ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಭರತೇಶನ ದಿನಚರಿ ವಿಜಯದ ದಿನಗಳು | ಪಿ. ಕೆ. ನಾರಾಯಣ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 244 |
ಕೃತಯುಗದ ಆದಿಯಲ್ಲಿ ಆದಿತೀರ್ಥಂಕರನ ಮೊದಲ ಮಗನಾದ ಆದಿ ಚಕ್ರಿಯು ಕ್ಷಿತಿಯನ್ನು ಪಾಲಿಸುತ್ತಿದ್ದನು. ಆದರೆ ಭೂಮಿಯ ಭಾರವನ್ನು ತಾಳಿದ ಚಿಂತೆಯೆಂಬುದು ಒಂದಿಷ್ಟೂ ಅವನಲ್ಲಿರಲಿಲ್ಲ. ಅವನಿಗೆ ಯಾವುದೊಂದರ ಶ್ರಮವೂ ಇರಲಿಲ್ಲ. ಸುತ್ರಾಮನು ಸ್ವರ್ಗವನ್ನಾಳುವಂತೆ ಒಂದಿಷ್ಟೂ ಆಲಸ್ಯವಿಲ್ಲದೆ ರಾಜ್ಯವನ್ನಾಳುತ್ತಿದ್ದನು. |