ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
೧೯ನೇ ಶತಮಾನದ ಕರ್ನಾಟಕ ವಾಗ್ಗೇಯಕಾರರು | ಡಾ. ಎಂ. ಸೂರ್ಯ ಪ್ರಸಾದ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 61 |
1399ರಲ್ಲಿ ಯದುರಾಯರಿಂದ ಸ್ಥಾಪಿಸಲ್ಪಟ್ಟ ಮೈಸೂರು ಒಡೆಯರ್ ರಾಜವಂಶಜರು ವಿಜಯನಗರ ಮತ್ತು ಕರ್ನಾಟಕದ ಪರಂಪರೆಗೆ ಉತ್ತರಾಧಿಕಾರಿಗಳಾದರು. ವಿಜಯನಗರದ ಪತನಾನಂತರ ಈ ವಂಶದ ರಾಜರು ಲಲಿತ ಕಲೆಗಳ ಪ್ರೇಮಿಗಳೂ, ಪೋಷಕರೂ ಆಗಿದ್ದರು. ತತ್ಪರಿಣಾಮವಾಗಿ ಸಂಗೀತ ಮತ್ತು ನೃತ್ಯ ಕಲೆಗಳ ಕೇಂದ್ರಗಳಲ್ಲಿ ಮೈಸೂರು ಒಂದು ಪ್ರಮುಖ ಕೇಂದ್ರವಾಯಿತು. |