Loading Events

« All Events

ಟಿ. ಗುರುರಾಜಪ್ಪ

July 9

..೧೯೦೫ ೨೨..೧೯೭೨ ಪಿಟೀಲು ವಿದ್ವಾಂಸರಾಗಿದ್ದ ಮೈಸೂರು ಟಿ. ಚೌಡಯ್ಯನವರ ತಮ್ಮಂದಿರಾದ ಟಿ. ಗುರುರಾಜಪ್ಪನವರು ಹುಟ್ಟಿದ್ದು ತಿರುವ ಕೂಡಲು ನರಸೀಪುರ. ತಂದೆ ಅಗಸ್ತೇಗೌಡರು, ತಾಯಿ ಸುಂದರಮ್ಮ. ಸಂಗೀತಗಾರರ ಮನೆತನದಲ್ಲಿ ಬೆಳೆದ ಗುರುರಾಜಪ್ಪನವರಿಗೂ ಸಂಗೀತದತ್ತ ಬೆಳೆದ ಆಸಕ್ತಿ. ಎಸ್‌.ಎಸ್‌. ಎಲ್‌.ಸಿ.ಯ ನಂತರ ಬಿಡಾರಂ ಕೃಷ್ಣಪ್ಪನವರ ಬಳಿ ಪಿಟೀಲು ಕಲಿಕೆ. ಅನೇಕ ಕಚೇರಿಗಳಲ್ಲಿ ಬಿಡಾರಂ ಕೃಷ್ಣಪ್ಪನವರಿಗೆ ನೀಡಿದ ಪಿಟೀಲು ಸಹಕಾರ. ಟಿ. ಚೌಡಯ್ಯನವರೊಡನೆ ದೇಶಾದ್ಯಂತ ನಡೆಸಿಕೊಟ್ಟ ದ್ವಂದ್ವ ಪಿಟೀಲು ವಾದನ ಕಚೇರಿ. ೧೯೩೯ ರಲ್ಲಿ ತಿರುಚನಾಪಳ್ಳಿ ಆಕಾಶವಾಣಿಯಲ್ಲಿ ‘ಎ’ ದರ್ಜೆ ಕಲಾವಿದರಾಗಿ ನೇಮಕ. ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಪಿಟೀಲು ವಾದನ. ಜಿ.ಎನ್‌.ಬಿ., ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈವೈದ್ಯನಾಥಭಾಗವತರ್, ಆಲತ್ತೂರು ಸಹೋದರರು ಮುಂತಾದವರ ಕಚೇರಿಗಳಿಗೆ ಪಿಟೀಲಿನ ಪಕ್ಕವಾದ್ಯ. ತಮಿಳುನಾಡಿನ ಹಲವಾರು ಗಣ್ಯ ಸಂಗೀತಗಾರರ ಎದುರಿನಲ್ಲಿ ವಜ್ರದ ಕಾಪುತೊಡಿಸಿ ನೀಡಿದ ಸನ್ಮಾನ. ತಮಿಳುನಾಡಿನಾದ್ಯಂತ ಸಂಗೀತ ಕಚೇರಿಗಳು. ದೇಶವಿದೇಶಗಳಿಂದ ಬಂದ ಆಹ್ವಾನ. ಸಿಲೋನ್‌, ಸಿಂಗಪೂರ್, ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿ ಹೆಸರಾಂತ ಚಿತ್ರನಟ, ಸಂಗೀತಗಾರ ತ್ಯಾಗರಾಜ ಭಾಗವತರೊಡನೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ. ೧೯೫೩ ರಲ್ಲಿ ಮೈಸೂರು ಆಕಾಶವಾಣಿ ಕಲಾವಿದರಾಗಿ ಸೇರ್ಪಡೆ. ತಮಿಳುನಾಡಿನ ಸಂಗೀತ ಪ್ರೇಮಿಗಳಿಂದದು ಬೆರಳಿಗೂ ತೊಡಿಸಿದ ವಜ್ರದುಂಗುರ, ಬೀಳ್ಕೊಡುಗೆ. ೧೯೫೭ ರಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ‘ಎ’ ದರ್ಜೆ ಕಲಾವಿದರಾಗಿ ನೇಮಕ. ಮನೆಯಲ್ಲೇ ಗುರುಕುಲ ಪದ್ಧತಿಯಲ್ಲಿ ಶಿಷ್ಯರಿಗೆ ಸಂಗೀತ ಶಿಕ್ಷಣ.. ಮಧುರೆ ವೇಣುಗೋಪಾಲ್‌, ಕಿಳಿನಲ್ಲೂರು ರಂಗಸ್ವಾಮಿ, ನಟರಾಜನ್‌, ವೈದ್ಯನಾಥನ್‌ ಮುಂತಾದ ಶಿಷ್ಯರಿಂದ ದೇಶದ ನಾನಾಕಡೆ ಸಲ್ಲುತ್ತಿರುವ ಸಂಗೀತ ಸೇವೆ. ಟಿ. ಗುರುರಾಜಪ್ಪನವರು ಸೃಷ್ಟಿಸಿದ ವಯೊಲಿನ್‌ ಮಾಧುರ್ಯ ಮಕ್ಕಳಿಂದ ಮುಂದುವರಿಕೆ.   ಇದೇ ದಿನ ಹುಟ್ಟಿದ ಕಲಾವಿದರು ಕೆ. ವೆಂಕಟಪ್ಪ – ೧೮೮೬ ಸಿದ್ದೇಶ್‌ ಕುಮಾರ್ – ೧೯೨೫ ವಿಮಲಾ ರಂಗಾಚಾರ್ – ೧೯೨೯ ಸೂರ್ಯಪ್ರಭ. ಡಿ – ೧೯೩೬ ಲಕ್ಷ್ಮೀನಾರಾಯಣ ಗೂಬಿ – ೧೯೪೨ ನಾಗವಲ್ಲಿ ನಾಗರಾಜ್‌ – ೧೯೫೯

* * *

Details

Date:
July 9
Event Category: