ಸಿನಿಮಾ ಬಗ್ಗೆ ಮಾತನಾಡುವಾಗ ಅದು ಅತ್ಯಂತ ಪ್ರಭಾವಶಾಲೀ ಜನಪ್ರಿಯ ಸಮೂಹಮಾಧ್ಯಮ; ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಬಳಸಬೇಕು ಎಂಬ ಅಭಿಪ್ರಾಯ ಸರ್ವೇಸಾಧಾರಣವಾಗಿ ಕೇಳಿಬರುತ್ತದೆ. ಒಂದುಕಡೆ ಸಿನಿಮಾ ಎನ್ನುವುದೇ ಒಂದು ವಿಶಿಷ್ಟಭಾಷೆ; ಅದಕ್ಕೆ ತನ್ನದೇ ಆದ ವ್ಯಾಕರಣವೊಂದಿದೆ; ಅದರಲ್ಲಿ ಮೂರ್ತಗೊಳ್ಳುವ ಕೃತಿಗಳಿಗೆ ಸಮಗ್ರವಾದ, ಸಂಕೀರ್ಣವಾದ ಮೀಮಾಂಸೆಯೂ ಇದೆ ಎಂದು ಅರಿಯದ ಪ್ರೇಕ್ಷಕರಿದ್ದಾರೆ. ಮತ್ತೊಂದೆಡೆ ಈ ಅಂಶಗಳನ್ನು ಗೌಣವಾಗಿಸಿ, ಸಿನಿಮಾವನ್ನು ಗ್ರಾಹಕರ ಅಪೇಕ್ಷೆಗನುಗುಣವಾಗಿ ತಯಾರಿಸಿದ ಔದ್ಯಮಿಕ ಸರಕೆಂದು ನಂಬುವ ಬಂಡವಾಳಗಾರರು, ತಯಾರಕರು, ತಂತ್ರಜ್ಞರು, ವಿತರಕರು, ಮತ್ತು ಪ್ರದರ್ಶಕರು ಇದ್ದಾರೆ. ಸಿನಿಮಾವನ್ನು ತಮ್ಮ ವೃತ್ತಿಯಾಗಿಸಿಕೊಂಡಿರುವ ನಿರ್ದೇಶಕರು ಮತ್ತು ಕಲಾವಿದರೆನಿಸಿಕೊಂಡ ಜನ ಈ ಎರಡು ಧ್ರುವಗಳ ಮಧ್ಯದ ಕೊಂಡಿಯಂತಿದ್ದಾರೆ. ಈ ಇಡೀ ವ್ಯವಸ್ಥೆಯನ್ನು ಆಳುವವರ್ಗವು, ಸರ್ಕಾರದ ಮುಖೇನ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ, ಮುನ್ನೊತ್ತುವ, ರಾಜಕೀಯ- ನೈತಿಕತೆ ಮತ್ತು ಸಾಮಾಜಿಕ ನ್ಯಾಯಗಳನ್ನು ಆಧರಿಸಿದ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಸಿನಿಮಾ ಕುರಿತು ಮಾತನಾಡುವಾಗ ಇದೆಲ್ಲವನ್ನೂ ಪರಿಗಣಿಸಬೇಕು.
Category: ವಿ.ಎನ್. ಲಕ್ಷ್ಮೀನಾರಾಯಣ
ವ್ಯಾಸರು ತಮ್ಮ ಕೃತಿಯಾದ ಮಹಾಭಾರತ, ಅದರ ಭಾಗವಾದ ಭಗವದ್ಗೀತೆಯಲ್ಲಿ, ಅದರ ಒಂದು ಪಾತ್ರವಾದ ಕೃಷ್ಣನ ಹೇಳಿಕೆಯಾಗಿ ವಿಶ್ವವನ್ನು, ಆಕಾಶದಲ್ಲಿ ಬೇರುಗಳು ಮತ್ತು ನೆಲದಲ್ಲಿ ಕೊಂಬೆಗಳು ಇರುವ ಮರಕ್ಕೆ ಹೋಲಿಸುತ್ತಾರೆ.
ರುಡಾಲ್ಫ್ ಸ್ಟೇನರ್ ಎಂಬ ಜರ್ಮನ್ ಶಿಕ್ಷಣತಜ್ಞ ಮಗುವಿನ ಬೆಳವಣಿಗೆಯನ್ನು ವಿವರಿಸುತ್ತಾ ನಾವು ಬೆಳೆಯುತ್ತೇವೆನ್ನುವುದು ಕೆಳಗಿನಿಂದ ಮೇಲಕ್ಕೆ ಅಲ್ಲ, ಮೇಲಿನಿಂದ ಕೆಳಕ್ಕೆ ಎನ್ನುತ್ತಾರೆ. ಅಂದರೆ ಹುಟ್ಟಿದಾಗ ಕೂರಲಾಗದ, ನಿಲ್ಲಲಾರದ, ಓಡಾಡಲಾಗದ, ಕೈಯಲ್ಲಿ ಏನನ್ನೂ ಹಿಡಿಯಲಾಗದ ಒಂದು ಮೆದುಳಿನ ಮುದ್ದೆಯಾದ ಮಗು ಕ್ರಮೇಣ ತನ್ನ ಅಂಗಾಂಗಗಳಿಗೆ, ಮುಖ್ಯವಾಗಿ ಕೈ, ಕಾಲುಗಳಿಗೆ ಮೆದುಳಿನ ನಿಯಂತ್ರಣವನ್ನು ಹರಿಸುವುದರ ಮೂಲಕ ಕೂರಲು, ನಿಲ್ಲಲು, ದೇಹದ ಸಮತೋಲನ ಸಾಧಿಸಿ ಓಡಾಡಲು, ಕುಣಿದಾಡಲು, ಶಕ್ತವಾದಾಗ ಮಗು ಬೆಳೆಯಿತು ಎಂದು ಹೇಳುವುದು ವಾಡಿಕೆಯಾಗಿದೆ. ಹೀಗೆ, ಮೆದುಳಿನ ಶಕ್ತಿ ಕೈಕಾಲುಗಳಿಗೆ ಇಳಿಯದ ಮಕ್ಕಳನ್ನು ಬೆಳವಣಿಗೆ ಕುಂಠಿತಗೊಂಡ ಮಗು ಎಂದು ಹೇಳುತ್ತಾರೆ.