Loading Events

« All Events

ಪ್ರೊ.ಎಚ್.ಎಂ. ಮರುಳಸಿದ್ಧಯ್ಯ

July 29, 2024

೨೯..೧೯೩೧ ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ ಮುಂತಾದ ಹಲವಾರು ಯೋಜನೆಗಳ ರೂವಾರಿಯಾಗಿ ಸಮಾಜಕಾರ್ಯ ಶಿಕ್ಷಣ, ಕ್ಷೇತ್ರ ಕಾರ್ಯ, ಸಂಘಟನೆ, ಸಾಹಿತ್ಯರಚನೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಮರುಳ ಸಿದ್ಧಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ೧೯೩೧ ರ ಜುಲಯ ೨೯ ರಂದು. ತಂದೆ ಮಠದ ದೊಡ್ಡ ಬಸವಯ್ಯನವರು, ತಾಯಿ ದೊಡ್ಡ ಬಸಮ್ಮ. ಐವರು ಅಣ್ಣಂದಿರು ಮೂವರು ಅಕ್ಕಂದಿರನ್ನೂ ಹೊಂದಿರುವ ದೊಡ್ಡ ಕುಟುಂಬದಲ್ಲಿ ಜನಿಸಿದ ಇವರ ಅಣ್ಣಂದಿರಲ್ಲಿ ಹಿ.ಮ.ನಾಗಯ್ಯನವರು ಸಾಹಿತಿ, ಪತ್ರಕರ್ತರಾಗಿ ಖ್ಯಾತಿ ಪಡೆದವರು. ಪ್ರಾರಂಭಿಕ ಶಿಕ್ಷಣ ಅಕ್ಕನ ಊರದ ಹುಲಿಕೆರೆ ಎಂಬ ಹಳ್ಳಿಯಲ್ಲಿ. ಕೊಟ್ಟೂರಿನಲ್ಲಿ ಪ್ರೌಢಶಾಲಾ ಶಿಕ್ಷಣ. ಮೈಸೂರು ಸೇಂಟ್‌ ಫಿಲೋಮಿನ ಕಾಲೇಜು ಸೇರಿ ಇಂಟರ್‌ಮೀಡಿಯೆಟ್‌ ನಲ್ಲಿ ೯ ನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ, ಮಹಾರಾಜಕಾಲೇಜು ಸೇರಿದ್ದು, ಕನ್ನಡದಲ್ಲಿ ಆನರ್ಸ್ ಪದವಿ ಪಡೆಯಲು. ಆದರೆ ಓದಿದ್ದು ಸಮಾಜ ಶಾಸ್ತ್ರ. ಬೋಧಿಸಿದವರು ಪ್ರಖ್ಯಾತರಾದ ಪ್ರೊ.ಯಮುನಾಚಾರ್ಯ ಮತ್ತು ಪ್ರೊ.ಎನ್‌.ಎ. ನಿಕ್ಕಂ (ಮುಂದೆ ವಿ.ವಿ.ದ ಉಪಕುಲಪತಿಗಳಾದರು) ಮೈಸೂರು ವಿ.ವಿ. ದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಹಾಗೂ ಸಮಾಜ ಕಾರ್ಯದಲ್ಲಿ ದೆಹಲಿಯ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳು. ವಾರಣಾಸಿಯ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್‌ ಪದವಿ (೧೯೭೮). ಕನ್ನಡ ಸಾಹಿತ್ಯದ ಓದು, ಬರೆಹದಲ್ಲಿ ಆಸಕ್ತಿಯಿದ್ದು ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ನವಿಲನ್ನು ಕುರಿತು ಬರೆದ ಕವಿತೆಯು ಬಳ್ಳಾರಿಯಿಂದ ಪ್ರಕಟವಾಗುತ್ತಿದ್ದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಎಸ್‌.ಎಸ್‌.ಎಲ್‌.ಸಿ. ಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಯಾಗಿದ್ದ ಇವರಿಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕೊಂಚ ದ್ವಂದ್ವವಾಗಿ ಹುಬ್ಬಳ್ಳಿಯ ‘ನವಯುಗ’ ಪತ್ರಿಕೆ ಹಾಗೂ ದಾವಣಗೆರೆಯ ‘ನೇತಾಜಿ’ ಪತ್ರಿಕೆಗಳಲ್ಲಿ ಕೆಲಕಾಲ ಪತ್ರಕರ್ತರಾಗಿಯೂ ದುಡಿದರು. ಹಳ್ಳಿಯಲ್ಲಿ ತಾವು ಕಂಡ ಬದುಕಿನ ಸಮಸ್ಯೆಗಳು, ಮೂಢನಂಬಿಕೆ, ಆಢ್ಯವ್ಯಕ್ತಿಗಳ ನಡವಳಿಕೆಗಳು ಮುಂತಾದ ವಿಷಯಗಳ ಬಗ್ಗೆಯೇ ವಿಚಾರಪೂರಿತ ಲೇಖನಗಳನ್ನೂ ಬರೆಯತೊಡಗಿದರು. ಪತ್ರಿಕೋದ್ಯಮವೂ ಬೇಸರವೆನಿಸಿ ಅಣ್ಣ ಹಿ.ಮ. ನಾಗಯ್ಯನವರ ಸಹಾಯದಿಂದ ಸೇರಿದ್ದು ಮೈಸೂರಿನ ಸೇಂಟ್‌ ಫಿಲೋಮಿನ ಕಾಲೇಜು, ಅಲ್ಲಿ ಪ್ರೊ. ಗೋಪಾಲ ಕೃಷ್ಣ ಅಡಿಗ, ಪ್ರೊ. ಕೆ.ಎಸ್‌. ಕೃಷ್ಣಮೂರ್ತಿ, ಡೇಡಿಡ್‌ ಹಾರ್ಸ್ ಬ್ರೋ ಇವರ ಗುರುಗಳು. ಅಡಿಗರ ಪ್ರಚೋದನೆಯಿಂದ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಕತೆ, ಕಾದಂಬರಿಗಳ ರಚನೆ. ಇವರು ಬರೆದ ಕ್ರಾಂತ್ರಿಕಾರಕ, ಮನೋವಿಶ್ಲೇಷಣಾತ್ಮಕ ವಸ್ತುವಿನ ಮೊದಲ ಕಾದಂಬರಿ ಕೆದರಿದ ಕೆಂಡ (೧೯೫೪) ಪ್ರಕಟಿಸಿ ಹಲವಾರು ಮ%E

Details

Date:
July 29, 2024
Event Category: