Categories
ಅಂಕಣಗಳು ಜಿ ವಿ ಗಣೇಶಯ್ಯ ಅಂಕಣ

ಗೋಧಿ ಎಂಬ ಅದ್ಭುತ ಹುಲ್ಲು

ಒಂದೇ ಔಷಧದಿಂದ ಹಲವಾರು ಕಾಯಿಲೆಗಳು ಗುಣವಾಗುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತದಲ್ಲವೇ? ಅಂತಹ ಔಷಧವೊಂದಿದೆ. ಆದರೆ ಅದು ಯಾವುದೇ ಔಷಧದ ಅಂಗಡಿಯಲ್ಲಿ ದೊರೆಯುವುದಿಲ್ಲ. ನೀವೇ ಅದನ್ನು ತಯಾರಿಸಿಕೊಳ್ಳಬೇಕು. ಈ ಔಷಧದ ತಯಾರಿಕೆಗೆ ಏನೆಲ್ಲಾ ಪದಾರ್ಥಗಳು ಬೇಕೋ, ಏನೆಲ್ಲಾ ಪರಿಕರಗಳು ಬೇಕೋ ಎಂಬ ಕುತೂಹಲ ನಿಮಗಿರಬಹುದು.ಯಾವುದಾ ಔಷಧ?ಹೇಳಿದರೆ ಖಂಡಿತಾ ಅಚ್ಚರಿಯಾದೀತು. ಆ ದಿವ್ಯ ಔಷಧ ಇನ್ನಾವುದೂ ಅಲ್ಲ; ಗೋಧಿ ಗಿಡದ ರಸ !

ಅಮೇರಿಕದ ಮಹಿಳಾ ವೈದ್ಯೆ ಡಾ.ಎನ್. ಬಿರಾಮೋರ್ ಎಂಬುವರು ಅಸಾಧ್ಯ ರೋಗಗಳಿಂದ ನರಳುತ್ತಿದ್ದವರ ಮೇಲೆಲ್ಲಾ ಗೋಧಿ ಗಿಡದ ರಸದ ಪ್ರಯೋಗ ನಡೆಸಿ ನೂರಕ್ಕೆ ನೂರು ಸಾಫಲ್ಯ ಪಡೆದುದಾಗಿ ಹೇಳುತ್ತಾರೆ. ಈ ವೈದ್ಯೆಯ ಪ್ರಕಾರ ಜಗತ್ತಿನಲ್ಲಿರುವ ಯಾವುದೇ ರೋಗ ಗೋಧಿ ಗಿಡದ ರಸದ ಕ್ರಮಬದ್ಧ ಸೇವನೆಯಿಂದ ಗುಣವಾಗದಿರುವುದಿಲ್ಲ. ದೊಡ್ಡ- ದೊಡ್ಡ ವೈದ್ಯರು ಗುಣಪಡಿಸಲು ಅಸಾಧ್ಯವೆಂದು ಕೈಚೆಲ್ಲಿದ, ಮರಣಶಯ್ಯೆಯಲ್ಲಿದ್ದ ಕ್ಯಾನ್ಸರ್ ರೋಗಿಗಳನ್ನು ಸಹ ಗೋಧಿ ಗಿಡದ ರಸದಿಂದಲೇ ಗುಣಪಡಿಸಿದ್ದಾರಂತೆ.

ಭಗಂಧರ, ಮೂಲವ್ಯಾಧಿ, ಮಧುಮೇಹ, ಗಂಟಲುಬೇನೆ, ಸಂಧಿವಾತ, ಕಾಮಾಲೆ, ಜ್ವರ, ಅಸ್ತಮಾ, ಕೆಮ್ಮು ಇತ್ಯಾದಿ ರೋಗಗಳಿಂದ ಅನೇಕ ವರ್ಷಗಳಿಂದ ಬಳಲುತ್ತಿದ್ದವರನ್ನು ಸಹ ಈ ಸಾಧಾರಣ ಗಿಡದ ರಸದಿಂದಲೇ ಗುಣಪಡಿಸಲಾಗಿದೆಯಂತೆ. ಹೆಚ್ಚೇಕೆ ಆಧುನಿಕ ವೈದ್ಯ ವಿಜ್ಞಾನವು ಗುಣಪಡಿಸಲು ಅಸಾಧ್ಯವೆಂದು ಘೋಷಿಸಿರುವ ಸುಮಾರು 350 ಕಾಯಿಲೆಗಳನ್ನು ಈ ಗಿಡದ ರಸದಿಂದ ಗುಣಪಡಿಸಲಾಗಿದೆ. ಗೋಧಿ ಗಿಡದಲ್ಲಿರುವ ಅದ್ಭುತ ಶಕ್ತಿಯು ಪ್ರಯೋಗಗಳಿಂದ ದೃಢಪಟ್ಟಿದೆ. ಅಮೇರಿಕದ ಅನೇಕ ಪ್ರಸಿದ್ಧ ವೈದ್ಯರು ಈ ಗಿಡದ ರಸದಲ್ಲಿರುವ ಔಷಧೀಯ ಗುಣಗಳನ್ನು ಸಮರ್ಥಿಸಿದ್ದಾರೆ. ಭಾರತದ ಗುಜರಾತ್, ಮುಂಬಯಿ ಪ್ರಾಂತ್ಯಗಳ ಅನೇಕ ವೈದ್ಯರು ಸಹಾ ಈ ಬಗ್ಗೆ ಪ್ರಯೋಗನಿರತರಾಗಿದ್ದಾರೆ.

ಹಸಿರು ರಕ್ತ: ಈ ಎಲ್ಲಾ ಕಾರಣಗಳಿಂದಾಗಿ ಗೋಧಿ ಗಿಡದ ರಸವನ್ನು “ಹಸಿರು ರಕ್ತ” ಎಂದು ಕರೆಯಲಾಗಿದೆ. ಇದು ಶೇ. 40ರಷ್ಟು ಮಾನವ ರಕ್ತವನ್ನು ಹೋಲುತ್ತದೆ. “ದೈವದತ್ತವಾದ ಈ ಅಮೃತದೆದುರು ವೈದ್ಯರು ನೀಡುವ ಇತರ ಅಂಶಗಳು ಏನೇನೂ ಅಲ್ಲ. ಜಗತ್ತಿನ ಪ್ರತಿಯೊಬ್ಬನೂ ಈ ರಸವನ್ನು ಸೇವಿಸಿ ಲಾಭ ಪಡೆಯಬಹುದು” – ಹೀಗೆಂದು ಡಾ. ಬಿರಾಮೋರ್ ಹೇಳುತ್ತಾರೆ.ನೀವು ಮನೆಯಲ್ಲೇ ಈ ಔಷಧವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಹೇಗೆ? ಮುಂದೆ ಓದಿ.

ಮನೆಯಲ್ಲೇ ಮಾಡಿಕೊಳ್ಳಿ ನಿಮ್ಮ ಅನುಕೂಲಕ್ಕೆ ತಕ್ಕಂತೆ 10-12 ಇಲ್ಲವೇ 20 ಮರದ ಇಲ್ಲವೇ ಮಣ್ಣಿನ ಕುಂಡಗಳನ್ನು ತಂದುಕೊಳ್ಳಿ. ಸೂರ್ಯ ಕಿರಣಗಳು ಬೀಳದ ಜಾಗದಲ್ಲಿ ಅವುಗಳನ್ನು ಇಟ್ಟು ಮಣ್ಣು ತುಂಬಿಸಬೇಕು. ರಾಸಾಯನಿಕ ಗೊಬ್ಬರ ಹಾಕಬಾರದು. ನಂತರ ಒಂದೊಂದು ಕುಂಡದಲ್ಲಿ ಸುಮಾರು 60-70 ಉತ್ತಮವಾದ ಗೋಧಿಯ ಕಾಳುಗಳನ್ನು ಬಿತ್ತಬೇಕು. ದಿನವೂ ನೀರು ಹಾಕಲು ಮರೆಯಬೇಡಿ. 3-4 ದಿನಗಳಲ್ಲಿ ಬಿತ್ತಿದ್ದ ಗೋಧಿಯು ಮೊಳಕೆ ಬರುವುದು. ನಂತರ 8-10 ದಿನಗಳಲ್ಲಿ ಅದು 5-6 ಅಂಗುಲ ಎತ್ತರದ ಗಿಡವಾಗುತ್ತದೆ.

ಆಗ ಅದರಲ್ಲಿ 30-40 ಗಿಡಗಳನ್ನು ಬೇರು ಸಹಿತ ಕಿತ್ತು ಬೇರನ್ನು ಚೆನ್ನಾಗಿ ತೊಳೆಯಬೇಕು. ನಂತರ ಚೆನ್ನಾಗಿ ಅರೆಯಬೇಕು. ಗ್ರೈಂಡರ್/ಮಿಕ್ಸರ್ ಗಳನ್ನು ಈ ಕೆಲಸಕ್ಕೆ ಉಪಯೋಗಿಸಬಹುದು. 6 ಅಂಗುಲಕ್ಕಿಂತ ಎತ್ತರದ ಗಿಡ ರಸ ತೆಗೆಯಲು ಅನರ್ಹ. ಹೀಗೆ ಅರೆದ ನಂತರ ಶುದ್ಧವಾದ ಬಟ್ಟೆಯ ಸಹಾಯದಿಂದ ಹಿಂಡಿ ರಸ ತೆಗೆದುಕೊಳ್ಳಬೇಕು. ಈ ರಸವನ್ನು ಕೂಡಲೇ ರೋಗಿಗಳಿಗೆ ಕುಡಿಸಬೇಕು. ಏಕೆಂದರೆ ರಸ ತೆಗೆದ ಅರ್ಧ ಗಂಟೆಯ ನಂತರ ರಸ ಸತ್ವಹೀನವಾಗಿಬಿಡುತ್ತದೆ. ರೋಗಿಯು ಈ ರಸವನ್ನು ಸಾವಕಾಶವಾಗಿ ಸೇವಿಸಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಒಂದು ಸಾರಿಗೆ 30 ಎಂ.ಎಲ್ ನಂತೆ ರೋಗಿಗಳಿಗೆ ಈ ರಸ ಕೊಡಬೇಕು. ಈ ರಸದ ಸೇವನೆಯ ನಂತರ ಒಂದು ಲೋಟ ನೀರು ಕುಡಿಯಬೇಕು.

ಹಳೆಯ ರೋಗದಿಂದ ನರಳುತ್ತಿರುವವರಿಗೆ ದಿನಕ್ಕೆ ನಾಲ್ಕು ಬಾರಿ ಈ ರಸ ಕೊಡಬೇಕು. ಇಂತಹವರು ಪ್ರಾರಂಭದಲ್ಲಿ 8-10 ದಿನ ದೈನಂದಿನ ಆಹಾರ ಸೇವನೆಯನ್ನು ನಿಲ್ಲಿಸಿ ಆಗಾಗ ಎಳನೀರು(ಸೀಯಾಳ, ಬೊಂಡ) ಸೇವಿಸುತ್ತಿರಬೇಕು. ಮೊದಲ ಕೆಲವು ದಿನ ನೀವು 30 ಎಂ.ಎಲ್ ರಸ ಸೇವಿಸಿರಿ. ನಿಮ್ಮ ಶರೀರಕ್ಕೆ ಅದು ಒಗ್ಗುತ್ತದೆ, ಏನೂ ತೊಂದರೆಯಿಲ್ಲ ಎನಿಸಿದ ನಂತರ ಬೆಳಿಗ್ಗೆ ಮತ್ತು ಸಾಯಂಕಾಲ ಹೊತ್ತಿಗೆ 30 ಎಂ.ಎಲ್ ನಂತೆ ಒಟ್ಟು 60 ಎಂ.ಎಲ್ ಸೇವಿಸಬೇಕು. ಒಂದಿಷ್ಟು ಕಾಲ ಭೇದಿಯಾಗುವ ಪರಿಸ್ಥಿತಿ ಬಂದರೆ, ಹೊಟ್ಟೆ ತೊಳೆಸಿದಂತಾದರೆ ಒಂದೆರಡು ವಾರ ಈ ರಸದ ಸೇವನೆಯನ್ನು ನಿಲ್ಲಿಸಿ. ನಂತರ ಅಲ್ಪ ಪ್ರಮಾಣದಿಂದ ಪ್ರಾರಂಭಿಸಿ.

ಈ ರೀತಿ ಗೋಧಿ ಗಿಡದ ರಸವನ್ನು ಸೇವಿಸಿದರೆ 8-10 ದಿನಗಳಲ್ಲೇ ರೋಗಗಳೆಲ್ಲಾ ನಿವಾರಣೆಯಾಗತೊಡಗುತ್ತವೆ. 15-20 ದಿನಗಳಲ್ಲಿ ರೋಗಗಳು ಪೂರ್ಣ ಗುಣವಾಗುವುವು. ಉಲ್ಬಣಾವಸ್ಥೆಯಲ್ಲಿರುವ ಕಾಯಿಲೆಗಳಿಗೆ ಇನ್ನೂ ಕೆಲವು ದಿನ ರಸದ ಪ್ರಯೋಗ ಅಗತ್ಯ. ಮರಣಾವಸ್ಥೆಯಲ್ಲಿರುವ ರೋಗಿಯು ಕೂಡ 2-3 ತಿಂಗಳಲ್ಲೇ ಗುಣಮುಖನಾಗುವನು. ರಸ ತೆಗೆಯುವ ತಾಪತ್ರಯವೇ ಬೇಡವೆನಿಸಿದರೆ ಗಿಡಗಳನ್ನು ಸಣ್ಣ- ಸಣ್ಣ ಚೂರುಗಳಾಗಿ ಕತ್ತರಿಸಿ ಸಲಾಡ್(salad) ನಂತೆ ಸೇವಿಸಬಹುದು. ಬೇಕಿದ್ದರೆ ತರಕಾರಿಗಳನ್ನು ಸೇರಿಸಬಹುದು. ಬೇಕಿದ್ದರೆ ಗಿಡಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿದೂ ರಸವನ್ನು ಸೇವಿಸಬಹುದು. ಇದರಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತವಲ್ಲದೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.

ದಿನದ ಯಾವ ಸಮಯದಲ್ಲಿ ಬೇಕಾದರೂ ಈ ರಸ ಸೇವಿಸಲು ಅಡ್ಡಿಯಿಲ್ಲ. ಆದರೆ, ಇದನ್ನು ಸೇವಿಸಿದ ನಂತರ ಒಂದು ಅಥವಾ ಕನಿಷ್ಟ ಅರ್ಧ ಗಂಟೆಯವರೆಗೆ ಯಾವುದೇ ಘನ ಅಥವಾ ದ್ರವ ಅಹಾರಗಳನ್ನು ಸೇವಿಸಬಾರದು. ಪ್ರಾರಂಭದಲ್ಲಿ ಈ ರಸದ ಸೇವನೆಯಿಂದ ಹಲವರಿಗೆ ವಮನವಾದೀತು. ಆಮಶಂಕೆ, ಶೀತಾದಿಗಳಿಂದ ನರಳಬೇಕಾಗಬಹುದು. ಆದರೆ ಭಯ ಬೇಡ. ವಾಂತಿಯಾಗುವುದನ್ನು ನಿವಾರಿಸಲು ಗಿಡಗಳನ್ನು ಅರೆಯುವಾಗ ಬೆಳ್ಳುಳ್ಳಿ ಅಥವಾ ವೀಳೆಯದೆಲೆಯನ್ನು ಸೇರಿಸಿಕೊಳ್ಳಬಹುದು. ಆದರೆ ಲಿಂಬೆಯ ರಸ ಅಥವಾ ಉಪ್ಪನ್ನು ಉಪಯೋಗಿಸಲೇಬಾರದು.

ಈ ಗೋಧಿ ಗಿಡದ ರಸವು ಹಾಲು, ಮೊಸರು, ಮಾಂಸಾದಿಗಳಿಗಿಂತ ಅತ್ಯಧಿಕ ಸತ್ವಯುತವಾದುದು. ಆದ್ದರಿಂದ ರೋಗಿಯಿರಲಿ, ನಿರೋಗಿಯಿರಲಿ, ಮಗುವಿರಲಿ, ಮುದುಕನಿರಲಿ ಇದರ ಸೇವನೆಯಿಂದ ಬಹಳ ಲಾಭವುಂಟು. ಹೊಸದಾಗಿ ಹುಟ್ಟಿದ ಮಗುವಿಗೂ ಸಹ ಈ ರಸದ 5-6 ಹನಿಗಳನ್ನು ಕುಡಿಸಬಹುದು.

ವರ್ಷವಿಡೀ ಗಿಡದ ಪೂರೈಕೆಗೋಧಿ ಗಿಡದ ರಸವನ್ನು ನಾವು ವರ್ಷವಿಡೀ ಪಡೆಯುವುದು ಹೇಗೆ? ಈಗಾಗಲೇ ತಿಳಿಸಿರುವಂತೆ 10ರಿಂದ 20 ಕುಂಡಗಳು ನಿಮ್ಮ ಹತ್ತಿರ ಇವೆಯಲ್ಲವೇ? ಒಂದೊಂದು ದಿನ ಒಂದೊಂದು ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತುತ್ತಿದ್ದೀರಿ. ನೀವು 8 ಅಥವಾ 10ನೇ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುವ ದಿನ 1ನೇ ಕುಂಡದಲ್ಲಿನ ಗಿಡವು ಕೊಯ್ಲಿಗೆ ಬಂದಿರುತ್ತದೆ. ಆ ಕುಂಡದ ಗಿಡಗಳನ್ನು ಕಿತ್ತುಕೊಳ್ಳಿ. ಅದೇಕ್ಷಣದಲ್ಲಿ ಆ ಕುಂಡಕ್ಕೆ ಪುನಃ ಗೋಧಿಯ ಕಾಳುಗಳನ್ನು ಬಿತ್ತಿ. 2ನೇ ದಿನ 2ನೇ ಕುಂಡದ ಗಿಡಗಳನ್ನು ಕಿತ್ತ ನಂತರ ಆ ಕುಂಡದಲ್ಲಿ ಗೋಧಿಯ ಕಾಳುಗಳನ್ನು ಬಿತ್ತಿರಿ. ಹೀಗೆ ಯಾವ ಕುಂಡದಲ್ಲಿ ಗೋಧಿ ಗಿಡಗಳನ್ನು ಕೀಳುತ್ತೀರೋ ಆಯಾ ಕುಂಡದಲ್ಲಿ ಗೋಧಿ ಕಾಳುಗಳನ್ನು ಬಿತ್ತುತ್ತಾ ಬಂದರೆ 5-6 ಅಂಗುಲ ಎತ್ತರದ ಗೋಧಿ ಗಿಡಗಳು ವರ್ಷಪೂರ್ತಿ ನಿಮಗೆ ದೊರೆಯುತ್ತವೆ.

