Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅರವಿಂದ ನಾಡಕರ್ಣಿ

ಮುಂಬಯಿಯ ನಾಕ ನರಕಗಳೆರಡರ ಜೊತೆಗೆ ಮುಂಬಯಿ ಮಹಾನಗರವನ್ನು ತಮ್ಮ ಕಾವ್ಯದ ಕೇಂದ್ರವಾಗಿಸಿಕೊಂಡ ಪ್ರಖರ ನಗರಪ್ರಜ್ಞೆಯ ನವ್ಯ ಕವಿ ಶ್ರೀ ಅರವಿಂದ ನಾಡಕರ್ಣಿ ಅವರು.
ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ೧೯೨೧ರಲ್ಲಿ ಜನನ. ಜರಾಸಂಧ, ನಾ ಭಾರತೀಕುಮಾರ, ನಗರಾಯಣ, ಆಹತ ಇವು ಶ್ರೀಯುತರ ಪ್ರಮುಖ ಕೃತಿಗಳು.
ನಗರಪ್ರಜ್ಞೆಯ ಅನೇಕ ಸ್ಥಳಗಳ ಸಂಪೂರ್ಣ ಅಭಿವ್ಯಕ್ತಿಗೆ ತೊಡಗಿದ ನಾಡಕರ್ಣಿ ಅವರ ಕಾವ್ಯದಲ್ಲಿ ನಗರದ ಗಂಧರ್ವಲೋಕ, ರಾಕ್ಷಸ ಲೋಕಗಳೆರಡೂ ಮೈದಳೆದಿವೆ. ಮಹಾನಗರದ ನಾಡಿಬಡಿತಕ್ಕೆ ತೀವ್ರವಾಗಿ ಸ್ಪಂದಿಸಿದ ಅವರ ನಗರಾಯಣ ಕನ್ನಡದ ವೇಸ್ಟ್ ಲ್ಯಾಂಡ್ ಎನ್ನಬಹುದು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನವ್ಯದ ಮುಖ್ಯ ಕವಿಗಳಲ್ಲೊಬ್ಬರು ಶ್ರೀಯುತ ನಾಡಕರ್ಣಿ ಅವರು.