Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ರಾಮದೇವ ರಾಕೆ

ದಲಿತ ಹೋರಾಟದ ಮಂಚೂಣಿಯಲ್ಲಿದ್ದ ರಾಮದೇವ ರಾಕೆಯವರು ಆಚಿದೋಲನ-ಪಂಚಮ ಪತ್ರಿಕೆಗಳ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದವರು.

ಪಂಚಮ ನಿಯತಕಾಲಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ರಾಮದೇವ ರಾಕೆಯವರು ನಂತರ ಪ್ರಜಾವಾಣಿ ಸಮೂಹ ಸೇರಿದರು. ವಿಶೇಷ ವರದಿ, ಶೋಧನಾ ವರದಿಗಳಲ್ಲಿ ನಿಪುಣತೆ ಸಾಧಿಸಿದ ಇವರದ್ದು ರಾಜಕೀಯ ವಿಶ್ಲೇಷಣೆಯಲ್ಲಿ ಎತ್ತಿದ ಕೈ.

ಚುನಾವಣಾ ವಿಶ್ಲೇಷಣೆ ಮಾಡುವಲ್ಲಿ ನಿಪುಣರಾದ ರಾಮದೇವ ರಾಕೆಯವರು ಗುಲಬರ್ಗಾದ ಪ್ರಜಾವಾಣಿ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ದಲಿತ ಸಮೂದಾಯದ ಜಾಗೃತಿಗಾಗಿ ಆರಂಭವಾದ ಕನ್ನಡದ ಪ್ರಪ್ರಥಮ ಪತ್ರಿಕೆ ‘ಪಂಚಮ’ವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖ. ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಠಪ್ಪ ಗೋರಂಟ್ಲಿ

ಪತ್ರಕರ್ತರಾಗಿ ಹಾಗೂ ಸಾಹಿತಿಗಳಾಗಿ ಹೆಸರಾಗಿರುವ ವಿಠಪ್ಪ ಗೋರಂಟ್ಲಿ ಅವರು ಲಂಕೇಶ್‌ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದವರು.

ಕೊಪ್ಪಳ ಪ್ರದೇಶದಲ್ಲಿ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠಪ್ಪ ಗೋರಂಟ್ಲಿ ಅನೇಕ ದೈನಿಕ ಹಾಗೂ ನಿಯತಕಾಲಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾವ್ಯ, ಕತೆ, ಜೀವನಚರಿತ್ರೆ ಹಾಗೂ ಅಂಕಣ ಬರೆಹಗಳ ಬಗ್ಗೆ ಅನೇಕ ಕೃತಿಗಳನ್ನು ಹೊರತಂದಿರುವ ಇವರು ಅನೇಕ ಜನಪರ ಹೋರಾಟಗಳಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ತನಿಖಾ ವರದಿ ಪ್ರಶಸ್ತಿಯು ೨೦೦೩ರಲ್ಲಿ ಲಭಿಸಿದೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎ.ಸಿ.ರಾಜಶೇಖರ್

ಭಾಷಾಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಅಟ್ಟೂರು ರಾಜಶೇಖರ ಅವರು ಪತ್ರಿಕೋದ್ಯಮ ಪ್ರವೇಶ ಮಾಡಿದ್ದು ಪ್ರಜಾವಾಣಿ ದೈನಿಕದ ಮೂಲಕ. ಎರಡೂವರೆ ದಶಕಗಳಿಗೂ ಹೆಚ್ಚು ಸಮಯ ಪ್ರಜಾವಾಣಿಯ ಸಂಪಾದಕೀಯ ವರ್ಗದಲ್ಲಿ ಕಾರ್ಯ ನಿರ್ವಹಿಸಿದ ರಾಜಶೇಖರ್ ಅವರು ಸಹಾಯಕ ಸಂಪಾದಕರಾಗಿಯೂ ಕೆಲಸ ಮಾಡಿದವರು.

ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ ಮಾಡಿದ ಅಬ್ಬರು ರಾಜಶೇಖ‌ ಅವರು ಕಸ್ತೂರಿ ವಾಹಿನಿಯ ಸುದ್ದಿ ಹಾಗೂ ಸಂವಾದ ಮಾಧ್ಯಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟಾರೆ ಮುವ್ವತ್ತೂರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ ರಾಜಶೇಖರ್ ಪ್ರಸ್ತುತ ರಾಮನಗರದ ಆರಂಭ ಕನ್ನಡ ದೈನಿಕದ ಸಂಪಾದಕರು.

