ಪ್ರಮುಖ ಘಟನಾವಳಿಗಳು:
1600: ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.
1861: ಚಿರಾಪುಂಜಿಯಲ್ಲಿ 22,990 ಮಿ.ಮೀ ಮಳೆಯಾಗಿ ವಿಶ್ವ ದಾಖಲೆಯಾಯಿತು.
1879: ಸಾರ್ವಜನಿಕವಾಗಿ ವಿದ್ಯುತ್ ಪ್ರಕಾಶಮಾನ ದೀಪದ ಮೊದಲ ಪ್ರದರ್ಶನವನ್ನು ಥಾಮಸ್ ಆಲ್ವಾ ಎಡಿಸನ್ ಅವರು ನೀಡಿದರು.
1929: ಜವಹರಲಾಲ್ ನೆಹರು ಅವರ ನೇತೃತ್ವದ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ “ಪೂರ್ಣಸ್ವರಾಜ್” ನಿರ್ಣಯವನ್ನು ಅಳವಡಿಸಿಕೊಂಡಿತು.
1938: ಅಮೇರಿಕಾದಲ್ಲಿ ಚಾಲಕರಿಗೆ ಮೊದಲ ಬಾರಿಗೆ ಉಸಿರಾಟದ ಪರೀಕ್ಷೆಯ ಮೂಲಕ ಮದ್ಯಪಾನವನ್ನು ಮಾಡಿರುವುದರ ಬಗ್ಗೆ ಪತ್ತೆ ಮಾಡುವುದನ್ನು ಪರಿಚಯಿಸಲಾಯಿತು.
1944: ಹಂಗೇರಿ ಜರ್ಮನಿಯ ಮೇಲೆ ಯುದ್ದ ಘೋಷಿಸಿತು.
1984: ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
1996: ಭಾರತದಲ್ಲಿ ಚಿನ್ನದ ಅಮದು ನೀತಿಯನ್ನು ಉದಾರಿಕರಣ ಮಾಡಲಾಯಿತು.
1999: ಹೈಜಾಕ್ ಮಾಡಲಾದ ಇಂಡಿಯನ್ ಏರ್ಲೈನ್ಸ್ ವಿಮಾನ 814ನ್ನು ಬಿಡಿಸಲು ಮಾತುಕಥೆಗಳು ತೀರ್ಮಾನಕ್ಕೆ ಬಂದವು.
1999: ಥೇಮ್ಸ್ ನದಿಯ ದಂಡೆಗಳ ಮೇಲೆ ವಿಶ್ವದ ಅತಿ ದೊಡ್ಡ ಫೆರ್ರಿಸ್ ಚಕ್ರ ‘ಲಂಡನ್ ಐ’ಯನ್ನು ತೆರೆಯಲಾಯಿತು.
ಪ್ರಮುಖ ಜನನ/ಮರಣ:
1706: ಪಾಂಡಿಚೆರ್ರಿಯ ಸಂಸ್ಥಾಪಕ ಫ್ರಾಂಕಾಯಿಸ್ ಮಾರ್ಟಿನ್ ನಿಧನರಾದರು.
1738: ಭಾರತದ ಗವರ್ನರ್ ಜೆನರಲ್ ಆಗಿದ್ದ ಲಾರ್ಡ್ ಚಾರ್ಲ್ಸ್ ಕಾರ್ನವಾಲಿಸ್ ಜನಿಸಿದರು.
1898: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕಂದಾಯ ಸಚಿವರಾಗಿದ್ದ ಕೆ.ಬಿ.ಸಹಾಯ್ ಜನಿಸಿದರು.
1908: ಮೊದಲ ಮಹಿಳಾ ಐಎಎಸ್ ಅಧಿಕಾರಿಯಾದ ಇಶಾ ಬಸಂತ್ ಜೋಷಿ ಜನಿಸಿದರು.
1925: ಶ್ರೇಷ್ಠ ಹಿಂದಿ ಸಾಹಿತಿ ಮತ್ತು ಮಾಜಿ ಐಎಎಸ್ ಅಧಿಕಾರಿ ಶ್ರೀಲಾಲ್ ಶುಕ್ಲಾ ಜನಿಸಿದರು.
1936: ಪ್ರಖ್ಯಾತ ಸಾಗರ ಜೀವಶಾಸ್ತ್ರಜ್ಞ ಡಾ.ಸೈಯದ್ ಝಹೂರ್ ಖಾಸಿಂ ಜನಿಸಿದರು.
1965: ಭಾರತದ ಕ್ರಿಕೆಟ್ ಆಟಗಾರ ಲಕ್ಷ್ಮಣ ಶಿವರಾಮಕೃಷ್ಣನ್ ಜನಿಸಿದರು.
1971: ಭಾರತೀಯ ಭೌತಶಾಸ್ತ್ರಜ್ಞ ವಿಕ್ರಂ ಸಾರಾಭಾಯ್ ಅವರು ನಿಧನರಾದರು.
1986: ಭಾರತದ ಕೇಂದ್ರ ಸರ್ಕಾರದ ಆರೋಗ್ಯ ಸಚಿವರಾಗಿದ್ದ ರಾಜ್ ನಾರಾಯಣ್ ನಿಧನರಾದರು.
2001: ತಮಿಳು ಭಾಷೆಯ ಲೇಖಕ, ಪತ್ರಕರ್ತ ಮತ್ತು ವಿಮರ್ಶಕ ಟಿ.ಎಂ.ಚಿದಂಬರ ರಘುನಾಥನ್ ನಿಧನರಾದರು.