Categories
e-ದಿನ

ಏಪ್ರಿಲ್-15

ಪ್ರಮುಖಘಟನಾವಳಿಗಳು:

1755: ಸ್ಯಾಮ್ಯುಯೆಲ್ ಜಾನ್ಸನ್ ಅವರ ‘ಎ ಡಿಕ್ಷನರೀ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್’ ಲಂಡನ್ನಿನಲ್ಲಿ ಪ್ರಕಟಗೊಂಡಿತು.

1817: ಥಾಮಸ್ ಹಾಪ್ ಕಿನ್ಸ್ ಗಲ್ಲಾವ್ ಡೆಟ್ ಮತ್ತು ಲಾರೆಂಟ್ ಕ್ಲರ್ಕ್ ಅವರು ಕನೆಕ್ಟಿಕಟ್ ಬಳಿಯ ಹಾರ್ಟ್ಫೋರ್ಡ್ ಎಂಬಲ್ಲಿ ಅಮೆರಿಕದ ಪ್ರಥಮ ಕಿವುಡರಿಗಾಗಿನ ಶಾಲೆ ಪ್ರಾರಂಭಿಸಿದರು

1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ್ದ.

1892: ದಿ ಜನರಲ್ ಎಲೆಕ್ಟ್ರಿಕ್ ಕಂಪೆನಿ ಸ್ಥಾಪನೆಗೊಂಡಿತು.

1896: ಅಥೆನ್ಸ್’ನಲ್ಲಿ ನಡೆದ ಮೊಟ್ಟ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಸಮಾರೋಪಗೊಂಡಿತು.

1912: ಅಮೆರಿಕದ ಐಷಾರಾಮಿ ನೌಕೆ ಟೈಟಾನಿಕ್ ನ್ಯೂ ಫೌಂಡ್ ಲ್ಯಾಂಡ್ ಬಳಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ನಲವತ್ತು ನಿಮಿಷಗಳಿಗೆ ಮುಂಚೆ ದೊಡ್ಡ ಹಿಮಗಡ್ಡೆಗೆ ಡಿಕ್ಕಿ ಹೊಡೆದ ಈ ಹಡಗು ಬೆಳಿಗ್ಗೆ 2.20ರ ವೇಳೆಗೆ ನೀರಿನಲ್ಲಿ ಮುಳುಗಿತು. ಪಯಣಿಸುತ್ತಿದ್ದ ಒಟ್ಟು 2227 ಪಯಣಿಗರಲ್ಲಿ ಕೇವಲ 710 ಜನ ಮಾತ್ರಾ ಬದುಕುಳಿದರು.

1923; ಡಯಾಬಿಟಿಸ್ ರೋಗಕ್ಕೆ ಔಷದವಾದ ಇನ್ಸುಲಿನ್ ಎಲ್ಲೆಡೆ ಸಾಮಾನ್ಯವಾಗಿ ದೊರಕುವಂತಹ ಔಷದವಾಯಿತು.

1924: ರಾಂಡ್ ಮೆಕ್ನಲ್ಲಿ ಅವರು ಪ್ರಥಮ ರಸ್ತೆ ಅಟ್ಲಾಸ್ ಅನ್ನು ಪ್ರಕಟಿಸಿದರು.

1955: ರೇ ಕ್ರಾಕ್ ಅವರು ಇಲಿನಾಯ್ಸಿನ ಡೆಸ್ ಪ್ಲೈನ್ಸ್ ಎಂಬಲ್ಲಿ ಮೆಕ್ ಡೊನಾಲ್ಡಿನ ಪ್ರಥಮ ಫ್ರಾಂಚೈಸ್ ಶಾಖೆಯನ್ನು ಆರಂಭಿಸಿದರು.

1986: ಅಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸಿನ ಪ್ರಸಿದ್ಧ ಆಟಗಾರ ವಿವಿಯನ್ ರಿಚರ್ಡ್ಸ್ಸ್ ಅವರು ಕೇವಲ 56 ಚೆಂಡುಗಳಲ್ಲಿ ಟೆಸ್ಟ್ ಶತಕ ಬಾರಿಸಿದರು.

2007: ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.

2008: ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರವಾದ ‘ಸಿಂಗಪುರ್ ಫ್ಲೈಯರ್’ ಸಿಂಗಪುರದಲ್ಲಿ ಚಾಲನೆಗೊಂಡಿತು.

