Loading Events

« All Events

  • This event has passed.

ಎನ್‌.ಎಸ್‌. ರಾಮನ್

October 24

೨೪.೧೦.೧೯೩೩ ಸಾಹಿತ್ಯ, ಸಂಗೀತ, ವೈದಿಕ ಮನೆತನದಲ್ಲಿ ರಾಮನ್‌ರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ತಾತನವರಾದ ಶ್ರೀ ತಿರುಮಲಾಚಾರ್ಯರು ಮೈಸೂರಿನ ಆಸ್ಥಾನ ವಿದ್ವಾಂಸರು. ಓದಿದ್ದು ಬಿ.ಕಾಂ. ಪದವಿ. ಸಂಗೀತದಲ್ಲಿ ವಿದ್ವತ್‌. ಇಪ್ಪತ್ತರ ಹರೆಯದಲ್ಲೇ ಮಂಡ್ಯದ ಗಣೇಶೋತ್ಸವದ ಮೂಲಕ ನಡೆಸಿಕೊಟ್ಟ ಸಂಗೀತ ಕಚೇರಿ. ಆಕಾಶವಾಣಿಯ ಕಲಾವಿದರಾಗಿ, ಭಾವಗೀತೆಗಳು, ದಾಸವರೇಣ್ಯರ ಕೃತಿಗಳ ಗಾಯನದಿಂದ ಪಡೆದ ಅಪಾರ ಜನಮೆಚ್ಚುಗೆ. ಆಕಾಶವಾಣಿಯ ತಿಂಗಳ ಹೊಸಹಾಡು, ವಿವಿಧ ಭಾರತಿಯಲ್ಲಿ ನಡೆಸಿಕೊಟ್ಟ ಭಾವಗೀತೆಗಳ ಕಾರ್ಯಕ್ರಮ. ಹಲವಾರು ಭಕ್ತಿಗೀತೆಗಳ ರಚನೆ. ಸುಮಾರು ನೂರಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ನೀಡಿದ ಸಂಗೀತ ನಿರ್ದೇಶನ. ಮಾಗಡಿ ರಂಗನಾಥ, ಬಿಳಿಗಿರಿರಂಗ, ತುಪ್ಪದ ಆಂಜನೇಯ, ಕೋಟೆವೆಂಕಟರಮಣ, ಶ್ರೀ ಮಹಾಲಕ್ಷ್ಮೀ, ಲಲಿತಾ ಸಹಸ್ರನಾಮ, ಶ್ರೀ ನಾರಸಿಂಹ, ಮೇಲುಕೋಟೆ ಚೆಲುವನಾರಾಯಣರ ಮೇಲೆ ದೇವರನಾಮಗಳ ರಚನೆ, ನಿರ್ದೇಶನ. ತಾವೇ ಬರೆದ ಗೀತೆಗಳಿಗೆ ’ಹೃದಯ ಸಮುದ್ರ’, ತಮ್ಮ ಸಂಗೀತಮಯ ಜೀವನದ ರಸಘಳಿಗೆ ಗಳಿಗೆ ‘ಬಿಂಬಪ್ರತಿಬಿಂಬ’ ಎಂದು ಹೆಸರಿಸಿದ್ದಾರೆ. ಅನೇಕ ಗೀತನಾಟಕಗಳ ರಚನೆ. ಹುಬ್ಬಳ್ಳಿ ಸಿದ್ಧಾರೂಢರು, ಗುಬ್ಬಿಯ ಶಾಂತಾನಂದ ಸ್ವಾಮೀಜಿ ಜೀವನ ಚರಿತ್ರೆಯ ರಚನೆ. ಕಾವೇರಿ ಚಲನಚಿತ್ರಕ್ಕಾಗಿ ಹಿನ್ನೆಲೆ ಗಾಯನ, ಕರ್ನಾಟಕ ಗಾಯನ ಸಮಾಜ, ಗಾನಕಲಾ ಪರಿಷತ್‌, ಚಾಮರಾಜಪೇಟೆ ರಾಮೋತ್ಸವವಲ್ಲದೆ ಅಮೆರಿಕದ ವಾಷಿಂಗ್‌ಟನ್‌, ನ್ಯೂಯಾರ್ಕ್, ಪಿಟ್ಸ್‌ಬರ್ಗ್‌, ಚಿಕಾಗೋ, ನ್ಯೂ ಅರ್ಲಿಯನ್ಸ್‌, ಟೆಕ್ಸಾಸ್‌ ರಾಜ್ಯಗಳ ಕನ್ನಡಕೂಟಗಳ ಆಹ್ವಾನದ ಮೇರೆಗೆ ನಡೆಸಿಕೊಟ್ಟ ಸುಗಮ ಸಂಗಿತ ಕಾರ್ಯಕ್ರಮಗಳು. ಸ್ಯಾನ್‌ ಆಂಟೋನಿಯದ ಶ್ರೀನಿವಾಸ ದೇವಸ್ಥಾನದಲ್ಲಿ ಆಸ್ಥಾನ ವಿದ್ವಾಂಸರೆಂಬ ಗೌರವ, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ.   ಇದೇದಿನಹುಟ್ಟಿದಕಲಾವಿದರು ಶ್ರೀದರ್ಶನ – ೧೯೪೯

* * *

Details

Date:
October 24
Event Category: