Categories
e-ದಿನ

ಏಪ್ರಿಲ್-27

ಪ್ರಮುಖಘಟನಾವಳಿಗಳು:

1667: ಕುರುಡುತನ ಮತ್ತ ಬಡತನದಿಂದ ಬಳಲಿದ್ದ ಜಾನ್ ಮಿಲ್ಟನ್ ತಮ್ಮ ಪ್ಯಾರಡೈಸ್ ಲಾಸ್ಟ್ ಕೃತಿಯ ಹಕ್ಕುಗಳನ್ನು ಕೇವಲ ಹತ್ತು ಪೌಂಡುಗಳಿಗೆ ಮಾರಾಟ ಮಾಡಿದರು.

1861: ಅಮೆರಿಕದ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಆವರು ‘ಹಬೀಯಾಸ್ ಕಾರ್ಪಸ್’ ವ್ಯಕ್ತಿಸ್ವಾತಂತ್ರ್ಯದ ಕಾನೂನಿನಲ್ಲಿ ದಾವೆ ಹೋಗುವ ಹಕ್ಕನ್ನು ಅಮಾನತುಗೊಳಿಸಿದರು.

1865: 2400 ಜನರನ್ನು ಕೊಂಡೊಯ್ಯುತ್ತಿದ್ದ ‘ಸುಲ್ತಾನ’ ಎಂಬ ಹಬೆದೋಣಿಯು ಮಿಸಿಸಿಪಿ ನದಿ ಯಾನದಲ್ಲಿ ಸ್ಪೋಟಕ್ಕೊಳಗಾಗಿ 1800 ಜನ ನಿಧನರಾದರು.

1981: ಜೆರಾಕ್ಸ್ ಪಾರ್ಕ್ ಅವರು ಕಂಪ್ಯೂಟರ್ ಮೌಸ್ ಅನ್ನು ಪರಿಚಯಿಸಿದರು.

1986: ಚೆರ್ನೋಬಿಲ್ ಪರಮಾಣು ದುರಂತದ ದೆಸೆಯಿಂದಾಗಿ ಪ್ರಿಪ್ಯಾಟ್ ನಗರ ಮತ್ತು ಸುತ್ತಲಿನ ಪ್ರದೇಶದ ಜನರನ್ನು ಸ್ಥಳಾಂತರಿಸಲಾಯಿತು.

1992: ಬ್ರಿಟಿಷ್ ಹೌಸ್ ಆಫ್ ಕಾಮನ್ಸಿನ 700 ವರ್ಷಗಳ ಇತಿಹಾಸದಲ್ಲಿ ಬೆಟ್ಟಿ ಬೂಥ್ ರಾಯ್ಡ್ ಅವರು ಮೊದಲ ಸ್ಪೀಕರ್ ಆಗಿ ಆಯ್ಕೆಗೊಂಡರು.

1993: ಸೆನೆಗಲ್ ರಾಷ್ಟ್ರದ ದಕಾರ್ ಎಂಬಲ್ಲಿಗೆ 1994ನೇ ವರ್ಷದ ಫಿಫಾ ವಿಶ್ವ ಕ್ಲಬ್ಬ್ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಹೊರಟಿದ್ದ ಜಾಂಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಎಲ್ಲಾ ಸದಸ್ಯರೂ ಗಬಾನಿನ ಲೈಬ್ರೆವಿಲ್ಲೆ ಹೊರವಲಯದಲ್ಲಿ ವಿಮಾನ ಅಪಘಾತಕ್ಕೆ ಸಿಲುಕಿ ತಮ್ಮ ಜೀವ ಕಳೆದುಕೊಂಡರು.

1996: ಲೆಬನಾನ್ ಯುದ್ಧ ಕೊನೆಗೊಂಡಿತು.

2006: ನ್ಯೂಯಾರ್ಕ್ ನಗರದಲ್ಲಿ ಫ್ರೀಡಂ ಟವರ್ ಅಥವಾ ವರ್ಲ್ಡ್ ಟ್ರೇಡ್ ಸೆಂಟರಿನ ನಿರ್ಮಾಣ ಕಾರ್ಯ ಆರಂಭಗೊಂಡಿತು.

ಪ್ರಮುಖಜನನ/ಮರಣ:

ಕ್ರಿಸ್ತಪೂರ್ವ 85: ರೋಮನ್ ಅಧಿಪತ್ಯದಲ್ಲಿನ ರಾಜಕಾರಣಿ ಡೆಸಿಮಸ್ ಜೂನಿಯಸ್ ಬ್ರೂಟಸ್ ಅಲ್ಬಿನಿಯಸ್ ಜನನ.

1857: ಆಧುನಿಕ ಸಂಖ್ಯಾಶಾಸ್ತ್ರದ ಹರಿಕಾರ ಎಂದೆನಿಸಿರುವ ಕಾರ್ಲ್ ಪಿಯರ್ಸನ್ ಅವರು ಲಂಡನ್ನಿನ ಇಸ್ಲಿಂಗ್ಟನ್ ಎಂಬಲ್ಲಿ ಜನಿಸಿದರು.

1896: ನೈಲಾನ್ ಕಂಡು ಹಿಡಿದ ವ್ಯಾಲೇಸ್ ಹ್ಯೂಮ್ ಕರೋದರ್ಸ್ ಅಮೆರಿಕದ ಲೋವಾ ಬಳಿಯ ಕರ್ಲಿಂಗ್ಟನ್ ಎಂಬಲ್ಲಿ ಜನಿಸಿದರು.

1895: ಸ್ವಾತಂತ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಹೋರಾಟಗಾರ, ಪತ್ರಿಕೋದ್ಯಮಿ, ಸಾಹಿತಿ ತಿರುಮಲೆ ತಾತಾಚಾರ್ಯ ಶರ್ಮ ಅವರು ಲಕ್ಷ್ಮೀಕುಮಾರ ಎಂಬ ಹೆಸರಿನಿಂದ ಜನಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಅವರು ಸೇವೆ ಸಲ್ಲಿಸಿದರು.

1912: ಚಲನಚಿತ್ರ ನಟಿ, ನೃತ್ಯ ಕಲಾವಿದೆ ಮತ್ತು ನೃತ್ಯ ಸಂಯೋಜಕಿ ಸೊಹ್ರಾ ಸೆಹಗಲ್ ಅವರು ಸಹ್ರಾನ್ ಪುರದಲ್ಲಿ ಜನಿಸಿದರು. 102 ವರ್ಷಗಳ ಕ್ರಿಯಾಶೀಲ ಬದುಕನ್ನು ನಡೆಸಿದ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಫೆಲೋಶಿಪ್, ಪದ್ಮಶ್ರೀ, ಪದ್ಮವಿಭೂಷಣ, ಕಾಳಿದಾಸ್ ಸಮ್ಮಾನ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1931: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಉಪ್ಪಿನಂಗಡಿ ಬಳಿಯ ರಾಮಕುಂಜ ಎಂಬಲ್ಲಿ ವೆಂಕಟರಾಮ ಎಂಬ ಹೆಸರಿನಿಂದ ಜನಿಸಿದರು. ಆಧ್ಯಾತ್ಮದ ಸಾಧನೆಗಳ ಜೊತೆಗೆ ಸಾಮಾಜಿಕ ಮತ್ತು ವಿದ್ಯಾಸೇವೆಗಳಲ್ಲಿ ಸಹಾ ಅವರ ಸೇವೆ ಸಲ್ಲುತ್ತಿದೆ.

1936: ಅಮೆರಿಕದ ಯುನೈಟೆಡ್ ಆಟೋ ವರ್ಕರ್ಸ್ ಸಂಘಟನೆಯು ಅಮೆರಿಕನ್ ಫೆಡರೇಶನ್ ಆಫ್ ಲೇಬರ್ ಇಂದ ಸ್ವಾಯತ್ತತೆ ಪಡೆದುಕೊಂಡಿತು.

1941: ಖ್ಯಾತ ಹಿನ್ನೆಲೆಗಾಯಕಿ ಮತ್ತು ಸುಗಮ ಸಂಗೀತಗಾರ್ತಿ ಬಿ.ಕೆ. ಸುಮಿತ್ರಾ ಅವರು ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ 3000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಇವರಿಗೆ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಹಂಪೆ ವಿಶ್ವವಿದ್ಯಾಲಯದ ನಾಡೋಜ ಗೌರವಗಳು ಸಂದಿವೆ.

1882: ಅಮೆರಿಕದ ತತ್ವಜ್ಞಾನಿ, ಕವಿ, ಪ್ರಬಂಧಕಾರರಾದ ರಾಲ್ಫ್ ವಾಲ್ಡೊ ಎಮರ್ಸನ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಮೆಸಾಚ್ಯುಸೆಟ್ಸಿನ ಕಾಂಕಾರ್ಡಿನಲ್ಲಿ ನಿಧನರಾದರು.

1989: ಜಪಾನಿನ ಉದ್ಯಮಿ ಪ್ಯಾನಸೋನಿಕ್ ಸಂಸ್ಥಾಪಕ ಕೊನೊಸುಕೆ ಮಟಸುಷಿತ ಅವರು ಒಸಾಕಾ ಬಳಿಯ ಮೊರಿಗುಚಿ ಎಂಬಲ್ಲಿ ನಿಧನರಾದರು.

2002: ಬಾರ್ಬಿ ಡಾಲ್ ಸೃಷ್ಟಿಸಿದ ಅಮೆರಿಕದ ಸಂಶೋಧಕಿ ಮತ್ತು ಉದ್ಯಮಿ ರುಥ್ ಹ್ಯಾಂಡ್ಲರ್ ಅವರು ಲಾಸ್ ಏಂಜೆಲಿಸ್ ನಗರದಲ್ಲಿ ನಿಧನರಾದರು.

2009: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಫಿರೋಜ್ ಖಾನ್ ತಮ್ಮ 70ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

2009: ತೆಂಕು ತಿಟ್ಟಿನ ಚಂಡೆ, ಮದ್ದಳೆ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಅವರು ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನವೊಂದನ್ನು ನೀಡಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ, ಕೇರಳ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.