|
ಒಂದು ಪ್ರದೇಶದ ಸಮಗ್ರ ಅಧ್ಯಯನಕ್ಕೆ ಅಲ್ಲಿಯ ಜನಸಂಖ್ಯಾ ಬೆಳವಣಿಗೆ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಲಕ್ಷಣಗಳಂತಹ ಅಂಶಗಳ ಪರಿಶೀಲನೆಯೂ ಅವಶ್ಯವಾಗಿರುತ್ತವೆ. ಈ ಅಂಶಗಳು ಪ್ರದೇಶದಿಂದ ಪ್ರದೇಶಕ್ಕೆ ಸಹಜವಾಗಿ ವಿಭಿನ್ನವಾಗಿರುತ್ತದೆ. ಇದೇ ರೀತಿ, ತುಮಕೂರು ಜಿಲ್ಲೆಯಲ್ಲೂ ಜನಸಂಖ್ಯಾ ಸ್ವರೂಪ, ವಿವಿಧ ಜಾತಿ ಮತ್ತು ಬುಡಕಟ್ಟು, ಮತ-ಧರ್ಮ, ಆಚಾರ-ವಿಚಾರ, ನಂಬಿಕೆ, ಆಹಾರಾಭ್ಯಾಸ, ವೇಷ-ಭೂಷಣ, ಭಾಷೆಗಳೇ ಮೊದಲಾದ ವೈವಿಧ್ಯಗಳಿಂದ ಕೂಡಿದ ಸಾಮಾಜಿಕ ಲಕ್ಷಣಗಳು ಕಂಡುಬರುತ್ತವೆ. ಈ ಎಲ್ಲಾ ಅಂಶಗಳನ್ನು ಪ್ರಸ್ತುತ ಅಧ್ಯಾಯದಲ್ಲಿ ನಿರೂಪಿಸಲಾಗಿದೆ. ಅಲ್ಲದೆ, ಈ ಅಧ್ಯಾಯಕ್ಕೆ ಪೂರಕವಾಗಿ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರು ಗ್ಯಾಸೆಟಿಯರ್ ಇಲಾಖೆಯ ಕೋರಿಕೆಯಂತೆ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ರಚಿಸಿ ಕೊಟ್ಟಿರುವ `ಜಿಲ್ಲೆಯ ಬುಡಕಟ್ಟು ಜನಾಂಗಗಳು ಮತ್ತು ಸಂಸ್ಕೃತಿ’ ಬಗೆಗಿನ ವಿಶೇಷ ಲೇಖನವನ್ನೂ ಈ ಅಧ್ಯಾಯದ ಕೊನೆಯಲ್ಲಿ ನೀಡಲಾಗಿದೆ. |