Loading Events

« All Events

ಟಿ.ಆರ್. ನರಸಿಂಹರಾಜು

July 28, 2024

೨೮..೧೯೨೬ ೧೧. .೧೯೭೯ ವೃತ್ತಿ ರಂಗಭೂಮಿ, ಚಲನಚಿತ್ರ ಎರಡು ಕ್ಷೇತ್ರಗಳಲ್ಲೂ ಹಾಸ್ಯಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನರಸಿಂಹರಾಜುರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ. ತಂದೆ ಪೋಲೀಸ್‌ ಇಲಾಖೆಯ ನೌಕರರಾದ ರಾಮರಾಜು, ತಾಯಿ ವೆಂಕಟಲಕ್ಷ್ಮಮ್ಮ. ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು. ಸಿ.ಬಿ. ಮಲ್ಲಪ್ಪನವರ ಚಂದ್ರಮೌಳೇಶ್ವರ ನಾಟಕ ಕಂಪನಿಯಲ್ಲಿ ಲೋಹಿತಾಶ್ವ, ಪ್ರಹ್ಲಾದ, ಕೃಷ್ಣ ಮುಂತಾದ ಬಾಲ ಪಾತ್ರಗಳು. ೧೬ ನೇ ವಯಸ್ಸಿಗೇ ಸ್ವಂತ ನಾಟಕ ಕಂಪನಿ ಕಟ್ಟಿದ ಬಾಲಕನೆಂಬ ಹೆಗ್ಗಳಿಕೆ. ಅರಸೀಕೆರೆ ಹಾಗೂ ಸುತ್ತಮುತ್ತ ಪ್ರದರ್ಶಿಸಿದ ನಾಟಕಗಳು, ಸತ್ಯಹರಿಶ್ಚಂದ್ರ, ಭಕ್ತಕುಂಬಾರ. ಕಂಪನಿ ಅನುಭವಿಸಿದ ನಷ್ಟ. ೧೯೪೬ ರಲ್ಲಿ ಸೇರಿದ್ದು ಎಡತೊರೆ ಕಂಪನಿ. ವಿಶ್ವಾಮಿತ್ರ, ಬೇಡರ ಕಣ್ಣಪ್ಪ, ರಾಮಾಯಣ ನಾಟಕಗಳಲ್ಲಿ ಅಭಿನಯಿಸಿ ಗಳಿಸಿದ ಪ್ರಖ್ಯಾತಿ. ಹಿರಣ್ಣಯ್ಯ ಮಿತ್ರಮಂಡಲಿಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಗಳಿಸಿದ ಹೆಸರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಬೇಡರ ಕಣ್ಣಪ್ಪ, ಸಾಹುಕಾರ, ಸದಾರಮೆಯ ಆದಿಮೂರ್ತಿ ಹಾಸ್ಯಪಾತ್ರಗಳಿಂದ ಗಳಿಸಿದ ಜನಮನ್ನಣೆ. ಡಾ. ರಾಜಕುಮಾರ್, ಜಿ.ವಿ. ಅಯ್ಯರ್, ಬಾಲಕೃಷ್ಣ ಜೊತೆಗೂಡಿ ಸ್ಥಾಪಿಸಿದ್ದು ಕನ್ನಡ ಚಲನಚಿತ್ರ ಕಲಾವಿದರ ಸಂಘ. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪ್ರದರ್ಶಿಸಿದ ನಾಟಕಗಳು. ಪ್ರದರ್ಶನದ ಹಣದಿಂದ ರಣಧೀರ ಕಂಠೀರವ ಚಿತ್ರ ನಿರ್ಮಾಣ. ಸುಮಾರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ. ಬಾಲಕೃಷ್ಣ-ನರಸಿಂಹರಾಜು ರವರ ಅಪೂರ್ವ ಹಾಸ್ಯಜೋಡಿ. ಬೇಡರಕಣ್ಣಪ್ಪ, ಭಕ್ತಮಲ್ಲಿಕಾರ್ಜುನ, ಮಹಾಕವಿಕಾಳಿದಾಸ, ಭಕ್ತಮಾರ್ಕಂಡೇಯ, ವೀರಕೇಸರಿ, ಬೆಟ್ಟದ ಹುಲಿ, ಅಮರಶಿಲ್ಪಿಜಕಣಾಚಾರಿ, ಶ್ರೀಕೃಷ್ಣದೇವರಾಯ ಅಭಿನಯದ ಪ್ರಮುಖ ಚಿತ್ರಗಳು. ಪುತ್ರ ಶ್ರೀಕಾಂತನ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಸ್ಥಾಪಿಸಿ ತೆಗೆದ ಚಿತ್ರ ಪ್ರೊ. ಹುಚ್ಚೂರಾಯ. ಚಿತ್ರಪ್ರೇಮಿಗಳ ಸಂಘದಿಂದ ಹಾಸ್ಯಚಕ್ರವರ್ತಿ, ಹಾಸ್ಯಬ್ರಹ್ಮ ಮುಂತಾದ ಬಿರುದು ಸನ್ಮಾನಗಳನ್ನು ಪಡೆದಿದ್ದರೂ ಸರ್ಕಾರ, ಪ್ರಸಿದ್ಧ ಸಂಘ ಸಂಸ್ಥೆಗಳಿಂದ ಯಾವ ಪ್ರಶಸ್ತಿಯೂ ದೊರೆಯದಿದ್ದುದು ಆಶ್ಚರ್ಯ.   ಇದೇ ದಿನ ಹುಟ್ಟಿದ ಕಲಾವಿದರು: ಎ. ಸುಬ್ಬರಾವ್‌ – ೧೯೨೩ ಅಂಬುಜಾದೇವಿ – ೧೯೩೭ ಎಸ್‌.ಜಿ. ರಘುರಾಮನ್‌ – ೧೯೪೦ ಸತೀಶ್‌ ಹಂಪಿಹೊಳಿ – ೧೯೬೫

* * *

Details

Date:
July 28, 2024
Event Category: