Categories
e-ದಿನ

ಏಪ್ರಿಲ್-11

ಪ್ರಮುಖಘಟನಾವಳಿಗಳು:

1689: ಮೂರನೆಯ ವಿಲಿಯಂ ಮತ್ತು ಎರಡನೇ ಮೇರಿ ಅವರನ್ನು ಜಂಟಿಯಾಗಿ ಗ್ರೇಟ್ ಬ್ರಿಟನ್ನಿನ ಸಾಮ್ರಾಜ್ಯಾಧಿಪತಿಗಳನ್ನಾಗಿಸಲಾಯಿತು.

1919: ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಸ್ಥಾಪಿಸಲಾಯಿತು.

1957: ಯುನೈಟೆಡ್ ಕಿಂಗ್ಡಂ ಸಿಂಗಪೂರಿನ ಸ್ವಯಂ ಆಡಳಿತಕ್ಕೆ ಒಪ್ಪಿಗೆ ನೀಡಿತು.

1968: ಅಮೆರಿಕದ ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ ಅವರು ಮಾರಾಟ, ಬಾಡಿಗೆ ಮತ್ತು ಗೃಹ ಸಾಲಗಳಿಗೆ ಭೇದಭಾವಗಳನ್ನು ನಿಷೇದಿಸುವ ‘ಸಿವಿಲ್ ರೈಟ್ಸ್ ಕಾಯದೆ’ಗೆ ಸಹಿ ಮಾಡಿದರು.

1976: ಆಪಲ್ ಸಂಸ್ಥೆಯ ಮೊದಲ ಕಂಪ್ಯೂಟರ್ ‘ಆಪಲ್ ಕಂಪ್ಯೂಟರ್ 1’ ಅಥವಾ ‘ಆಪಲ್ I’ ಸೃಷ್ಟಿಗೊಂಡಿತು.

1982: ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರು 1981ರ ಸಾಲಿನ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಪ್ರೀತಂ ಅವರ ‘ಕಾಗಜ್ ತೆ ಕನ್ವಾಸ್’ ಕವನ ಸಂಕಲನಕ್ಕೆ ಈ ಗೌರವವನ್ನು ಪ್ರಕಟಿಸಲಾಯಿತು.

2006: ಇರಾನ್ ಯುರೇನಿಯಮ್ ಶ್ರೀಮಂತಿಕೆಯನ್ನು ಸ್ವಯಂ ಗಳಿಸಿಕೊಂಡಿದೆ ಎಂದು ಇರಾನಿನ ಅಧ್ಯಕ್ಷರಾದ ಮಹಮದ್ ಅಹಮದಿನೆಜಾದ್ ಘೋಷಿಸಿದರು.

2007: ವೆಸ್ಟ್ ಇಂಡೀಸಿನ ಪ್ರಸಿದ್ಧ ಕ್ರಿಕೆಟ್ ಆಟಗಾರ ಬ್ರಿಯನ್ ಲಾರಾ ಅವರು, ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಟಿಗೆ ವಿದಾಯ ಹೇಳುವುದಾಗಿ ಪ್ರಕಟಿಸಿದರು.

2008: ಪ್ರೇಮದ ಸಂಕೇತ ಎನಿಸಿಕೊಂಡಿರುವ ತಾಜಮಹಲಿನ ರೂವಾರಿ ಶಹಜಹಾನ್ ಬಳಸುತ್ತಿದ್ದ ಚಿನ್ನದ ಲೇಪವಿರುವ ಕಠಾರಿಯನ್ನು ಲಂಡನ್ನಿನಲ್ಲಿ ಹರಾಜು ಹಾಕಿದಾಗ 15ಲಕ್ಷ ಪೌಂಡುಗಳಿಗೆ ಹರಾಜಾಯಿತು.

ಪ್ರಮುಖಜನನ/ಮರಣ:

1755: ಇಂಗ್ಲಿಷ್ ವೈದ್ಯ ಜೇಮ್ಸ್ ಪಾರ್ಕಿನ್ಸನ್ ಇಂಗ್ಲೆಂಡಿನ ಶೋರ್ಡಿಚ್ ಎಂಬಲ್ಲಿ ಜನಿಸಿದರು. ಈತ ಕೈ ನಡುಕದ ರೋಗವನ್ನು ಮೊತ್ತ ಮೊದಲಿಗೆ ವಿವರಿಸಿದ. ಈತನ ಹೆಸರನ್ನೇ ಈ ರೋಗಕ್ಕೆ (ಪಾರ್ಕಿನ್ಸನ್ ಕಾಯಿಲೆ ಎಂದು) ಇಡಲಾಯಿತು.

1827: ಭಾರತೀಯ ವಿದ್ವಾಂಸ, ಸಮಾಜ ಸುಧಾರಕ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಜ್ಯೋತಿರಾವ್ ಗೋವಿಂದರಾವ್ ಫುಲೆ ಪುಣೆಯಲ್ಲಿ ಜನಿಸಿದರು. ಇವರು ಅಸ್ಪೃಶ್ಯತೆ, ಜಾತಿ ಪದ್ಧತಿಗಳ ವಿರುದ್ಧ ಹೋರಾಟ, ಸ್ತ್ರೀ ವಿಮೋಚನೆ, ಸ್ತ್ರೀ ಶಿಕ್ಷಣ, ಸ್ತ್ರೀಯರಿಗೆ ಮತ್ತು ಬಡ ಜನರಿಗೆ ಶಾಲಾ ನಿರ್ಮಾಣ ಮುಂತಾದವುಗಳ ಬಗ್ಗೆ ಬಹಳಷ್ಟು ಕೆಲಸ ಮಾಡಿದರು. ಅವರು ಮತ್ತು ಅವರ ಶ್ರೀಮತಿ ಸಾವಿತ್ರಿ ಭಾಯಿ ಫುಲೆ ಅವರು ಶಿಕ್ಷಣ ಕ್ರಾಂತಿಗಾಗಿ ಕೆಲಸ ಮಾಡಿದ ಮಹತ್ವದ ವ್ಯಕ್ತಿಗಳೆನಿಸಿದ್ದಾರೆ.

