|
ಕೊಡಗಿನ ‘ಆದಿಕವಿ’ಯೆಂದು ಅಮರರಾದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ1ಯ (1868-1944) ನಂತರ ಆ ಮನೆತನಕ್ಕೆ ಹೆಸರು ತಂದುಕೊಡುತ್ತಿರುವ ಮತ್ತೋರ್ವ ವ್ಯಕ್ತಿಯೇ ಪ್ರಸ್ತುತ ನಮ್ಮೊಡನೆ ಇರುವ ಅಪ್ಪನೆರವಂಡ ಕಿರಣ್ ಸುಬ್ಬಯ್ಯನವರು. ಸಮಕಾಲೀನ-ಆಧುನಿಕ ಶಿಲ್ಪಕಲಾ ಪ್ರಾಕಾರದ ಸಂದರ್ಭದಲ್ಲಿ ಕರ್ನಾಟಕದ ಒಬ್ಬ ಶ್ರೇಷ್ಠ ಶಿಲ್ಪಿ ಹೇಗೆ ಕಲಾಬರಹಗಾರರ2, ಕಲಾವಿಮರ್ಶಕರ ಹಾಗೂ ಕಲಾಸಂಬಂಧಿ ಸಂಸ್ಥೆಗಳ ದೃಷ್ಟಿಯಿಂದ ಬಹಳ ಕಾಲದವರೆಗೆ ಉಪೇಕ್ಷೆಗೊಳಪಟ್ಟರು ಎನ್ನುವುದಕ್ಕೆ ಮೈಸೂರಿನ ಒಂದು ಮೂಲೆಯಲ್ಲಿ ತನ್ನಷ್ಟಕ್ಕೆ ತಾನು ನವ್ಯ-ನವೀನ ಮಾದರಿಯ ಶಿಲೆ ಹಾಗೂ ಕಾಷ್ಟ ಶಿಲ್ಪಗಳನ್ನು ಸೃಷ್ಟಿಸುತ್ತಾ ಬಂದಿರುವ, ನಮ್ಮೊಡನೆ ಇರುವ ಶಿಲ್ಪಿ ಎ.ಕಿರಣ್ಸುಬ್ಬಯ್ಯನವರು ಸಾಕ್ಷಿಯಾಗಿದ್ದಾರೆ. |