Categories
Ebook ಕರ್ನಾಟಕ ಗ್ಯಾಸೆಟಿಯರ್ ಕರ್ನಾಟಕದ ಮಿನುಗುನೋಟ

ಶಿಕ್ಷಣ ಹಾಗೂ ಸಾಮಾಜಿಕ ಜೀವನ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಶಿಕ್ಷಣ ಹಾಗೂ ಸಾಮಾಜಿಕ ಜೀವನ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 14

Download  View

ಪ್ರಾಚೀನ ಕರ್ನಾಟಕದಲ್ಲಿ, ಅಗ್ರಹಾರ, ಮಠ ಹಾಗೂ ಘಟಿಕಸ್ಥಾನ ಎಂಬ ಶಿಕ್ಷಣ ಸಂಸ್ಥೆಗಳ ಬಲಿಷ್ಠವಾದ ಹಂದರವು ಅಸ್ತಿತ್ವದಲ್ಲಿತ್ತು. ಭೂಮಿ, ಮನೆ ಹಾಗೂ ಇತರ ಸೌಕರ್ಯಗಳನ್ನು ನೀಡಲಾದ ಬ್ರಾಹ್ಮಣ ವಿದ್ವಾಂಸ ವಸಾಹತುಗಳನ್ನು ಅಗ್ರಹಾರವೆಂದು ಕರೆಯ ಲಾಗುತ್ತಿತ್ತು. ಬ್ರಾಹ್ಮಣರಿಂದ ಅಪೇಕ್ಷಿಸಲಾದ ಷಟ್ಕರ್ಮಗಳ ಭಾಗವಾದ ವ್ಯಾಸಂಘಿಕ ಸಾಧನೆಗಳನ್ನು ಪೂರೈಸಲು ಸಾಧ್ಯವಾಗಲೆಂದು ಅವರಿಗೆ ಇವೆಲ್ಲವನ್ನೂ ನೀಡಲಾಗುತ್ತಿತ್ತು. ಆ ಆರು ಕರ್ಮಗಳು ಅಥವಾ ಹೊಣೆಗಾರಿಕೆಗಳು ಯಾವುವೆಂದರೆ, ಯಜ್ಞ (ಬಲಿಗಳನ್ನು ನೀಡುವುದು / ಹೋಮ-ಹವನಾದಿಗಳನ್ನು ಮಾಡುವುದು), ಯಾಜನ (ಹೋಮ-ಹವನಾದಿಗಳ ಪಾರುಪತ್ಯವನ್ನು ವಹಿಸುವುದು), ಅಧ್ಯಯನ (ತಮ್ಮನ್ನು ತಾವು ಓದು/ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು), ಅಧ್ಯಾಪನ (ಬೋಧನೆ), ದಾನ (ಉಡುಗೊರೆಗಳನ್ನು ನೀಡುವುದು) ಹಾಗೂ ಪ್ರತಿಗ್ರಹ (ಉಡುಗೊರೆಗಳನ್ನು ಪಡೆಯುವುದು).

ಸಂಬಂಧಿತ ಪುಸ್ತಕಗಳು