
ಬಿ.ಎಂ. ಸುಂದರರಾವ್
July 6, 2024
೦೬.೦೭.೧೯೩೮ ಕೊಳಲು ವಾದನದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಸುಂದರರಾವ್ ರವರು ಹುಟ್ಟಿದ್ದು ಕೋಲಾರದಲ್ಲಿ. ತಂದೆ ಮುರಹರಿರಾವ್, ತಾಯಿ ಸುಗಂಧಾಬಾಯಿ. ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ ಆದರೂ ಕೊಳಲು ವಾದನದತ್ತ ಹರಿದ ಮನಸ್ಸು. ಪ್ರಾರಂಭಿಕ ಶಿಕ್ಷಣ ಚಿಕ್ಕಪ್ಪ ಹಾಗೂ ದೊಡ್ಡಪ್ಪನವರಲ್ಲಿ. ಅಂಬಳೆ ರಾಮಸ್ವಾಮಿ, ಎಂ. ಕೆ. ಸುಬ್ಬರಾವ್, ಎಸ್.ಪಿ. ನಟರಾಜನ್ ರವರಲ್ಲಿ ಮುಂದುವರೆದ ಶಿಕ್ಷಣ. ನಾದ ಬ್ರಹ್ಮ ಟಿ.ಆರ್. ಮಹಾಲಿಗಮ್ರವರಲ್ಲಿ ಗುರುಕುಲ ಪದ್ಧತಿಯಲ್ಲಿ ಉನ್ನತ ವೇಣುವಾದನ ಶಿಕ್ಷಣ. ಸಂಗೀತ ಅಧ್ಯಾಪಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಟಿ. ಆರ್. ಮಹಾಲಿಂಗಂ ಪಾಠಶಾಲೆ, ಕನ್ನಿಕಪರಮೇಶ್ವರಿ ಪಾಠಶಾಲೆ, ಶಿವಾ ಮ್ಯೂಸಿಕ್ ಇನ್ಸ್ಟಿಟ್ಯೂಟ್. ಸತ್ಯಮ್ ಮ್ಯೂಸಿಕ್ ಅಕಾಡಮಿ ಮುಂತಾದೆಡೆ ಸಲ್ಲಿಸಿದ ಸೇವೆ. ಕೆ.ಜಿ.ಎಫ್. ನ ರಾಮನವಮಿ ಸಂಗೀತೋತ್ಸವ, ಮಲ್ಲೇಶ್ವರದ ತ್ಯಾಗರಾಜ ಸಂಗೀತೋತ್ಸವ, ಕನಕಪುರ, ಬೆಂಗಳೂರಿನ ನಾದಬ್ರಹ್ಮ ಸಭಾ, ಸಂಗೀತ ಪ್ರಚಾರ ಮಂಡಲಿ, ಚಾಮರಾಜಪೇಟೆ ರಾಮಸೇವಾಮಂಡಲಿ, ತಿರುಪತಿಯ ರಾಮನವಮಿ ಉತ್ಸವ, ಕರ್ನಾಟಕ ಗಾನ ಕಲಾ ಪರಿಷತ್ ಮುಂತಾದೆಡೆ ನಡೆಸಿಕೊಟ್ಟ ವೇಣುವಾದನ ಕಚೇರಿಗಳು. ಫ್ರಾನ್ಸ್, ಹಾಲೆಂಡ್, ಲಂಡನ್, ಇಟಲಿ, ಸ್ವಿಜರ್ಲ್ಯಾಂಡ್ಗಳಲ್ಲಿ ಕೊಳಲುವಾದನದ ಪ್ರಾತ್ಯಕ್ಷಿಕೆ ಮತ್ತು ಕಚೇರಿಗಳು, ಪ್ರಸಿದ್ಧ ತಬಲವಾದಕ ಜಾಕೀರ್ ಹುಸೇನ್ ಮತ್ತು ಕೊಳಲುವಾದಕರಾದ ಹರಿಪ್ರಸಾದ್ ಚೌರಾಸಿಯಾರವರೊಡನೆ ನಡೆಸಿಕೊಟ್ಟ ಜುಗಲಬಂದಿ ಕಾರ್ಯಕ್ರಮ. ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನ. ಕರ್ನಾಟಕ ಕಲಾಶ್ರೀ, ನಾದಕೋಕಿಲ, ನಾದಬ್ರಹ್ಮ, ಕೊಳಲು ಗಾನ ಕಲಾ ಭೂಷಣ, ವಿಶ್ವಭಾರತಿ ಕಲಾ ಜ್ಯೋತಿ ಮುಂತಾದ ಪ್ರಶಸ್ತಿ ಗೌರವಗಳು. ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಬೆಂಗಳೂರಿನ ಮಹಾನಗರಪಾಲಿಕೆ ನಿರ್ಮಿಸಿರುವ ರಂಗಮಂದಿರಕ್ಕೆ “ಬಿ.ಎಂ. ಸುಂದರರಾವ್ ಬಯಲು ರಂಗಮಂದಿರ”ವೆಂದು ನಾಮಕರಣ. ಇದೇ ದಿನ ಹುಟ್ಟಿದ ಕಲಾವಿದರು ಕೆ.ಎಸ್. ವೆಂಕಟಾದ್ರಿಶರ್ಮ – ೧೯೨೮ ಅಂಬುಜಮ್ಮ ಹೊಸಮನಿ – ೧೯೩೭ ಮಾಣಿಕ್. ಎ. ವಿ – ೧೯೪೯ ಯಶಸ್ವಿ ಎಸ್ – ೧೯೬೦ ಲೋಹಾರ್ ಎಸ್. ಎಂ – ೧೯೬೪ ಚೇತನ ರಾಧಾಕೃಷ್ಣ – ೧೯೭೨
* * *