Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅಶೋಕಬಾಬು ನೀಲಗಾರ

ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿಗೈದು ಸೈ ಎನಿಸಿಕೊಂಡ ಅಶೋಕಬಾಬು ನೀಲಗಾರ ಅಪ್ಪಟ ದೇಸೀ ಪ್ರತಿಭೆ. ರಂಗಭೂಮಿ, ಕಿರುತೆರೆ, ಚಲನಚಿತ್ರ ಕ್ಷೇತ್ರದಲ್ಲೂ ಗುರುತು ಮೂಡಿಸಿದ ಬಹುಮುಖಿ ಸಾಧಕ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಶಿಂಧಿಕುರಬೆಟ್ಟ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಅಶೋಕಬಾಬು ಹೆಚ್ಚು ಕಲಿತವರಲ್ಲ, ಓದಿದ್ದು ಮಾಧ್ಯಮಿಕ ಶಿಕ್ಷಣದವರೆಗಷ್ಟೆ, ಹೊಟ್ಟೆ ಹೊರೆಯುವ ಲ್ಯಾಬೋರೇಟಲಿಯಲ್ಲಿ ದುಡಿಯುತ್ತಲೇ ಅನುಭವದ ಬುತ್ತಿ ತುಂಬಿಕೊಂಡವರು. ಅನುಭಾವಕ್ಕೆ ಅಕ್ಷರ ಲೇಪಿಸಿ ಸಾಹಿತ್ಯಲೋಕ ಪ್ರವೇಶಿಸಿ ಎತ್ತಿದ ಅವತಾರಗಳು ಹತ್ತಾರು, ಲೇಖಕ, ಕಾದಂಬರಿಕಾರ, ಕವಿ, ನಾಟಕಕಾರ, ಹಾಡುಗಾರ, ರಂಗನಟ, ನಿರ್ದೇಶಕ, ಸಾಮಾಜಿಕ ಕಾರ್ಯಕರ್ತರಾಗಿ ಬಹುಮುಖಿ ಕಾರ್ಯ. ಮಾಗಿದ ಕನಸು, ಬಿಡಿಸಲಾಗದ ಬೆಸುಗೆ, ನೆಲಕಚ್ಚಿದನೌಕೆ, ಕನಸು-ಮನಸು, ಓ ಪ್ರೇಮಿ ಎಲ್ಲಿರುವೆ ಮುಂತಾದ ಸಾಮಾಜಿಕ ಕಾದಂಬರಿ, ಹಲವು ಕಥಾಸಂಕಲನ, ನಾಟಕಗಳು, ಹತ್ತಕ್ಕೂ ಹೆಚ್ಚು ಧ್ವನಿಸುರುಳಿನಾಟಕಗಳು, ಮೂರು ಆಕಾಶವಾಣಿ ನಾಟಕ, ಭಜನಾಪದಗಳನ್ನು ಸೇರಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಮೆ. ನಟ-ಗಾಯಕನಾಗಿ ರಂಗದ ಮೇಲೆ ಬೆಳಗಿದ ಹಳ್ಳಿಹೈದ. ಕಿರುತೆರೆ–ಚಲನಚಿತ್ರದಲ್ಲೂ ನಟಿಸಿ ಮೋಡಿ ಮಾಡಿದರೂ ಎಲೆಮರೆಯ ಕಾಯಿಯಂತೆಯೇ ಉಳಿದಿರುವ ಪ್ರತಿಭಾವಂತರು.