ಬಿ.ಎಲ್. ರೈಸ್
July 17
೧೭-೭-೧೮೩೬ ೧೦-೭-೧೯೨೭ ಕನ್ನಡಕ್ಕಾಗಿ ದುಡಿದ ವಿದೇಶಿಯರಲ್ಲಿ ಅಗ್ರಗಣ್ಯರಾದ ಬೆಂಜಮಿನ್ ಲೂಯಿರೈಸ್ರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬೆಂಜಮಿನ್ ಹೋಲ್ಡ್ರೈಸ್. ಅವೆನ್ಯೂ ರಸ್ತೆಯಲ್ಲಿ ಹೋಲ್ಡ್ರೈಸ್ ಹೆಸರಿನಲ್ಲಿ ಚರ್ಚ್ ಕೂಡಾ ಇದೆ. ವಿದ್ಯಾಭ್ಯಾಸ ನಡೆದುದು ಇಂಗ್ಲೆಂಡ್ನಲ್ಲಿ. ನಂತರ ಬೆಂಗಳೂರಿಗೆ ಬಂದು ಸೆಂಟ್ರಲ್ ಹೈಸ್ಕೂಲಿನಲ್ಲಿ ೫ ವರ್ಷ ಮುಖ್ಯೋಪಾಧ್ಯಾಯ ವೃತ್ತಿ. ೧೮೬೮ರಲ್ಲಿ ವಿದ್ಯಾ ಇಲಾಖೆಯ ಮುಖ್ಯಾಕಾರಿಯಾಗಿ ೧೮೮೩ರಲ್ಲಿ ಮೈಸೂರು ಸರಕಾರದ ವಿದ್ಯಾಶಾಖೆಯ ಪ್ರಥಮ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ. ಮೈಸೂರು ಸರಕಾರದ ಪ್ರಾಚ್ಯ ವಸ್ತು ಸಂಶೋಧನಾ ಶಾಖೆ ಪ್ರಾರಂಭವಾದಾಗ ರೈಸ್ರವರು ತಮ್ಮ ಹುದ್ದೆಯ ಜೊತೆಗೆ ಹೊತ್ತ ಈ ಶಾಖೆಯ ಜವಾಬ್ದಾರಿ. ವಿದ್ಯಾ ಇಲಾಖೆಯ ಕಾರ್ಯದರ್ಶಿ ಯಾಗಿದ್ದಾಗ ಕೊಡಗಿನ ಶಾಸನಗಳನ್ನು ಸಂಗ್ರಹಿಸಿ ೧೮೮೬ರಲ್ಲಿ ‘ಎಪಿಗ್ರಾಫಿಯ ಕರ್ನಾಟಕ’ ಪ್ರಕಟಿಸಿ ಶಿಲಾಶಾಸನ ಪ್ರಕಟಣಾ ಮಾಲೆಗೆ ಹಾಡಿದ ನಾಂದಿ. ಈ ಶಾಸನಗಳ ಅಧ್ಯಯನದ ಅವಶ್ಯಕತೆ ಮನಗಂಡು ಸರಕಾರ ಪುರಾತತ್ವ ಇಲಾಖೆಯ ಪೂರ್ಣಾವ ಅಕಾರಿಯಾಗಿ ನೇಮಕ. ೧೬ ವರ್ಷ ಕನ್ನಡ ನಾಡಿನಲ್ಲೆಲ್ಲಾ ಸಂಚರಿಸಿ ಶಾಸನಗಳನ್ನು ಸಂಗ್ರಹಿಸಿ ಹನ್ನೆರಡು ಸಂಪುಟಗಳ ಪ್ರಕಟಣೆ. ಪ್ರಕಟಿಸಿದ ಶಾಸನಗಳ ಒಟ್ಟು ಸಂಖ್ಯೆ ೮೮೬೯. ಕೊಡಗು, ಶ್ರವಣ ಬೆಳಗೊಳ, ಮಂಡ್ಯ, ಮೈಸೂರು, ಕಡೂರು (ಚಿಕ್ಕಮಗಳೂರು), ಶಿವಮೊಗ್ಗ, ಹಾಸನ, ಕೋಲಾರ, ಬೆಂಗಳೂರು, ಚಿತ್ರದುರ್ಗ ಮತ್ತು ತುಮಕೂರು. ಜಿಲ್ಲಾ ಶಾಸನಗಳ ವ್ಯವಸ್ಥಿತ ಸಂಗ್ರಹಣೆ, ಪ್ರಕಟಣೆ. ಕ್ರಿಸ್ತಪೂರ್ವ ೨೫೦ ವರ್ಷಗಳಷ್ಟು ಪುರಾತನವಾದ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ. ಶಾಸನಗಳ ವಿಶೇಷ ಅಧ್ಯಯನ ನಡೆಸಿ ಅಂದಿನ ರಾಜಕೀಯ, ಇತಿಹಾಸವನ್ನು ತಿಳಿಸುವ “ಮೈಸೂರ್ ಅಂಡ್ ಕೂರ್ಗ್ ಇನ್ಸ್ಕ್ರಿಪ್ಷನ್ಸ್” ಗ್ರಂಥ ರಚನೆ-ಪ್ರಕಟಣೆ. ಶಾಸನಗಳನಷ್ಟೇ ಅಲ್ಲದೆ ಪ್ರಾಚೀನ ಕನ್ನಡ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಕೀರ್ತಿ. ಪಂಪಭಾರತ, ಪಂಪ ರಾಮಾಯಣ, ಶಬ್ದಾನುಶಾಸನ, ಕರ್ನಾಟಕ ಭಾಷಾಭೂಷಣ, ಕವಿರಾಜಮಾರ್ಗ, ಅಮರಕೋಶ, ಕಾವ್ಯಾವಲೋಕನ ಗ್ರಂಥಗಳನ್ನು ಸಂಪಾದಿಸಿ “ಬಿಬ್ಲಿಯೋಥಿಕಾ ಕರ್ನಾಟಿಕಾ” ಗ್ರಂಥಮಾಲೆಯಲ್ಲಿ ಪ್ರಕಟಗೊಂಡ ಗ್ರಂಥಗಳು. ಇವರ ಸಾಧನೆಯನ್ನು ಗುರುತಿಸಿ ಮದರಾಸು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿತು. ರೈಸ್ರವರು ೧೯೦೬ರಲ್ಲಿ ನಿವೃತ್ತರಾಗಿ ಇಂಗ್ಲೆಂಡ್ನ ಹ್ಯಾರೋ ನಗರದಲ್ಲಿ ನೆಲೆಸಿ ಜುಲೈ ೧೦, ೧೯೨೭ರಂದು ನಿಧನರಾದರು. ಇದೇ ದಿನ ಹುಟ್ಟಿದ ಸಾಹಿತಿಗಳು : ಕೌಸಲ್ಯಾದೇವಿ – ೧೯೧೦-೧೯.೧೨.೧೯೮೪ ಪ್ರಹ್ಲಾದಕುಮಾರ ಭಾಗೋಜಿ – ೧೯೨೫-೧೯.೭.೨೦೦೦