ಬಹು ಹಿಂದೆಯೇ ಗೊತ್ತಿತ್ತು: 1931ರಷ್ಟು ಹಿಂದೆಯೇ ಚಾರ್ಲ್ಸ್ ಸ್ಚನಾಬೆಲ್ ಎಂಬ ಆಹಾರ ವಿಜ್ಞಾನಿ ಗೋಧಿ ಹುಲ್ಲಿನ ಸಾಮರ್ಥ್ಯವನ್ನು ಕಂಡುಕೊಂಡಿದ್ದನು. ಗೋಧಿಯ ಹಾಗೂ ಇತರ ಧಾನ್ಯಗಳ ಹುಲ್ಲುಗಳನ್ನು (ಉದಾ: ಬಾರ್ಲಿ ಹುಲ್ಲು ಇತ್ಯಾದಿ) ಪೂರಕ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತಿತ್ತು. ಯಾವಾಗ ಔಷಧೋತ್ಪನ್ನ ಕೈಗಾರಿಕೆಗಳು ಹುಟ್ಟಿಕೊಂಡು ರಾಸಾಯನಿಕ ಅನ್ನಾಂಗಗಳ ತಯಾರಿಕೆ ಪ್ರಾರಂಭವಾಯಿತೋ ಆಗ ಜನರ ಗಮನ ಆ ಕಡೆ ಹರಿದು ಗೋಧಿ ಹುಲ್ಲಿನ ಬಳಕೆ ಹಿಂದೆ ಬಿತ್ತು. ಆದರೆ, ಈ ರಾಸಾಯನಿಕ ಅನ್ನಾಂಗಗಳು ಗೋಧಿ ಹುಲ್ಲಿನಿಂದ ದೊರೆಯುವ ತಾಜಾ ಅನ್ನಾಂಗಗಳಿಗೆ ಸಮವಲ್ಲ.

1960ರಲ್ಲಿ ಅನ್ ವಿಗ್ಮೋರ್ ಎಂಬ ವೈದ್ಯೆ ಚಿಕಿತ್ಸೆಗೆ ಬಗ್ಗದ ತನ್ನ ದೊಡ್ಡ ಕರುಳಿನ ಊತವನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಗುಣಪಡಿಸುವಲ್ಲಿ ಯಶಸ್ವಿಯಾದರು. ನಂತರ ಈಕೆಯು ಕಾಯಿಲೆಗಳಿಂದ ನರಳುತ್ತಿದ್ದ ನೆರೆಹೊರೆಯ ಅನೇಕರಿಗೆ ಈ ಹುಲ್ಲಿನ ಚಿಕಿತ್ಸೆ ನೀಡಿದಾಗ ಅವರೆಲ್ಲರೂ ಗುಣಮುಖರಾಗಿ ನವಚೈತನ್ಯ ಪಡೆದರು. ಇದರಿಂದ ಉತ್ತೇಜಿತರಾದ ವಿಗ್ಮೋರ್ “ಹಿಪ್ಪೋಕ್ರೇಟ್ಸ್ ಹೆಲ್ತ್ ಇನ್ಸ್ಟಿಟ್ಯೂಟ್” – ಎಂಬ ತನ್ನದೇ ಚಿಕಿತ್ಸಾಲಯದಲ್ಲಿ ಗಂಭೀರವಾದ ಕಾಯಿಲೆಗಳಿಂದ ನರಳುತ್ತಿದ್ದ ಅನೇಕ ರೋಗಿಗಳನ್ನು ಗೋಧಿ ಹುಲ್ಲಿನ ಚಿಕಿತ್ಸೆಯಿಂದ ಯಶಸ್ವಿಯಾಗಿ ಗುಣಪಡಿಸಿದರು.

ಈ ಹುಲ್ಲಿನಲ್ಲಿ ಏನೇನಿವೆ? ಒಂದು ಟೀ ಚಮಚದಷ್ಟು ಗೋಧಿ ಹುಲ್ಲಿನ ರಸದಲ್ಲಿ 10ರಿಂದ 15 ಕ್ಯಾಲೊರಿಗಳು ಮಾತ್ರ ಇವೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ. ಹತ್ತಿರ ಹತ್ತಿರ 1 ಗ್ರಾಂ.ನಷ್ಟು ಪ್ರೊಟೀನ್ ಇದೆ. ಉಪಯುಕ್ತ ಅಮೀನೋ ಆಮ್ಲಗಳಲ್ಲಿ ಎಲ್ಲ ಎಂಟು ಬಗೆ ಈ ರಸಗಳಲ್ಲಿವೆ. ಗೋಧಿ ಹುಲ್ಲಿನ ರಸದಲ್ಲಿ ಅನ್ನಾಂಗಗಳಾದ  ಎ, ಬಿ1, ಬಿ2, ಬಿ3, ಬಿ4, ಬಿ6, ಬಿ8 ಮತ್ತು ಬಿ12, ಸಿ ಇ ಮತ್ತು ಕೆ ಗಳಿವೆ. ಹಾಗೆಯೇ 1 ಟೀ ಚಮಚ ಗೋಧಿ ಹುಲ್ಲಿನ ರಸದಲ್ಲಿ 15 ಎಂ.ಜಿ ಕ್ಯಾಲ್ಸಿಯಂ, 8 ಎಂಸಿಜಿ ಅಯೋಡಿನ್, 3.5 ಎಂಸಿಜಿ ಸೆಲೆನಿಯಂ, 870 ಎಂಸಿಜಿ ಕಬ್ಬಿಣ, 62 ಎಂಸಿಜಿ ಸತುವುಗಳಲ್ಲದೆ ಅನೇಕ ಇತರ ಖನಿಜಾಂಶಗಳಿವೆ.ಗೋಧಿ ಹುಲ್ಲಿನ ರಸವನ್ನು ಉಪಯುಕ್ತವಾಗುವಂತೆ ಮಾಡುವ  ಇನ್ನೂ ಇತರ ನಾಲ್ಕು ಘಟಕಗಳಿವೆ.

ಯಾವುವು ಆ ಘಟಕಗಳು? ಆ ಘಟಕಗಳಾವುವೆಂದರೆ,

ಅ) ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್(super oxide dismutase)

ಆ) ಪಿ4 ಡಿ1

ಇ) ಮ್ಯೂಕೋ ಪಾಲಿಸ್ಯಾಕ್ಚೆರೈಡ್ಸ್(Muco-palisaccharides) ಹಾಗೂ

ಈ) ಕ್ಲೋರೋಫಿಲ್( chlorophyll-ಪತ್ರಹರಿತ್ತು)

ಮೊದಲನೆಯದಾದ ಸೂಪರ್ ಆಕ್ಸೈಡ್ ಡಿಸ್ಮ್ಯೂಟೇಸ್ ಎಂಬ ಘಟಕವು ಕ್ಯಾನ್ಸರ್ ನಿರೋಧಕವೆಂದು ಕಂಡುಬಂದಿದೆ. ಇದು ಹೇಗೆಂದರೆ, ಕ್ಯಾನ್ಸರ ಪೀಡಿತ ಜೀವಕೋಶದಲ್ಲಿ ಈ ಘಟಕದ ಕೊರತೆ ಇರುತ್ತದಂತೆ. ಆ ಕೊರತೆಯನ್ನು ಗೋಧಿ ಹುಲ್ಲಿನ ಸೇವನೆಯಿಂದ ತುಂಬಿಬಿಟ್ಟರೆ ಆ ಜೀವಕೋಶದಲ್ಲಿ ಕ್ಯಾನ್ಸರ್ ಇರುವುದಿಲ್ಲ. ಇನ್ನು ಎರಡನೆಯ ಘಟಕ ಪಿ4ಡಿ1 ಎಂಬುದರ ವಿಚಾರ: ಇದು ಗೋಧಿ ಹುಲ್ಲಿನಲ್ಲಿರುವ “ಗ್ಲೂಕೋ-ಪ್ರೊಟೀನ್”. ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ. ಮೊದಲನೆಯದಾಗಿ ಇದು ಆಂಟಿಆಕ್ಸಿಡಂಟ್ ಆಗಿ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರ್ ಎನ್ ಎ ಮತ್ತು ಡಿ ಎನ್ ಎ ಗಳನ್ನು ಪುನರುಜ್ಜೀವನಗೊಳಿಸುವುದು. ಆರ್ ಎನ್ ಎ ಮತ್ತು ಡಿ ಎನ್ ಎ ಗಳು ಶರೀರ ನಿರ್ಮಾಣ ವಸ್ತುಗಳು. ಪಿ4 ಡಿ1 ಘಟಕವು ಜೀವಕೋಶಗಳು ಕ್ಷೀಣೀಸುವಿಕೆ ಅಥವಾ ಬದಲಾವಣೆಯನ್ನು ನಿಧಾನಗೊಳಿಸುತ್ತದೆ ಅಥವಾ ಇಲ್ಲವಾಗಿಸುತ್ತದೆ.

ಎರಡನೆಯದಾಗಿ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಂತಹ ಉರಿಯೂತ ಪರಿಸ್ಥಿತಿಯಲ್ಲಿ ಗೋಧಿ ಹುಲ್ಲಿನ ಪ್ರಯೋಗದಿಂದ ಆಶ್ಚರ್ಯಕರ ಪರಿಣಾಮವುಂಟಾಗುತ್ತದೆಂಬುದು ಕಂಡುಬಂದಿದೆ. ಪಿ4ಡಿ1 ನ 3ನೆಯ ಅಂಶವೆಂದರೆ, ಕ್ಯಾನ್ಸರ್ ಕೋಶಗಳನ್ನು ಆಕ್ರಮಿಸಿ ಅವುಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆಂದು ನಂಬಲಾಗಿದೆ. ಮೂರನೆಯ ಘಟಕ ಮೂಕೊಪಾಲಿಸ್ಯಾಕ್ಚರೈಡ್ಸ್. ಇದು ಶರೀರದ ದುರಸ್ತಿ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಅಲ್ಲದೇ ಇದು ಹಾನಿಗೊಂಡ ಹೃದಯ ಹಾಗೂ ಆರ್ಟರಿ ಟಿಶ್ಯೂವನ್ನು ದುರಸ್ತಿಗೊಳಿಸಲು ಸಹಾಯಕ ಕೂಡ.

4ನೆಯ ಘಟಕ ಪತ್ರಹರಿತ್ತು. ರಾಸಾಯನಿಕವಾಗಿ ಇದು ಹಿಮೊಗ್ಲೋಬಿನ್ ಗೆ ಸರಿಸಮಾನ. ಪತ್ರಹರಿತ್ತಿನಲ್ಲಿ 3 ರೀತಿಯ ಲಾಭಗಳಿವೆ. ಇದು ಗಾಯಗಳ ಮೇಲೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗಗಳಲ್ಲಿ ಯೀಸ್ಟ್ (yeast) ನಿರೋಧಕದಂತೆ ಕೆಲಸ ಮಾಡಿದರೆ, ಶರೀರದಲ್ಲಿರುವ ಅನೇಕ ವಿಷಕಾರಕ ವಸ್ತುಗಳನ್ನು ನಿವಾರಿಸುತ್ತದೆ. ಜೊತೆಗೆ ಇದು ಉರಿಯೂತ ನಿವಾರಕ ಗುಣವನ್ನು ಪಡೆದಿದೆ. ಹಾಗಾಗಿ ಇದನ್ನು ಕೀಲು ನೋವು, ಹೊಟ್ಟೆಯ ಅಲ್ಸರ್, ಗಂಟಲು ನೋವು, ದೊಡ್ಡ ಕರುಳಿನ ಊತ ಹಾಗೂ ಇತರ ಉರಿಯೂತಗಳಲ್ಲಿ ಈ ಹಿಂದೆಯೇ ಹೇಳಿದ ಹಾಗೆ ಗೋಧಿ ಗಿಡದ ಪತ್ರಹರಿತ್ತು ಉಪಯುಕ್ತ.

ಸಂಪೂರ್ಣ ಆಹಾರ: ಗೋಧಿಯ ಹುಲ್ಲನ್ನು ಒಂದು ಸಂಪೂರ್ಣ ಆಹಾರ ಎಂದು ತೀರ್ಮಾನಿಸಲಾಗಿದೆ. ಏಕೆಂದರೆ ಅದರಲ್ಲಿ ಮಾನವನ ಶರೀರ ಪೋಷಣೆಗೆ ಬೇಕಾಗುವ ಎಲ್ಲ ಅಮೀನೋ ಆಮ್ಲ, ಆನ್ನಾಂಗ ಹಾಗೂ ಖನಿಜಗಳು ಇವೆ.

1 ಔನ್ಸ್ ಗೋಧಿ ಹುಲ್ಲಿನ ರಸವು 2.5 ಪೌಂಡ್ ತರಕಾರಿಗಳಲ್ಲಿರುವಷ್ಟು ಪೌಷ್ಟಿಕಾಂಶಕ್ಕೆ ಸಮ. 1 ಔನ್ಸ್ ಗೋಧಿ ಹುಲ್ಲಿನ ರಸದಲ್ಲಿ 1 ಔನ್ಸ್ ಕಿತ್ತಲೆ ಹಣ್ಣಿನ ರಸದಲ್ಲಿರುವುದಕ್ಕಿಂತಲೂ ಹೆಚ್ಚು ಪ್ರಮಾಣದ ‘ಸಿ’ ಅನ್ನಾಂಗವಿರುತ್ತದೆ. 1 ಔನ್ಸ್ ಕ್ಯಾರೆಟ್ ರಸದಲ್ಲಿರುವುದರ ಎರಡು ಪಟ್ಟು ‘ಎ’ ಅನ್ನಾಂಗವು ಅಷ್ಟೇ ಪ್ರಮಾಣದ ಗೋಧಿ ಹುಲ್ಲಿನ ರಸದಲ್ಲಿರುತ್ತದೆ. 25 ಎಂಎಲ್ ಗೋಧಿ ಹುಲ್ಲಿನ ರಸದಲ್ಲಿ 1 ಕೆಜಿ ತರಕಾರಿಯಲ್ಲಿರುವಷ್ಟೇ ಅನ್ನಾಂಗಗಳು, ಖನಿಜಾಂಶಗಳು ಹಾಗೂ ಅಮೀನೋ ಆಮ್ಲಗಳು ಇರುತ್ತವೆಂದು ತಿಳಿದು ಬಂದಿದೆ.

ಒಂದು ಎಚ್ಚರಿಕೆ: ಗೋಧಿ ಹುಲ್ಲಿನ ರಸದಲ್ಲಿ ‘ಕೆ’ ಅನ್ನಾಂಗವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತವನ್ನು ಹೆಪ್ಪುಗಟ್ಟಿಸುವ ಗುಣವನ್ನು ಹೊಂದಿದೆ. ಆದ ಕಾರಣ, ರಕ್ತವನ್ನು ತೆಳುವಾಗಿಸುವ ಚಿಕಿತ್ಸೆ ಪಡೆಯುತ್ತಿರುವವರು, ಗೋಧಿಯ ಅಲರ್ಜಿ ಇರುವವರು ವೈದ್ಯರ ಮೇಲುಸ್ತುವಾರಿ ಇಲ್ಲದೇ ಗೋಧಿ ಹುಲ್ಲಿನ ಸೇವನೆ ಮಾಡಕೂಡದು.

ತೃಣವೆಂದು ತುಚ್ಛೀಕರಿಸದಿರಿ: 100 ಗ್ರಾಂ. ಗೋಧಿ ಹುಲ್ಲಿನ ರಸದಲ್ಲಿ ಕೆಳಗೆ ಕೊಟ್ಟಿರುವ ಪೌಷ್ಟಿಕಾಂಶಗಳಿರುತ್ತವೆಂದು ಒಂದು ಅಧ್ಯಯನವು ತಿಳಿಸುತ್ತದೆ.

  • ಕ್ಯಾಲೊರಿಗಳು –         21.0
  • ಕಾರ್ಬೋಹೈಡ್ರೇಟ್ –   2.0 ಗ್ರಾಂ.                 ಅನ್ನಾಂಗ ಎ –    427 ಐಯು
  • ಕೊಬ್ಬು –                  0.06  ಗ್ರಾಂ.              ಅನ್ನಾಂಗ ಬಿ1 –  0.08 ಎಂಜಿ
  • ನೀರು –                    95 ಗ್ರಾಂ.                  ಅನ್ನಾಂಗ ಬಿ2 – 0.13 ಎಂಜಿ
  • ಸೋಡಿಯಂ-             10.3 ಮಿ.ಗ್ರಾಂ.          ಅನ್ನಾಂಗ ಬಿ3 –  0.11 ಎಂಜಿ
  • ಕಬ್ಬಿಣ –                    0.61 ಎಂಜಿ               ಅನ್ನಾಂಗ ಬಿ5 –  6.0 ಎಂಜಿ
  • ಫಾಲಿಕ್ ಆಮ್ಲ –           0.29 ಎಂಸಿಜಿ           ಅನ್ನಾಂಗ ಬಿ6 –  0.2 ಎಂಜಿ
  • ಡಯಟರಿ ನಾರು –       < 0.1 ಗ್ರಾಂ.              ಅನ್ನಾಂಗ ಬಿ12 < 1 ಎಂಸಿಜಿ
  • ಗ್ಲುಕೋಸ್ –              0.80 ಗ್ರಾಂ.               ಅನ್ನಾಂಗ ಸಿ-     3.65 ಎಂಜಿ
  • ಕ್ಯಾಲ್ಸಿಯಂ –           24.2 ಎಂಜಿ                   ಅನ್ನಾಂಗ ಇ –   15.2 ಐಯು
  • ಮ್ಯಾಗ್ನೇಷಿಯಂ-       0.24 ಎಂಜಿ                  ಕ್ಲೋರೋಫಿಲ್-   42.2 ಎಂಜಿ
  • ಸೆಲೆನಿಯಂ –           1ಪಿಪಿಎಂ                       ಖೋಲೈನ್-   92.4
  • ಪೊಟಾಸಿಯಂ –       147 ಎಂಜಿ                     ಸತುವು-  0.33 ಎಂಜಿ
  • ರಂಜಕ          –        75.2 ಎಂಜಿ

ಅಂತರ್ಜಾಲದಲ್ಲಿ ಜಾಲಾಡಿರಿ ಗೋಧಿ ಹುಲ್ಲಿನ ಬಗೆಗೆ ಇನ್ನೂ ಹೆಚ್ಚು ತಿಳಿಯಲು ಕೆಳಗೆ ಕಾಣಿಸಿರುವ ಅಂತರ್ಜಾಲ ವಿಳಾಸಗಳಲ್ಲಿ ಜಾಲಾಡಿರಿ:

1) www.sproutman.com/wheatgrass.html

2) www.wigmore.org/