Loading Events

« All Events

ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್

July 21, 2024

೨೧..೧೯೨೧ ೨೧..೧೯೮೨ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತಕ್ಕೊಂದು ಘನತೆ ತಂದುಕೊಟ್ಟ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ರವರು ಹುಟ್ಟಿದ್ದು: ಕೇರಳದ ಪಾಲ್ಘಾಟಿನಲ್ಲಿ, ಬೆಳೆದದ್ದು ಪುತ್ತೂರು ತಾಲ್ಲೂಕಿನ ಕಾಂಚನ ಗ್ರಾಮದಲ್ಲಿ. ತಂದೆ ವೆಂಕಟರಮಣ ಅಯ್ಯರ್, ತಾಯಿ ಆನಂದಲಕ್ಷ್ಮೀ. ಸಂಗೀತಗಾರರ ಮನೆತನ, ತಾಯಿಯೇ ಮೊದಲ ಗುರು, ಸಂಗೀತದ ಉನ್ನತ ಶಿಕ್ಷಣ ಚೆಂಬೈ ವೈದ್ಯನಾಥ ಭಾಗವತರ್, ಜಿ.ಎನ್‌. ಬಾಲಸುಬ್ರಹ್ಮಣ್ಯ, ಸಿ.ಎನ್‌. ಶಾಸ್ತ್ರಿ ಮುಂತಾದವರ ಬಳಿ. ಮಂಗಳೂರಿನ ಕಾಂಚನ ಮನೆಯಲ್ಲಿ ಸಂಗೀತ ದಿಗ್ಗಜರಾದ ಎನ್‌.ವಿ. ಮೂರ್ತಿ, ಶೇಷಾಮಣಿ, ಗೋಪಿನಾಥ, ಚೆಂಬೈ, ಟಿ. ಚೌಡಯ್ಯ, ಸಿ.ಆರ್. ಮಣಿ, ಮುಂತಾದವರ ಸಮಾವೇಶ. ಸದಾ ಗಾಯನ, ಸಂಗೀತದ ಬಗ್ಗೆ ಚರ್ಚೆ. ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮೊದಲಗಾಯನ ಕಚೇರಿ. ಗುರುಗಳಾದ ಚೆಂಬೈರವರಿಂದ ದೊರೆತ ಪ್ರಶಂಸೆ. ಇವರ ಕಚೇರಿಗಳಿಗೆ ವಿದ್ವಾನ್‌ ಟಿ. ಚೌಡಯ್ಯನವರ ಪಿಟೀಲುವಾದನದ ಸಹಕಾರ ಹಲವಾರು ಬಾರಿ. ಮದರಾಸಿನಲ್ಲಿ ಉನ್ನತ ಸಂಗೀತ ಶಿಕ್ಷಣ, ಗಾಯನ ಕಚೇರಿ, ಚೆಂಬೈ, ಎಂ. ಎಸ್‌. ಸುಬ್ಬುಲಕ್ಷ್ಮೀ ಮುಂತಾದವರ ಉಪಸ್ಥಿತಿ. ಕಾಂಚನಕ್ಕೆ ಹಿಂದಿರುಗಿದ ಸಂತರ ಪ್ರಾರಂಭಿಸಿದ್ದು ಗುರುಕುಲ ಪದ್ಧತಿಯ ಸಂಗೀತಶಾಲೆ. ಇವರೊಡನೆ ಜೊತೆಗೂಡಿದವರು ಸೋದರಮಾವ ವಿದ್ವಾನ್‌ ಕೆ.ಇ. ಕೃಷ್ಣ ಅಯ್ಯರ್ ರವರಿಂದ ವಿದ್ಯಾರ್ಥಿಗಳಿಗೆ ಮೃದಂಗ ಶಿಕ್ಷಣ. ೧೯೫೩ ರಲ್ಲಿ ಸ್ಥಾಪಿಸಿದ್ದು ಯಕ್ಷಗಾನ ಕಲಾಕೇಂದ್ರ. ೧೯೫೯ರಲ್ಲಿ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಆರಂಭ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜ – ಪುರಂದರ ಆರಾಧನೆ, ಶ್ಯಾಮಶಾಸ್ತ್ರಿ ಮುಂತಾದವರ ಜನ್ಮದಿನೋತ್ಸವಗಳಲ್ಲಿ ಹಿರಿಕಿರಿಯ ಗಾಯಕರನ್ನು ಆಹ್ವಾನಿಸಿ ಏರ್ಪಡಿಸುತ್ತಿದ್ದ ಸಂಗೀತ ಕಚೇರಿಗಳು. ೧೯೬೬ ರಲ್ಲಿ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಶಾಲೆಯಿಂದ ನೂರಾರು ವಿದ್ಯಾರ್ಥಿಗಳಿಗೆ ದೊರೆತ ಸಂಗೀತ ಶಿಕ್ಷಣ. ಪ್ರಾರಂಭಿಸಿದ ಪ್ರಾಥಮಿಕ, ಪ್ರೌಢಶಾಲೆ; ದೈವಭಕ್ತರಾಗಿದ್ದು ಹಲವಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮ. ಸಂಗೀತ ಸಾಧಕ, ಸಾಮಾಜಿಕ ಕಾರ್ಯಕರ್ತರಿಗೆ ಹಲವಾರು ಸಂಘ. ಸಂಸ್ಥೆಗಳಿಂದ ದೊರೆತ ಸನ್ಮಾನ. ವಾದಿರಾಜ-ಕನಕದಾಸ ಸಂಗೀತೋತ್ಸವದಲ್ಲಿ ಸಂಗೀತ ರತ್ನ ಬಿರುದು.   ಇದೇ ದಿನ ಹುಟ್ಟಿದ ಕಲಾವಿದರು ಮಯಬ್ರಹ್ಮಾಚಾರ್ ಎಚ್‌. ಎಂ. – ೧೯೬೦ ಭವಾನಿ ದೇಶಕುಲಕರ್ಣಿ – ೧೯೭೧

* * *

Details

Date:
July 21, 2024
Event Category: