Categories
ಯಕ್ಷಗಾನ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಧರ್ ಭಂಡಾರಿ ಪುತ್ತೂರು

ಯಕ್ಷಗಾನ ಕಲೆಯನ್ನೇ ಸಾಧನಾ ಪಥವಾಗಿಸಿಕೊಂಡ ಹಿರಿಯ ಕಲಾಚೇತನ ಡಾ. ಶ್ರೀಧರ್ ಭಂಡಾರಿ. ಯಕ್ಷಗಾನ ಕಲಾವಿದ, ಶಿಕ್ಷಕ, ಸಂಘಟಕ ಹಾಗೂ ಮೇಳದ ಮುಖ್ಯಸ್ಥರಾಗಿ ಮಹತ್ವಪೂರ್ಣ ಸೇವೆ.
ಯಕ್ಷಗಾನ ಕಲೆ ಶ್ರೀಧರ್ ಭಂಡಾರಿ ಅವರಿಗೆ ರಕ್ತಗತ. ತಂದೆ ಶೀನಪ್ಪ ಭಂಡಾರಿ ಯಕ್ಷಗಾನದ ದಂತಕಥೆ. ೧೯೪೫ರ ಅಕ್ಟೋಬರ್ ಒಂದರಂದು ಜನಿಸಿದ ಶ್ರೀಧರ್ ಭಂಡಾರಿ ೯ನೇ ವಯಸ್ಸಿಗೆ ತೆಂಕುತಿಟ್ಟಿನ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ. ಐದನೇ ತರಗತಿವರಗಷ್ಟೇ ವಿದ್ಯಾಭ್ಯಾಸ. ೧೧ರ ಹರೆಯದಿಂದಲೂ ಯಕ್ಷಗಾನವೇ ಬದುಕು-ಭಾವ. ಹೆಸರಾಂತ ಮೇಳಗಳಾದ ಶ್ರೀ ಬಳ್ಳಂಬೆಟ್ಟ ಮೇಲ, ಶ್ರೀ ಧರ್ಮಸ್ಥಳ ಮೇಳ, ಶ್ರೀ ಮಹಾಲಿಂಗೇಶ್ವರ ಮೇಳ, ಕಾಂತೇಶ್ವರ ಮೇಳಗಳಲ್ಲಿ ೬೫ ವರ್ಷಗಳ ಕಾಲ ನಿರಂತರ ಕಲಾಸೇವೆ. ವೃತ್ತಿ ಕಲಾವಿದರಾಗಿ, ಸಂಘಟಕರಾಗಿ ಅನನ್ಯ ದುಡಿಮೆ. ನೂರಾರು ಬಾರಿ ಭಾರತದ ಉದ್ದಗಲಕ್ಕೂ ಯಕ್ಷಗಾನ ಪ್ರದರ್ಶನ. ೬೨ರ ಇಳಿವಯಸ್ಸಿನಲ್ಲಿ ಮೂರು ನಿಮಿಷಗಳಲ್ಲಿ ೧೪೮ ಬಾರಿ ಗಿರಕಿಗಳನ್ನು ಹೊಡೆದು ದಾಖಲೆ ಸ್ಥಾಪಿಸಿರುವ ಅಪೂರ್ವ ಕಲಾವಿದ, ಯಕ್ಷಗಾನ ಮೇಳಗಳ ಯಶಸ್ವಿ ಆಯೋಜನೆ. ದೇಶ-ವಿದೇಶಗಳಲ್ಲಿ ಪ್ರದರ್ಶನ, ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಅಮೆರಿಕದ ಹೂಸ್ಟನ್ ವಿ.ವಿ ಯಿಂದ ಗೌರವ ಡಾಕ್ಟರೇಟ್ ಸೇರಿ ೬೦೦ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾದ ಅಭಿಜಾತ.