ರಾಜಶೇಖರ ಅವರಿಗೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಮಂಗಳ ಎಂ.ಸಿ ವರ್ಗೀಸ್ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕುಸುಮಾ ಶಾನಭಾಗ್

ಕನ್ನಡದ ಪ್ರಸಿದ್ಧ ಬರಹಗಾರರಾದ ಭಾರತೀಸುತ ಅವರ ಪುತ್ರಿ ಕುಸುಮಾ ಶಾನಭಾಗ್ ಅವರು ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ವರದಿಗಳನ್ನು ನೀಡಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸುಮಾರು ಮೂರುದಶಕಗಳ ಕಾಲ ಕಾರ್ಯ ನಿರ್ವಹಿಸಿದ ಕುಸುಮಾ ಶಾನಭಾಗ್ ಅವರು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಸಮಾಜದ ಎಲ್ಲ ಸ್ಥರದ ಜನತೆಯ ನೋವು ನಲಿವುಗಳನ್ನು ಪತ್ರಿಕೆಗಳಲ್ಲಿ ಪ್ರತಿಬಿಂಬಿಸಿದ ಮಹಿಳಾ ಪತ್ರಕರ್ತರಲ್ಲಿ ಕುಸುಮಾ ಪ್ರಮುಖರು. ಅವರ ‘ಕಾಯದ ಕಾರ್ಪಣ್ಯ’ ಕೃತಿಯು ಅತ್ಯಂತ ವಿಶಿಷ್ಟವಾದ ಕೃತಿ.

ಮಹಿಳಾಪರ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸಿದ್ಧಪಡಿಸಿದ ಕುಸುಮಾ ಅವರಿಗೆ ಅನೇಕ ವೃತ್ತಿ ಸಂಸ್ಥೆಗಳು ಗೌರವಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಟಿ. ವೆಂಕಟೇಶ್ (ಈ ಸಂಜೆ)

ಮಾಧ್ಯಮ ಮತ್ತು ಮುದ್ರಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವಿರಳ ಪತ್ರಿಕೋದ್ಯಮಿ ಟಿ. ವೆಂಕಟೇಶ್, ಕನ್ನಡಾಭಿಮಾನದಿಂದಲೇ ಮೈದಳೆದ ಅಭಿಮಾನಿ ಸಂಸ್ಥೆಯ ಒಡೆಯ.
ಸಾಮಾನ್ಯ ರೈತಾಪಿ ಕುಟುಂಬದವರಾದ ವೆಂಕಟೇಶ್ಗೆ ಜೀವನಾಧಾರವಾಗಿದ್ದ ಭೂಮಿಯನ್ನು ಮಠಕ್ಕೆ ದಾನ ಮಾಡಿದ ತಾಯಿಯೇ ಆದರ್ಶ. ಬಡತನದ ನಡುವೆ ಡಿಪ್ಲೊಮಾ ವ್ಯಾಸಂಗ, ಸರ್ಕಾರಿ ನೌಕರಿಗೆ ಹೋಗದೆ ಸ್ವಂತ ಉದ್ಯೋಗಕ್ಕೆ ಮಿಡಿದ ಮನಸ್ಸು, ಎಲೆಕ್ಟಿಕಲ್ ಗುತ್ತಿಗೆದಾರರಾಗಿದ್ದವರಿಗೆ ವರನಟ ರಾಜ್ ಕಂಡರೆ ಪಂಚಪ್ರಾಣ. ಗೋಕಾಕ್ ಚಳವಳಿಗೆ ಧುಮುಕಿದ ಮೇಲೆ ಮೈಮನಗಳಲ್ಲಿ ಕನ್ನಡದ್ದೇ ಝೇಂಕಾರ. ಕನ್ನಡಪರ ದನಿಯಾಗಿ ೧೯೮೨ರಲ್ಲಿ ‘ಅಭಿಮಾನಿ’ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ. ೧೯೮೬ರಲ್ಲಿ ‘ಅಭಿಮಾನಿ’ ಸಂಸ್ಥೆ ಸ್ಥಾಪಿಸಿ ಮುದ್ರಣ ಕ್ಷೇತ್ರಕ್ಕೂ ಅಡಿ. ಮುಂದಿನದ್ದು ಇತಿಹಾಸ. ೧೯೮೫ರಲ್ಲಿ ಆರಂಭಿಸಿದ ‘ಅರಗಿಣಿ’ ಸಿನಿಮಾ ವಾರಪತ್ರಿಕೆ, ೧೯೮೯ರಲ್ಲಿ ಶುರು ಮಾಡಿದ ‘ಈ ಸಂಜೆ’ ಸಂಜೆಪತ್ರಿಕೆಗಳ ಮುಖೇನ ಮಾಧ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತು. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಮುದ್ರಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಅಪೂರ್ವ ಸಾಧನೆ. ಮೂರೂವರೆ ದಶಕದ ಬಳಿಕವೂ ಜನಪ್ರಿಯತೆ-ಉದ್ಯಮಶೀಲತೆ ಉಳಿಸಿಕೊಂಡು ಮುನ್ನಡೆದಿರುವ ಸಾಧಕ ಪತ್ರಿಕೋದ್ಯಮಿ.

Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸಿ. ಮಹೇಶ್ವರನ್

ಮಾಧ್ಯಮ ಲೋಕದ ವಿಶೇಷ ಪ್ರತಿಭೆ ಹಿರಿಯ ಪತ್ರಿಕೋದ್ಯಮಿ ಸಿ. ಮಹೇಶ್ವರನ್. ಶತಮಾನದ ಇತಿಹಾಸವುಳ್ಳ ‘ಸಾಫ್ಟಿ’ ಪತ್ರಿಕೆಯ ಸಂಪಾದಕರು, ಪ್ರಸಿದ್ಧ ಅಂಕಣಕಾರರೂ ಸಹ.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸಿ. ಮಹೇಶ್ವರನ್ ಅವರು ಬಿ.ಎ. ಪದವೀಧರರು. ಬರೆವಣಿಗೆ ಆಸಕ್ತಿಯ ಕ್ಷೇತ್ರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮಾನ ಹಿಡಿತದ ವಿಶೇಷ. 1985ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ, ಪ್ರಜಾವಾಣಿ, ಸುಧಾ, ಸುದ್ದಿಸಂಗಾತಿ, ಮುಂಬಯಿನ ಪಯೋನೀ ಆಂಗ್ಲ ಪತ್ರಿಕೆಗಳ ಅಂಕಣಕಾರ. 35 ವರ್ಷಗಳ ಸುದೀರ್ಘ-ಪಕ್ವ ಅನುಭವ. ಸ್ವಾತಂತ್ರ್ಯ ಸಂಗ್ರಾಮಕ್ಕೆ ದನಿಯಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ 121 ವರ್ಷಗಳ ಇತಿಹಾಸವುಳ್ಳ ಸಾದ್ವಿ ಕನ್ನಡ ಸಂಜೆ ದಿನಪತ್ರಿಕೆಗೆ 1995ರಲ್ಲಿ ಮಾಲೀಕ-ಸಂಪಾದಕರಾಗಿ ಹೊಸ ಹೆಜ್ಜೆ. 25 ವರ್ಷಗಳಿಂದಲೂ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ. ‘ಸಾಧಿ’ ಇನ್ಬೈಲ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ. ಸಾದ್ವಿ ಫೌಂಡೇಶನ್ ಮೂಲಕ ಹತ್ತಾರು ಸಾಮಾಜಿಕ ಕಾರ್ಯ- ಜನಜಾಗೃತಿ ಕೈಗೊಂಡ ಹಿರಿಮೆ. ಅವಿಚ್ಛಿನ್ನ ರಾಷ್ಟ್ರೀಯತೆ, ಆದರ್ಶದಿಂದಲೇ ನೆಲೆ-ಬೆಲೆ ದಕ್ಕಿಸಿಕೊಂಡ ವಿಶಿಷ್ಟ-ಮಾದರಿ ಪತ್ರಿಕೋದ್ಯಮಿ.

Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಇಂದೂಧರ ಹೊನ್ನಾಪುರ

ಪತ್ರಿಕಾ ಶಿಕ್ಷಣ ಪಡೆದು ಪ್ರಜಾವಾಣಿ ಪತ್ರಿಕೆಯ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಇಂದೂಧರ ಹೊನ್ನಾಪುರ ಅವರು ತಮ್ಮ ತನಿಖಾ ವರದಿಗಳ ಮೂಲಕ ಹೆಸರು ಮಾಡಿದವರು. ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರರಲ್ಲೊಬ್ಬರಾಗಿದ್ದು ಹಲವಾರು ತನಿಖಾ ಹಾಗೂ ಮಾನವೀಯ ವರದಿಗಳನ್ನು ಸಿದ್ದಪಡಿಸಿದ ಹೆಗ್ಗಳಿಕೆ ಇವರದು.
ಮುಂಗಾರು ದೈನಿಕದ ಸಂಪಾದಕರಾಗಿದ್ದು, ನಂತರ ಸುದ್ದಿ ಸಂಗಾತಿ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇಂದೂಧರ ಹೊನ್ನಾಪುರ ಅವರು ಪ್ರಸ್ತುತ
ಸಂವಾದ ಮಾಸಿಕದ ಸಂಪಾದಕರು.
ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಈಶ್ವರ ದೈತೋಟ

ಪತ್ರಿಕೋದ್ಯಮ ಪದವೀಧರರಾದ ಈಶ್ವರ ದೈತೋಟ ೧೯೭೦ರ ದಶಕದಲ್ಲಿ ಉದಯವಾಣಿ, ರಾಜಧಾನಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ಈಶ್ವರ ದೈತೋಟ ಅವರು ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದು, ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ, ನಿರೂಪಕರಾಗಿ ಮಾಧ್ಯಮಗಳಲ್ಲಿ ಅನೇಕ ನವೀನ ಪ್ರಯೋಗಗಳನ್ನು ಕೈಗೊಂಡವರು. ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೊಸದೊಂದು ಆಯಾಮ ಒದಗಿಸಿದ ದೈತೋಟ ಅವರು ಅನೇಕ ಪತ್ರಿಕೋದ್ಯಮ ಕುರಿತ ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ. ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.
ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಈಶ್ವರ ದೈತೋಟ ಅವರು ೨೦ಕ್ಕೂ ಅಧಿಕ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ರಂಗದ ಅಧಿಕೃತ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಇವರು ಹಲವಾರು ಮಾಧ್ಯಮ ಕಾರ್ಯಾಗಾರಗಳನ್ನು

Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಭವಾನಿ ಎನ್. ಲಕ್ಷ್ಮಿನಾರಾಯಣ

ಏಳು ದಶಕಗಳಿಂದ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕಬಳ್ಳಾಪುರದ ಭವಾನಿ ಎನ್. ಲಕ್ಷ್ಮೀನಾರಾಯಣ ಅವರು ಛಾಯಾಚಿತ್ರ ಅಂಕಣವನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಆರಂಭಿಸಿದ ಮೊದಲಿಗರು. ಮದರಾಸು, ಮುಂಬಯಿ ಹಾಗೂ ಬೆಂಗಳೂರಿನ ಚಲನಚಿತ್ರ ಚಟುವಟಿಕೆಗಳನ್ನು ನಿರಂತರವಾಗಿ ಛಾಯಾಗ್ರಹಣ ಮಾಡುತ್ತಿದ್ದ ಲಕ್ಷ್ಮಿನಾರಾಯಣ ಸುಧಾ ವಾರಪತ್ರಿಕೆಯಲ್ಲಿ ಸಿನಿಮಾಂಕಣ, ಮಯೂರ ಮಾಸಿಕದಲ್ಲಿ ಸಾಹಿತಿಗಳ ಛಾಯಾ ಅಂಕಣವನ್ನು ಆರಂಭಿಸಿದರು.
ಪತ್ರಿಕಾ ಛಾಯಾಗ್ರಾಹಕರಾಗಿ ಗೋಕುಲ, ಪ್ರಜಾಮತ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ರಾಜ್ ಸೇರಿದಂತೆ ಛಾಯಾಚಿತ್ರ ಕುರಿತಂತೆ ಹಲವು ಪುಸ್ತಕಗಳನ್ನು ಭವಾನಿ ಹೊರತಂದಿದ್ದಾರೆ.

Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಪಿ.ಎಂ. ಮಣ್ಣೂರ

ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಪಿ.ಎಂ. ಮಣ್ಣೂರ ಕಲಬುರ್ಗಿಯಲ್ಲಿ ಸತ್ಯಕಾಮ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪಿ.ಎಂ. ಮಣ್ಣೂರ ಅವರ ಕವನ ಸಂಕಲನ ಮತ್ತು ಸಂಪಾದಕೀಯ ಸಂಗ್ರಹವೂ ಪ್ರಕಟವಾಗಿದೆ.
ಮಣ್ಣೂರ ಅವರು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪತ್ರಕರ್ತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಕಲಬುರ್ಗಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಕಲಬುರ್ಗಿಯಲ್ಲಿ ಕಲಾವಿದರ ಸಂಘ ಸ್ಥಾಪಿಸಿ ಸಕ್ರಿಯರಾಗಿರುವ ಮಣ್ಣೂರ ಅವರ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಸನ್ಮಾನಿಸಿವೆ. ಕರ್ನಾಟಕ ಪತ್ರಿಕಾ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಗೌರವಗಳು ಇವರಿಗೆ ಸಂದಿವೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಸಂಧ್ಯಾ ಸತೀಶ್ ಪೈ

ಮಣಿಪಾಲದ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕಿಯಾಗಿರುವ ಡಾ|| ಸಂಧ್ಯಾ ಪೈ ವಾರಪತ್ರಿಕೆ ‘ತರಂಗ’ದ ಪ್ರಧಾನ ಸಂಪಾದಕರಾಗಿ ಓದುಗರ ಮನ ಮುಟ್ಟುವಂತೆ ಅನೇಕ ಅಂಕಣಗಳನ್ನು ಸತತವಾಗಿ ಬರೆಯುತ್ತಾ ಬಂದಿದ್ದಾರೆ.

ಸಮಾಜದಲ್ಲಿ ಘಟಿಸುವ ಸಣ್ಣ ಸಣ್ಣ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಅಮೂಲಾಗ್ರವಾದ ಚಿಂತನೆಗಳನ್ನು ಹರಿಯ ಬಿಡುವ ಅಂಕಣಗಳನ್ನು ಸಂಧ್ಯಾ ಪೈ ಅವರು ಓದುಗರಿಗೆ ದಾಟಿಸುತ್ತಿದ್ದಾರೆ. ಓದುಗರನ್ನು ಚಿಂತನೆಗೆ ಹಚ್ಚುವಂತಹ ಲೇಖನಗಳ ಮೂಲಕ ಮನಮುಟ್ಟುತ್ತಿರುವ ಸಂಧ್ಯಾ ಪೈ ಮಕ್ಕಳಿಗಾಗಿ ಅನೇಕ ವಿಚಾರಗಳನ್ನು ಸರಳವಾಗಿ ಹೇಳುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಂಧ್ಯಾ ಅವರ ಕೃತಿಗಳು ಓದುಗರನ್ನು ಮುಟ್ಟುತ್ತಿದೆ. ಡಾ|| ಸಂಧ್ಯಾ ಪೈ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಎಂ.ಬಿ.ದೇಸಾಯಿ

ಎಂ.ಬಿ.ದೇಸಾಯಿ ಅವರು ಗಡಿನಾಡ ಪ್ರದೇಶದಲ್ಲಿ ಕನ್ನಡದ ಪತ್ರಿಕೆಗಳನ್ನು ಯಶಸ್ವಿಯಾಗಿ ನಡೆಸಿದವರು. ಬೆಳಗಾವಿಯ ಲೋಕದರ್ಶನ ಪತ್ರಿಕೆಯ ಮೂಲಕ ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುವ ಕೆಲಸವನ್ನು ದೇಸಾಯಿಯವರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ. ಸಮಾಜದ ಆಗುಹೋಗುಗಳನ್ನು ಆಡಳಿತ ಗಾರರ ಹಾಗೂ ಅಧಿಕಾರಸ್ಥರ ಗಮನಕ್ಕೆ ಸಮರ್ಥವಾಗಿ ತರುವ ಪ್ರಯತ್ನವನ್ನು ತಮ್ಮ ಪತ್ರಿಕೆಯ ಮೂಲಕ ಎಂ.ಬಿ.ದೇಸಾಯಿ ಅವರು ಮಾಡುತ್ತಿದ್ದಾರೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಲಕ್ಷ್ಮಣ ಕೊಡಸೆ

ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆ ಪ್ರಜಾವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಪ್ರಜಾವಾಣಿಯ ಸುದ್ದಿ ವಿಭಾಗ, ಪುರವಣಿ ವಿಭಾಗ, ಚಲನಚಿತ್ರ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಕೊಡಸೆ ಜನಪ್ರಿಯ ಅಂಕಣಕಾರರೂ ಹೌದು.

ಪತ್ರಿಕೋದ್ಯಮವಲ್ಲದೆ, ಸಾಹಿತ್ಯದಲ್ಲೂ ಹೆಸರು ಮಾಡಿರುವ ಲಕ್ಷ್ಮಣ ಕೊಡಸೆ ಅವರು ಹಲವಾರು ಕಥಾ ಸಂಕಲನಗಳನ್ನು ಹೊರತಂದಿದ್ದು, ಪತ್ರಿಕೋದ್ಯಮದಲ್ಲಿ ವಿಶಿಷ್ಟ ಬರವಣಿಗೆಯ ಮೂಲಕ ಹೆಸರು ಮಾಡಿದ್ದಾರೆ. ಅನೇಕ ಚಲನಚಿತ್ರೋತ್ಸವಗಳಿಗೆ ವಿಶೇಷ ಪ್ರತಿನಿಧಿಯಾಗಿ ಪಾಲುಗೊಂಡಿರುವ ಲಕ್ಷ್ಮಣ ಕೊಡಸೆ ಈಗಲೂ ಬರವಣಿಗೆಯಲ್ಲಿ ಸಕ್ರಿಯರು

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಹಫೀಜ್

ಅಬ್ದುಲ್ ಹಫೀಜ್ ಅವರು ನಾಡಿನ ಹಿರಿಯ ಪತ್ರಿಕಾ ಛಾಯಾಗ್ರಾಹಕರಲ್ಲೊಬ್ಬರು. ಹಿಂದೂ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ಛಾಯಾಗ್ರಾಹಕರಾಗಿದ್ದು ಅನೇಕ ಮಹತ್ವದ ಸಮಾರಂಭಗಳನ್ನು, ಘಟನೆಗಳನ್ನು ತಮ್ಮ ಕ್ಯಾಮೆರಾದಿಂದ ಸೆರೆ ಹಿಡಿದು ಓದುಗರಿಗೆ ಉಣಬಡಿಸಿದವರು.

ಫ್ರೆಂಟ್ ಲೈನ್, ಬಿಸಿನೆಸ್ ಲೈನ್ ಮೊದಲಾದ ಪತ್ರಿಕೆಗಳಿಗೂ ಛಾಯಾಚಿತ್ರಗಳನ್ನು ಒದಗಿಸಿರುವ ಅಬ್ದುಲ್ ಹಫೀಜ್ ನಿವೃತ್ತಿಯ ನಂತರ ಈಗಲೂ ಫ್ರೀಲ್ಯಾನ್ಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕಾರವೂ ಸೇರಿದಂತೆ ಹಲವು ಗೌರವಗಳು ದೊರೆತಿವೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಖಾದ್ರಿ ಎಸ್. ಅಚ್ಯುತನ್

ಭಾರತೀಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾದ ಖಾದ್ರಿ ಎಸ್.ಅಚ್ಯುತನ್ ದೂರದರ್ಶನ, ಆಕಾಶವಾಣಿ, ಸೆನ್ಸಾರ್ ಬೋರ್ಡ್ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿದವರು. ಅಂಡಮಾನ್‌ನಲ್ಲಿಯೂ ಆಕಾಶವಾಣಿ ಪ್ರತಿನಿಧಿಯಾಗಿದ್ದ ಖಾದ್ರಿ ಅಚ್ಯುತನ್ ಅವರು ಕ್ಷೇತ್ರ ಪ್ರಚಾರ ವಿಭಾಗದಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡವರು.

ದೂರದರ್ಶನ ಮತ್ತು ಆಕಾಶವಾಣಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಅಚ್ಯುತನ್ ಅನೇಕ ಹೊಸ ಹೊಸ ವಿಚಾರಗಳನ್ನು ಸುದ್ದಿ ವಿಭಾಗದಲ್ಲಿ ಅಳವಡಿಸಿಕೊಂಡು ಕೇಳುಗರಿಗೆ ಹಾಗೂ ನೋಡುಗರಿಗೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.