1869: ತಮ್ಮ ಪತಿ ಮಹಾತ್ಮ ಗಾಂಧಿಯವರೊಂದಿಗೆ ನಿರಂತರವಾಗಿದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಹೋರಾಟಗಾರ್ತಿಯಾಗಿ, ಸಮಾಜ ಸೇವಕಿಯಾಗಿ ಅನನ್ಯ ಸೇವೆ ಸಲ್ಲಿಸಿದ ಕಸ್ತೂರಬಾ ಗಾಂಧಿ ಅವರು ಗುಜರಾತಿನ ಪೋರ್ಬಂದರಿನಲ್ಲಿ ಜನಿಸಿದರು

1869: ನಾರ್ವೆಯ ಶಿಲ್ಪಿ, ನೊಬೆಲ್ ಶಾಂತಿ ಪದಕದ ವಿನ್ಯಾಸಕ ಗುಸ್ತಾವ್ ವಿಗೆಲ್ಯಾಂಡ್ ಅವರು ನಾರ್ವೆ ದೇಶದ ಹಾಲ್ಸೆ ಓಗ್ ಹರ್ಕ್ ಮಾರ್ಕ್ ಬಳಿಯಲ್ಲಿ ಜನಿಸಿದರು.

1908: ಅಕಿಯೋ ಮೊರಿಟಾ ಅವರೊಂದಿಗೆ ಸೇರಿ ಪ್ರಸಿದ್ಧ ಸೋನಿ ಉದ್ಯಮವನ್ನು ಹುಟ್ಟುಹಾಕಿದ ಮಸರು ಇಬುಕ ಅವರು ಜಪಾನಿನ ನಿಕ್ಕೋ ನಗರದಲ್ಲಿ ಜನಿಸಿದರು.

1887: ಪ್ರಸಿದ್ಧ ಕಲಾವಿದ ಜಾಮಿನಿ ರಾಯ್ ಪಶ್ಚಿಮ ಬಂಗಾಳದ ಬೆಲಿಯತೋರ್ ಎಂಬಲ್ಲಿ ಜನಿಸಿದರು. ಅಭನೀಂದ್ರನಾಥರ ಶಿಷ್ಯರಾದ ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1931: ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ನಟ ರತ್ನಾಕರ್ ಅವರು ಕೊಲ್ಲೂರಿನಲ್ಲಿ ಜನಿಸಿದರು. 300ಕ್ಕೂ ಚಲನಚಿತ್ರಗಳಲ್ಲಿ ನಟಿಸಿದ್ದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

1937: ಭಾರತದ ಖ್ಯಾತ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ನಾಗರ್ ಕೋಯಿಲ್ ಜಿಲ್ಲೆಯ ಭೂತಪಾಂಡಿ ಗ್ರಾಮದಲ್ಲಿ ಜನಿಸಿದರು. 1960 ಮತ್ತು 1961ರಲ್ಲಿ ವಿಂಬಲ್ಡನ್ನಿನಲ್ಲಿ ಸೆಮಿಫೈನಲ್ಸ್ ಆಟಗಾರರಾಗಿ ಇವರು ಪ್ರಸಿದ್ಧಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಅರ್ಜುನ ಪ್ರಶಸ್ತಿಗಳು ಇವರಿಗೆ ಸಂದಿವೆ.

1977: ಪ್ರಸಿದ್ಧ ಹಿಂದೀ ಸಾಹಿತಿ ಫನೀಶ್ವರ್ ನಾಥ್ ನಿಧನರಾದರು. ಭಾರತ ಮತ್ತು ನೇಪಾಳ ಸ್ವಾತಂತ್ರ್ಯ ಹೋರಾಟಗಳಲ್ಲಿ ಇವರು ಪಾಲ್ಗೊಂಡಿದ್ದರು.

2003: ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸ್ಥಾಪಕ ಸೆಸಿಲ್ ಹೊವಾರ್ಡ್ ಗ್ರೀನ್ ನಿಧನರಾದರು.

2009: ಗಾಂಧಿವಾದಿ, ಮಾಜಿ ಶಾಸಕ, ಹಿರಿಯ ಸಾಹಿತಿ ಬಿ.ಎಂ.ಇದಿನಬ್ಬ ಅವರು ತಮ್ಮ 90ನೇ ವಯಸ್ಸಿನಲ್ಲಿ ಉಳ್ಳಾಲದಲ್ಲಿ ನಿಧನರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಚೊಚ್ಚಲ ಅಖಿಲ ಭಾರತ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

2009: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ 86ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

2009: ಪ್ರಸಿದ್ಧ ಹಿಂದೀ ಸಾಹಿತಿ ವಿಷ್ಣು ಪ್ರಭಾಕರ್ ಅವರು ನವದೆಹಲಿಯಲ್ಲಿ ನಿಧನರಾದರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಸಂದಿದ್ದವು.

2015: ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್, ಮಹಾವೀರ ಚಕ್ರ ಪುರಸ್ಕೃತ ಹನುತ್ ಸಿಂಗ್ ರಾಥೋರ್ ನಿಧನರಾದರು.