|
ಅತ್ಯದ್ಭುತ ವೈವಿಧ್ಯತೆಯುಳ್ಳ ಭೂಸ್ವರೂಪ, ಹಚ್ಚ ಹಸಿರು ಅರಣ್ಯಗಳು ಹಾಗೂ ವೈವಿಧ್ಯಪೂರ್ಣ ವನ್ಯಮೃಗಗಳಿಂದ ತುಂಬಿರುವ, ಕನ್ನಡ ಮಾತನಾಡುವ ಜನರ ನೆಲೆಬೀಡಾದ ಕರ್ನಾಟಕ ರಾಜ್ಯವು ರಮಣೀಯ. ನಿಸರ್ಗದ ಔದಾರ್ಯವು, ಅದರ ಸಾಮಾಜಿಕ ಸೌಹಾರ್ದತೆ, ಉದಾರತೆ ಹಾಗೂ ಸಹಿಷ್ಣುತೆಗಳ ಕುರುಹಾಗಿ ಜನರ ವರ್ಣಮಯ ಜೀವನಶೈಲಿ ಬಹುಸಂಸ್ಕೃತಿ ಪರಂಪರೆ ಹಾಗೂ ವರ್ಣರಂಜಿತ ಜೀವನಶೈಲಿಗಳಲ್ಲಿ ಅಭಿವ್ಯಕ್ತವಾಗಿದೆ. ಇದರೊಂದಿಗೆ, ವಾಸ್ತು ವಿನ್ಯಾಸ, ಶಿಲ್ಪಕಲೆ, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ವರ್ಣರಂಜಿತ ಉತ್ಸವಗಳಲ್ಲಿ ಕಲಾತ್ಮಕವಾದ ಸೃಜನಶೀಲತೆಯು ವ್ಯಕ್ತವಾಗಿದೆ. ಪ್ರತಿಯೊಂದು ಗ್ರಾಮ, ಉಪಗ್ರಾಮ, ಪಟ್ಟಣ ಹಾಗೂ ನಗರಕ್ಕೂ, ಅದರದೇ ಆದ ಘಟನೆಗಳ ಪಂಚಾಂಗವಿದ್ದು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಾಮರಸ್ಯಕ್ಕೆ ಕೊಡುಗೆಯನ್ನು ನೀಡುತ್ತದೆ. ಹೀಗೆ ಕರ್ನಾಟಕವು ವೈವಿಧ್ಯಮಯ ಪರಂಪರೆ ಹಾಗೂ ಆಚರಣೆಗಳಿಂದ ಶ್ರೀಮಂತವಾಗಿದೆ. |