Loading Events

« All Events

  • This event has passed.

ಮಹದೇವ ಬಣಕಾರ

October 3, 2023

.೧೦.೧೯೩೨ ೧೭.೧೧.೨೦೦೧ ನಾಡು – ನುಡಿಯ ಹೋರಾಟಗಾರ, ಕವಿ, ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿಯಾದ ಮಹದೇವ ಬಣಕಾರರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆ ಬೆನ್ನೂರಿನಲ್ಲಿ (ಈಗ ಹಾವೇರಿ ಜಿಲ್ಲೆ) ೧೯೩೨ ರ ಅಕ್ಟೋಬರ್ ೩ ರಂದು. ತಂದೆ ಗದಿಗೆಪ್ಪ, ತಾಯಿ ಸಿದ್ದಮ್ಮ. ಮೋಟೆಬೆನ್ನೂರಿನ ವಿಶೇಷತೆ ಎಂದರೆ ಸ್ವಾತಂತ್ರಯೋಧ, ಕ್ರಾಂತಿಕಾರಿ ಮೈಲಾರಮಹದೇವ ಹಾಗೂ ಮಹದೇವ ಬಣಕಾರರಿಗೆ ಜನ್ಮಕೊಟ್ಟ ಸ್ಥಳ. ಕಿತ್ತು ತಿನ್ನುವ ಬಡತನ, ಓದಬೇಕೆಂದರೂ ಸೌಲಭ್ಯದ ಕೊರತೆಯಿಂದ ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ಜಾಸ್ತಿ. ಶಿಕ್ಷಣವನ್ನು ಮುಂದುವರೆಸಲಾಗದೆ ತಂದೆ ತಾಯಿಗಳಿಗೆ ಸಹಾಯಕನಾಗಿ ಗೃಹಕೃತ್ಯದಲ್ಲಿ ಭಾಗಿಯಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಎಮ್ಮೆ ಕಾಯುವ ಕೆಲಸ. ಎಮ್ಮೆಯ ಮೇಲೆಯೇ ಕುಳಿತು ಲಹರಿ ಬಂದು ಕಟ್ಟಿದ ಹಾಡು ಕವನ ರೂಪದಲ್ಲಿ, ವಚನರೂಪದಲ್ಲಿ ಹೊರಹೊಮ್ಮಿದಾಗ ೧೮ರ ಹರೆಯದಲ್ಲಿಯೇ ಪ್ರಕಟಿಸಿದ ಕವನ ಸಂಕಲನ ‘ಕಾವ್ಯೋದಯ’ ಈ ಸಂಕಲನಕ್ಕೆ ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದು ಹಾರೈಸಿದ್ದಾರೆ. ಹೀಗೆ ಇವರು ಬರೆದ ಹಾಡು, ಕವನಗಳಿಗೆ ಸ್ಫೂರ್ತಿದಾಯಕರೆಂದರೆ ಗುರುಗಳಾಗಿದ್ದ ಸಾಲಿ ರಾಮಚಂದ್ರರಾಯರು ಹಾಗೂ ಕುವೆಂಪುರವರು. ಇವರ ಕಾವ್ಯಕೃಷಿಗೆ ನೀರೆರೆದು ಬೆಳೆಸಿದ ಮತ್ತೊಬ್ಬರೆಂದರೆ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ‘ನನ್ನ ಸಂಕಲ್ಪಶಕ್ತಿ, ರಚನಾಶಕ್ತಿ, ಕಾವ್ಯಶಕ್ತಿಗಳಿಗೆಲ್ಲ ಸ್ವಾಮಿಗಳ ಆಶೀರ್ವಾದವೇ ಶ್ರೀರಕ್ಷೆ’ ಎಂದು ನಮ್ರವಾಗಿ ನುಡಿಯುವ ಬಣಕಾರರು ‘ಕಾಡುಗಲ್ಲಿಗೆ ಉಳಿ ಏಟು ನೀಡಿ ಕಡೆದು ವಿಗ್ರಹ ಮಾಡಿದ ಆರಾಧ್ಯಮೂರ್ತಿ’ ಎಂದು ಸ್ಮರಿಸಿಕೊಂಡಿದ್ದಾರೆ. ಬಣಕಾರರು ಪತ್ರಿಕೋದ್ಯಮಿಯಾಗಿಯೂ ಆರಂಭದಲ್ಲಿ ನವಯುಗ, ಜಯಕರ್ನಾಟಕ, ಪ್ರಜಾವಾಣಿ, ಕರ್ನಾಟಕ ಬಂಧು, ಕನ್ನಡಿಗ, ಜಯಂತಿ, ಅಂಕುಶ ಮುಂತಾದ ಪತ್ರಿಕೆಗಳ ಸಹ ಸಂಪಾದಕರಾಗಿಯೂ ದುಡಿದು ವಿಫುಲ ಅನುಭವ ಪಡೆದರು. ದಾವಣಗೆರೆಗೆ ಬಂದು ‘ಜಾಗೃತಿ’ ಎಂಬ ಹೊಸ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಅದಕ್ಕೆ ನಿರೀಕ್ಷಿಸಿದ ಉತ್ತೇಜನ ದೊರೆಯದೆ ನಿಲ್ಲಿಸಬೇಕಾಯಿತು. ಬಣಕಾರರು ಸೃಜನಶೀಲ ಸಾಹಿತಿ, ಕವಿ ಹಾಗೂ ನಾಟಕಕಾರರು. ಕಾವ್ಯೋದಯವಲ್ಲದೆ ಬಣ್ಣದ ಕಾರಂಜಿ, ಅಪರಂಜಿ, ಹೊಸಹುಟ್ಟು ಮುಂತಾದ ೪ ಕಾವ್ಯ ಕೃತಿಗಳು ಗರತಿಯ ಗೋಳು, ಕಲ್ಯಾಣಕ್ರಾಂತಿ, ಯಾರು ಹೊಣೆ, ಉರಿಲಿಂಗ ಪೆದ್ದಿ, ತಿಂದೋಡಿ, ತೂಗಿದ ತೊಟ್ಟಿಲು, ಹೊಸ್ತಿಲುದಾಟಿದ ಹೆಣ್ಣು, ದುಡ್ಡೇ ದೇವರು ಮೊದಲಾದ ನಾಟಕಗಳು; ಲೋಕದ ಕಣ್ಣು, ಮಾದನ ಮಗ ಮತ್ತು ಇತರ ಕಥೆಗಳು ಮುಂತಾದ ಕಥಾ ಸಂಕಲನಗಳು; ಭಾಷೆ ಮತ್ತು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ – ಮಹಾರಾಷ್ಟ್ರ ಮಹಾಜನ್‌ ವರದಿ ವಿಶ್ಲೇಷಣೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗದು, ಕಾಸರಗೋಡು ಕೇರಳಕ್ಕೆ ಉಳಿಯದು, ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷ%A

Details

Date:
October 3, 2023
Event Category: