ಪ್ರಮುಖ ಘಟನಾವಳಿಗಳು:
1850: ಹವಾಯಿಯ ಮೊದಲ ಅಗ್ನಿಶಾಮಕ ಯಂತ್ರ ತರಲಾಯಿತು.
1860: ಅಬ್ರಹಾಮ್ ಲಿಂಕನನ್ನು ಅಮೇರಿಕಾದ 16ನೇ ಅಧ್ಯಕ್ಷ ಮತ್ತು ಮೊದಲ ರಿಪಬ್ಲಿಕನ್ ಆಗಿ ಆಯ್ಕೆ ಮಾಡಲಾಯಿತು.
1894: ಇಲಿ ಹಿಡಿಯುವ ಬಲೆಗೆ ವಿಲ್ಲಿಯಂ ಸಿ ಹುಕ್ಕರ್ ಪೇಟೆಂಟ್ ಪಡೆದರು.
1904: ಗಣಿಗಾರರ ಮೆರವಣಿಗೆಯನ್ನು ಮುನ್ನಡೆಸಿದ ಕಾರಣದಿಂದ ಮಹಾತ್ಮ ಗಾಂಧಿಯವರನ್ನು ಆಫ್ರಿಕಾದಲ್ಲಿ ಬಂಧಿಸಲಾಯಿತು.
1917: ನ್ಯೂಯಾರ್ಕಿನಲ್ಲಿ ಮಹಿಳೆಯರಿಗೆ ಮತ ಹಾಕಲು ಅನುಮತಿ ನೀಡಲಾಯಿತು.
1923: ವಿದ್ಯುತ್ ಕ್ಷೌರಿಕ ಯಂತ್ರಕ್ಕೆ ಜೇಕಬ್ ಕ್ಷಿಕ್ ಪೇಟೆಂಟ್ ಪಡೆದರು.
1952: ಪೆಸಿಫಿಕ್ ಮಹಾಸಾಗರದ ಎನ್ವಿಟಾಕ್ ಅಟಾಲಿನಲ್ಲಿ ಮೊದಲ ಹೈಡ್ರೋಜನ್ ಬಾಂಬ್ ಸ್ಫೋಟವಾಯಿತು.
1962: ಸೌಧಿ ಅರೇಬಿಯಾದಲ್ಲಿ ಗುಲಾಮಗಿರಿಯನ್ನು ಕಾನೂನಿನ ಮೂಲಕ ನಿರ್ಮೂಲನೆ ಮಾಡಲಾಯಿತು.
1996: ಭಾರತದಲ್ಲಿ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಸುಮಾರು 2000 ಜನ ಮೃತ ಪಟ್ಟರು.
2016: ದೆಹೆಲಿಯಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ತುರ್ತು ಪರಿಸ್ಥಿತಿ ಎಂದು ಘೋಷಿಸಿ ಶಾಲಾ ಕಾಲೇಜು ಮತ್ತು ನಿರ್ಮಾಣದ ಕಟ್ಟಡವನ್ನು ಸ್ಥಗಿತಗೊಳಿಸಲು ಘೋಷಿಸಲಾಯಿತು.
ಪ್ರಮುಖ ಜನನ/ಮರಣ:
1840: ಸಿಖ್ಖರ ಸಾಮ್ರಾಜ್ಯದ ಪಂಜಾಬಿನ ನಾಯಕ ಮಹಾರಾಜ ನಾವ್ ನಿಹಾಲ್ ಸಿಂಗ್ ನಿಧನರಾದರು.
1861: ಬಾಸ್ಕೆಟ್ ಬಾಲ್ ಆಟದ ಸಂಶೋಧಕ ಜೇಮ್ಸ್ ನೈಸ್ಮಿತ್ ಜನಿಸಿದರು.
1915: ಮರಾಠಿ ಚಿತ್ರರಂಗದ ನಿರ್ದೇಶಕ, ಚಿತ್ರಕಥೆಗಾರ ಮತ್ತು ಸಂಭಾಷಣೆಕಾರ ದಿನಕರ್ ಡಿ ಪಾಟಿಲ್ ಜನಿಸಿದರು.
1934: ಖ್ಯಾತ ಕೊಂಕಣಿ ಕಾರ್ಯಕರ್ತ, ಲೇಖಕ ಮತ್ತು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾದ ಬಸ್ತಿ ವಾಮನ ಶೆಣೈ ಅವರು ಜನಿಸಿದರು.
1940: ಗಾಯಕಿ, ಗೀತ ರಚನೆಕಾರ್ತಿ ಸೂಲಮಂಗಲಂ ರಾಜಲಕ್ಷ್ಮಿ ಜನಿಸಿದರು.
1982: ಮದ್ರಾಸ್ ಮತ್ತು ಮೈಸೂರು ತಂಡದ ಕ್ರಿಕೆಟ್ ಆಟಗಾರ ಬಿ.ಸಿ.ಆಳ್ವಾ ನಿಧನರಾದರು.
1985: ಖ್ಯಾತ ಹಿಂದಿ ಚಲನಚಿತ್ರ ನಟ ಸಂಜೀವ್ ಕುಮಾರ್ ನಿಧನರಾದರು.
1987: ಮರಾಠಿ ಲೇಖಕ, ನಟ ಬಾಲಚಂದ್ರ ವಾಮನ ಕೇಲ್ಕರ್ ನಿಧನರಾದರು.
2010: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿದ್ದಾರ್ಥ ಶಂಕರ್ ರೇ ನಿಧನರಾದರು.
2013: ಖ್ಯಾತ ಪಾಕಪ್ರವೀಣೆ ಮತ್ತು ಲೇಖಕಿ ತರ್ಲಾ ದಲಾಲ್ ನಿಧನರಾದರು.