ ಹಾಡುಗಾರಿಕೆ. ಕರ್ನಾಟಕ ಕಲಾಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರು.