Categories
e-ದಿನ

ಮೇ-06

ಪ್ರಮುಖಘಟನಾವಳಿಗಳು:

1542: ಫ್ರಾನ್ಸಿಸ್ ಗ್ಸೇವಿಯರ್ ಮೊತ್ತ ಮೊದಲ ಕ್ರೈಸ್ತ ಪ್ರಚಾರಕರಾಗಿ ಅಂದಿನ ದಿನಗಳಲ್ಲಿ ಪೋರ್ಚುಗೀಸ್ ನೆಲೆಯಾಗಿದ್ದ ಗೋವಾಕ್ಕೆ ಆಗಮಿಸಿದರು. ರೋಮನ್ ಕ್ಯಾಥೋಲಿಕ್ ಪ್ರಚಾರಕರಾದ ಈತ ಭಾರತ, ಮಲಯ ಹಾಗೂ ಜಪಾನ್ ದೇಶಗಳಲ್ಲಿ ಕ್ರೈಸಮತವನ್ನು ಪಸರಿಸಿದವರಲ್ಲಿ ಪ್ರಮುಖರೆನಿಸಿದ್ದಾರೆ.

1840: ಪೆನ್ನಿ ಬ್ಯಾಕ್ ಅಂಚೆ ಚೀಟಿಯು ಗ್ರೇಟ್ ಬ್ರಿಟನ್ ಮತ್ತು ಐರ್ಲ್ಯಾಂಡ್ಗಳಲ್ಲಿ ಚಲಾವಣೆಗೆ ಅಂಗೀಕೃತಗೊಂಡಿತು.

1857: ಮಂಗಲ್ ಪಾಂಡೆಯ ದಂಗೆಯಿಂದ ಪ್ರಾರಂಭಗೊಂಡ ಸಿಪಾಯಿ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಇಂಪನೆಯು ತನ್ನ ಬಂಗಾಳದ ಸೈನ್ಯ ತುಕಡಿ ವಿಭಾಗವಾದ 34ನೇ ರೆಜಿಮೆಂಟ್ ಅನ್ನು ವಿಸರ್ಜಿಸಿತು.

1889: ಐಫೆಲ್ ಗೋಪುರವು ಅಧಿಕೃತವಾಗಿ ಸಾರ್ವಜನಿಕರಿಗೆ ತೆರೆದುಕೊಂಡಿತು.

1916: ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವು ಎಚ್.ವಿ. ನಂಜುಂಡಯ್ಯನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿತು.

1919: ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕರ್ಪೂರ ಶ್ರೀನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ಹಾಸನದಲ್ಲಿ ಆರಂಭಗೊಂಡಿತು.

1940: ಜಾನ್ ಸ್ಟೀಯಿನ್ ಬೆಕ್ ಅವರಿಗೆ ‘ದಿ ಗ್ರೇಪ್ಸ್ ಆಫ್ ರ್ಯಾತ್’ ಕೃತಿಗೆ ಪುಲಿಟ್ಜರ್ ಬಹುಮಾನ ಸಂದಿತು.

1983: ದೊಡ್ಡ ರೀತಿಯಲ್ಲಿ ಸಂವೇದನೆ ಸೃಷ್ಟಿಸಿದ್ದ ‘ಹಿಟ್ಲರ್ ದಿನಚರಿಗಳು’, ಕೇವಲ ವಂಚನಾತ್ಮಕ ಬರಹವೆಂದು ತಜ್ಞರು ನಿರ್ಣಯಿಸಿದರು.

2006: ಹನ್ನೆರಡು ವರ್ಷಗಳ ಬಳಿಕ ಹಾಸನ- ಮಂಗಳೂರು ರೈಲ್ವೇ ಮಾರ್ಗವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು. ರೈಲ್ವೆ ಹಳಿಯನ್ನು ಮೀಟರ್ ಗೇಜ್ ನಿಂದ ನ್ಯಾರೋ ಗೇಜಿಗೆ

2008: ಪೌರಾಣಿಕ ಮಹತ್ವದ ರಾಮಸೇತುವಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ದೊರಕುತ್ತದೆ ಎಂದು ಸಂವಿಧಾನ ತಜ್ಞ ಹಾಗೂ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರು ಸುಪ್ರೀಂಕೋರ್ಟ್ ಮುಂದೆ ಹೇಳಿದರು.

ಪ್ರಮುಖಜನನ/ಮರಣ:

1856: ಪ್ರಪ್ರಥಮ ಬಾರಿಗೆ ಉತ್ತರ ಧ್ರುವವನ್ನು ತಲುಪಿದ ಅಮೆರಿಕದ ರಾಬರ್ಟ್ ಎಡ್ವಿನ್ ಪಿಯರೆ ಪೆನ್ಸಿಲ್ವೇನಿಯಾದ ಕ್ರೆಸ್ಸನ್ ಎಂಬಲ್ಲಿ ಜನಿಸಿದರು.

1861: ಸ್ವಾತಂತ್ರ್ಯ ಹೋರಾಟಗಾರ, ಕಾನೂನು ತಜ್ಞ, ಸ್ವರಾಜ್ ಪಕ್ಷದ ಸಹ ಸಂಸ್ಥಾಪಕ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೋತಿಲಾಲ್ ನೆಹರೂ ಆಗ್ರಾದಲ್ಲಿ ಜನಿಸಿದರು.

1871: ಫ್ರೆಂಚ್ ರಸಾಯನ ಶಾಸ್ತ್ರಜ್ಞ ವಿಕ್ಟರ್ ಗ್ರಿಗ್ನಾರ್ಡ್ ಅವರು ಫ್ರಾನ್ಸಿನ ಚೆರ್ಬೌರ್ಗ್ ಎಂಬಲ್ಲಿ ಜನಿಸಿದರು. ‘ಗ್ರಿಗ್ನಾರ್ಡ್ ರಿಯಾಕ್ಷನ್’ ಎಂಬ ತಮ್ಮ ಹೆಸರಿನ ಸಂಶೋಧನೆಗೆ ಹೆಸರಾಗಿರುವ ಇವರಿಗೆ 1912 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತ್ತು.

1904: ಸ್ವೀಡಿಷ್ ಸಾಹಿತಿ ಹ್ಯಾರಿ ಮಾರ್ಟಿನ್ಸನ್ ಅವರು ಸ್ವೀಡನ್ನಿನ ಜಮ್ಶೋಗ್ ಎಂಬಲ್ಲಿ ಜನಿಸಿದರು. ಇಪ್ಪತ್ತನೆಯ ಶತಮಾನದ ಸ್ವೀಡಿಷ್ ಕಾವ್ಯದಲ್ಲಿ ಮಹತ್ವದ ಸಾಧಕರೆಂದು ಪರಿಗಣಿತರಾಗಿದ್ದ ಇವರಿಗೆ 1974 ವರ್ಷದ ನೊಬೆಲ್ ಶ್ರೇಷ್ಠ ಸಾಹಿತ್ಯ ಪುರಸ್ಕಾರ ಸಂದಿತ್ತು.

1928: ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರು ಶಿವಮೊಗ್ಗದಲ್ಲಿ ಜನಿಸಿದರು. ಕತೆ, ಕಾದಂಬರಿ, ಚಲನಚಿತ್ರಗಳಿಗೆ ಚಿತ್ರಕತೆಗಳನ್ನು ಕೂಡಾ ಇವರು ರಚಿಸಿದ್ದರು.

1929: ಅಮೆರಿಕದ ರಸಾಯನ ಶಾಸ್ತ್ರಜ್ಞರಾದ ಪಾಲ್ ಲೌಟೆರ್ಬರ್ ಅವರು ಓಹಿಯೋ ಪ್ರಾಂತ್ಯದ ಸಿಡ್ನಿ ಎಂಬಲ್ಲಿ ಜನಿಸಿದರು. ಇವರಿಗೆ ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್ (MRI) ಸಂಶೋಧನೆಗಾಗಿ 2003 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1951: ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್ ಅವರು ಕೂನೂರಿನಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಗೌರವಗಳೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಇವರು ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷತೆ, ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷತೆ ಮತ್ತು ಕಲಾಕ್ಷೇತ್ರದ ನಿರ್ದೇಶಕತ್ವದ ಗೌರವಗಳನ್ನೂ ಗಳಿಸಿದ್ದಾರೆ.

1956: ಅರ್ಥಶಾಸ್ತ್ರದ ಪ್ರಾಧ್ಯಾಪನ ವೃತ್ತಿ ನಡೆಸಿದ ಇವರು ಸದಭಿರುಚಿಯ ಹಾಸ್ಯ ಬರಹಗಳಿಗೆ ಕನ್ನಡದಲ್ಲಿ ಹೆಸರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ‘ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ’ ಮುಂತಾದ ಅನೇಕ ಪ್ರಶಸ್ತಿಗಳನ್ನು ಅವರು ಗಳಿಸಿರುವುದರ ಜೊತೆ ಜೊತೆಗೆ ಏಷಿಯಾದ ಅಂತಾರಾಷ್ಟ್ರೀಯ ಸಾಧನಶೀಲ ಮಹಿಳೆಯರ ಕುರಿತಾದ ಪುಸ್ತಕ ‘ರೆಫರೆನ್ಸ್‌ ಏಷಿಯಾ’ದಲ್ಲಿ ಸೇರ್ಪಡೆಯಾಗಿದ್ದಾರೆ.

1946: ಖ್ಯಾತ ಭಾರತೀಯ ವಕೀಲ ಭುಲಾಭಾಯಿ ದೇಸಾಯಿ ಅವರು ತಮ್ಮ 68ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ನಿಧನರಾದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಾರತ ರಾಷ್ಟ್ರೀಯ ಸೇನೆಯ (ಐ ಎನ್ ಎ) ಅಧಿಕಾರಿಗಳನ್ನು ಬ್ರಿಟಿಷ್ ಸರ್ಕಾರ 1945ರಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಐ ಎನ್ ಎ ಅಧಿಕಾರಿಗಳ ಪರವಾಗಿ ವಾದಿಸುವ ಮೂಲಕ ದೇಸಾಯಿ ವ್ಯಾಪಕ ಪ್ರಸಿದ್ಧಿ ಪಡೆದರು.

1949: ನೊಬೆಲ್ ಪುರಸ್ಕೃತ ಬೆಲ್ಜಿಯನ್-ಫ್ರೆಂಚ್ ಕವಿ ಮತ್ತು ನಾಟಕಕಾರ ಮಾರೈಸ್ ಮೇಟರ್ಲಿಂಕ್ ಅವರು ಫ್ರಾನ್ಸಿನ ನೈಸ್ ಎಂಬಲ್ಲಿ ನಿಧನರಾದರು. ಇವರಿಗೆ 1911 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2006: ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ’ ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ ಅವರು ತಮ್ಮ 87ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

2007: ಸಂಗೀತ ವಿದುಷಿ, ಸಮಾಜ ಸೇವಕಿ ಚೊಕ್ಕಮ್ಮ ಎನ್. ಎನ್. ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಪಿಟೀಲು ಚೌಡಯ್ಯ ಮತ್ತು ವಿದ್ವಾನ್ ದೇವೇಂದ್ರಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಚೊಕ್ಕಮ್ಮ ಅನೇಕ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಚೊಕ್ಕಮ್ಮ ಅವರು ಹಿರಿಯ ಅಧಿಕಾರಿ ದಿವಂಗತ ಎನ್. ನರಸಿಂಹ ಅಯ್ಯಂಗಾರ್ ಅವರ ಪತ್ನಿ.