Categories
Ebook Scanned Book Text ಕರ್ನಾಟಕ ಯಕ್ಷಗಾನ ಅಕಾಡೆಮಿ

ಪಂಚಭೂತ ಪ್ರಪಂಚ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಪಂಚಭೂತ ಪ್ರಪಂಚ ಅಂಬಾತನಯ ಮುದ್ರಾಡಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 35

Download   |    View

Ebook      |      Text

ಹೌದು, ನಾನು ಪೃಥ್ವಿ. ಇತ್ತೀಚೆಗಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಕೂಗನ್ನು ಎಲ್ಲೆಡೆಯಿಂದ ಕೇಳುತ್ತಿದ್ದೇನೆ. ನನ್ನನ್ನು ಹೊರತಾಗಿ ಪರಿಸರ ಉಂಟೆ? ಪರಿಸರವೆಂದರೆ ಜನ ಸುತ್ತನೋಡುವ ನೆಲ – ನೆಲದ ಮೇಲೆ ಗಿಡಮರ ಸಸ್ಯರಾಶಿ, ಇವುಗಳ ಬದುಕಿಗೆ ಪೋಷಕವಾದ ಜಲ, ಉಸಿರಾಡುವುದಕ್ಕೆ ಗಾಳಿ, ಮೈ ಬೆಚ್ಚನೆಗೆ ಅಗ್ನಿ ಅಥವಾ ಶಾಖ. ಇದರೊಂದಿಗೆ ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರ ಗೊತ್ತಾಗುವ ವಾಯು ಮತ್ತು ಆಕಾಶ. ಪರಿಸರ ಮಾಲಿನ್ಯವೆಂದರೆ ಪಂಚಭೂತಗಳಾದ ನಮ್ಮ ಮೇಲಾಗುವ ಮಲಿನತೆ.