ಪಂಚಭೂತ ಪ್ರಪಂಚ

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಪಂಚಭೂತ ಪ್ರಪಂಚ ಅಂಬಾತನಯ ಮುದ್ರಾಡಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 35

Download  View

 

ಹೌದು, ನಾನು ಪೃಥ್ವಿ. ಇತ್ತೀಚೆಗಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಕೂಗನ್ನು ಎಲ್ಲೆಡೆಯಿಂದ ಕೇಳುತ್ತಿದ್ದೇನೆ. ನನ್ನನ್ನು ಹೊರತಾಗಿ ಪರಿಸರ ಉಂಟೆ? ಪರಿಸರವೆಂದರೆ ಜನ ಸುತ್ತನೋಡುವ ನೆಲ – ನೆಲದ ಮೇಲೆ ಗಿಡಮರ ಸಸ್ಯರಾಶಿ, ಇವುಗಳ ಬದುಕಿಗೆ ಪೋಷಕವಾದ ಜಲ, ಉಸಿರಾಡುವುದಕ್ಕೆ ಗಾಳಿ, ಮೈ ಬೆಚ್ಚನೆಗೆ ಅಗ್ನಿ ಅಥವಾ ಶಾಖ. ಇದರೊಂದಿಗೆ ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರ ಗೊತ್ತಾಗುವ ವಾಯು ಮತ್ತು ಆಕಾಶ. ಪರಿಸರ ಮಾಲಿನ್ಯವೆಂದರೆ ಪಂಚಭೂತಗಳಾದ ನಮ್ಮ ಮೇಲಾಗುವ ಮಲಿನತೆ.