2009; ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲ 350 ಕಿ.ಮೀ. ವ್ಯಾಪ್ತಿಯುಳ್ಳ ಸಂಪೂರ್ಣ ಸ್ವದೇಶಿ ನಿರ್ಮಿತವಾದ ‘ಪೃಥ್ವಿ-2’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಪ್ರಮುಖಜನನ/ಮರಣ:

1452: ‘ಮೊನಾಲೀಸಾ’, ‘ಲಾಸ್ಟ್ ಸಪ್ಪರ್’ ಮುಂತಾದ ಮೇರು ಕೃತಿಗಳ ಸೃಷ್ಟಿಕರ್ತರಾದ ಲಿಯನಾರ್ಡೋ ಡ ವಿಂಚಿ ಇಟಲಿಯ ವಿಂಚಿ ಎಂಬಲ್ಲಿ ಜನಿಸಿದರು. ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಅನೇಕ ರೀತಿಯಲ್ಲಿ ಪ್ರಸಿದ್ಧರಾಗಿದ್ದಾರೆ.

1469: ಪಂಜಾಬಿನ ಜನರಿಂದ “ನಾನಕ್, ಸತ್ಯದೇವರು, ಹಿಂದೂಗಳ ಗುರು, ಮುಸಲ್ಮಾನರ ಮೌಲ್ವಿ” ಎಂದು ಗುರುತಿಸಲ್ಪಡುವ, ಸಿಖ್ಖರ ಪ್ರಥಮ ಗುರುವರ್ಯರಾದ ಗುರುನಾನಕ್ ಅವರು ರಾವಿ ಮತ್ತು ಚೀನಾಬ್ ನದಿಯ ಮಧ್ಯದಲ್ಲಿರುವ ‘ತಳವಂಡಿ’ ಎಂಬಲ್ಲಿ ಜನಿಸಿದರು.

1874: ಜರ್ಮನ್ ಭೌತವಿಜ್ಞಾನಿ ಜೋಹಾನ್ನೆಸ್ ಸ್ಟಾರ್ಕ್ ಅವರು ಸ್ಕಿಕ್ಕೆನ್ ಹೊಫ್ ಎಂಬಲ್ಲಿ ಜನಿಸಿದರು. ‘ಡಾಪ್ಲರ್ ಎಫೆಕ್ಟ್ ಇನ್ ಕೆನಾಲ್ ರೇಸ್ ಅಂಡ್ ಸ್ಪ್ಲಿಟ್ಟಿಂಗ್ ಆಫ್ ಸ್ಪ್ಕೆಕ್ಟ್ರಲ್ ಲೈನ್ಸ್ ಇನ್ ಎಲೆಕ್ಟ್ರಿಕ್ ಫೀಲ್ಡ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1919 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1874: ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ನಿಕೊಲಾಯ್ ಸೆಮ್ಯೋನೌ ರಷ್ಯಾದ ಸರಟೋವ್ ಎಂಬಲ್ಲಿ ಜನಿಸಿದರು. ‘ಮೆಕಾನಿಸಮ್ ಆಫ್ ಕೆಮಿಕಲ್ ಟ್ರಾನ್ಸ್ಫಾರ್ಮೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1956 ವರ್ಷದ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತ್ತು.

1901: ಸ್ವಾತಂತ್ರ್ಯಯೋಧ ಮತ್ತು ಪಶ್ಚಿಮ ಬಂಗಾಳದ ನಾಲ್ಕನೆಯ ಮುಖ್ಯಮಂತ್ರಿಗಳಾದ ಅಜೋಯ್ ಮುಖರ್ಜಿ ಅವರು ಕೋಲ್ಕತ್ತದಲ್ಲಿ ಜನಿಸಿದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.

1907: ಡಚ್-ಇಂಗ್ಲಿಷ್ ವೈದ್ಯ ಶಾಸ್ತ್ರಜ್ಞ ನಿಕೋಲಾಸ್ ಟಿನ್ ಬೆರ್ಗೆನ್ ಅವರು ನೆದರ್ ಲ್ಯಾಂಡಿನ ‘ದಿ ಹೇಗ್’ ಎಂಬಲ್ಲಿ ಜನಿಸಿದರು. ‘ಆರ್ಗನೈಸೆಶನ್ ಅಂಡ್ ಎಲಿಸಿಟೇಶನ್ ಆಫ್ ಇಂಡಿವಿಜುಯಲ್ ಅಂಡ್ ಸೋಷಿಯಲ್ ಬಿಹೇವಿಯರ್ ಪ್ಯಾಟರ್ನ್ಸ್ ಆಫ್ ಅನಿಮಲ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1973 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1922: ಸುಗಮ ಸಂಗೀತ ಕಲಾವಿದ ಎಂ. ಪ್ರಭಾಕರ್ ಭಟ್ಕಳದಲ್ಲಿ ಜನಿಸಿದರು. ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ಸುಗಮ ಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್‌ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1922: ಪ್ರಸಿದ್ಧ ಹಿಂದೀ ಮತ್ತು ಉರ್ದು ಕವಿ ಹಾಗೂ ಚಲನಚಿತ್ರ ಗೀತರಚನಕಾರ ಹಸರತ್ ಜೈಪುರಿ ಅವರು ಜೈಪುರದಲ್ಲಿ ಜನಿಸಿದರು.

1931: ಸ್ವೀಡಿಷ್ ಕವಿ, ಅನುವಾದಕ ಮತ್ತು ಮನಃಶಾಸ್ತ್ರಜ್ಞರಾದ ಥಾಮಸ್ ಟ್ರಾನ್ಸ್ ಟ್ರೋಮರ್ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ಇವರಿಗೆ 2011 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತು.

1932: ಮರಾಠಿ ಕವಿ ಮತ್ತು ಗೀತರಚನಕಾರ ಸುರೇಶ ಭಟ್ ಅವರು ಮಹಾರಾಷ್ಟ್ರದ ಅಮರಾವತಿ ಎಂಬಲ್ಲಿ ಜನಿಸಿದರು. ಇವರು ಗಝಲ್ ರೂಪದ ರಚನೆಗಳಿಗೆ ಪ್ರಸಿದ್ಧಿ ಪಡೆದಿದ್ದರು.

1935: ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲಿ ಒಬ್ಬರಾದ ರಾಜೇಶ್ ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಧಾರವಾಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

1943: ಅಮೆರಿಕದ ವೈದ್ಯಶಾಸ್ತ್ರಜ್ಞ ಮತ್ತು ಜೈವಿಕ ವಿಜ್ಞಾನಿ ರಾಬರ್ಟ್ ಲೆಫ್ಕೋವಿಟ್ಜ್ ಅವರು ನ್ಯೂಯಾರ್ಕಿನಲ್ಲಿ ಜನಿಸಿದರು. ‘ಜಿ ಪ್ರೊಟೀನ್-ಕಪಲ್ಡ್ ರಿಸೆಪ್ಟರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2012 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1977: ಮರಳಿನಲ್ಲಿ ಶಿಲ್ಪ ಮೂಡಿಸುವ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯಲ್ಲಿ ಜನಿಸಿದರು. ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರಿಗೆ ಪದ್ಮಶ್ರೀ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ್ದ. ಮಾರ್ಚ್ 1861ರಿಂದ ಎಪ್ರಿಲ್ 1865ರಲ್ಲಿ ಹತ್ಯೆಯಾಗುವವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವರು ದೇಶದ ಆಂತರಿಕ ಕ್ರಾಂತಿಯ ಪರೀಕ್ಷೆಯ ಕಾಲದಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಗುಲಾಮಗಿರಿಯನ್ನು ಹೋಗಲಾಡಿಸಿ, ದೇಶದ ಗಣರಾಜ್ಯ ಸ್ವರೂಪವನ್ನು ಹೆಚ್ಚು ಶಕ್ತಿಯುತಗೊಳಿಸಿ, ಆರ್ಥಿಕ ಸ್ಥಿತಿಯನ್ನು ಆಧುನಿಕಗೊಳಿಸಿದರು.

1980: ಫ್ರೆಂಚ್ ದಾರ್ಶನಿಕ ಜೀನ್-ಪೌಲ್ ಸಾರ್ತ್ರೆ ಪ್ಯಾರಿಸ್ನಲ್ಲಿ ನಿಧನರಾದರು. 1964ರ ವರ್ಷದಲ್ಲಿ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ, ಅವರು “ತಾವು ಯಾವುದೇ ಗೌರವಗಳನ್ನು ಸ್ವೀಕರಿಸಲು ಇಚ್ಚಿಸುವುದಿಲ್ಲ, ಬರಹಗಾರನೊಬ್ಬ ಸಂಸ್ಥೆಯಾಗಿ ಬಿಡಬಾರದು ಎಂಬುದು ನನ್ನ ಅನಿಸಿಕೆ” ಎಂದು ಪ್ರಶಸ್ತಿಗಳೆಲ್ಲವನ್ನೂ ನಿರಾಕರಿಸಿದರು.