ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮೈಸೂರು ಜಿಲ್ಲಾ ರಂಗಮಾಹಿತಿ | ನಾ. ನಾಗಚಂದ್ರ, ರಾಜಶೇಖರ ಕದಂಬ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 132 |
ಮೈಸೂರು ರಾಜ್ಯವನ್ನು ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ರಂಗಭೂಮಿ ಹೊಸದು ಎನ್ನಬಹುದಾದ ಪರಿವೇಷವನ್ನು ಹೊದೆಯತೊಡಗಿತು. ಕ್ರಿ.ಶ. 1822 ರಲ್ಲಿ ಜನಿಸಿದ ಲಿಂಗರಾಜೇ ಅರಸರು ಯದುವಂಶದ ಅಳಿಯರಾದದ್ದು ಮಾತ್ರವಲ್ಲದೆ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿ ತಮ್ಮ ಕಾವ್ಯ ಪ್ರತಿಭೆಯಿಂದಾಗಿ ರಾಜ ಮನ್ನಣೆಯನ್ನೂ, ಜನಮನ್ನಣೆಯನ್ನೂ ಗಳಿಸಿದರು. |