ಪುಸ್ತಕ ವಿವರ
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಸಪ್ಟೆಂಬರ್ 1993) ಸಂಪುಟ-೬-ಸಂಚಿಕೆ-೨ | ಡಾ. ಜೀ. ಶಂ. ಪರಮಶಿವಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 79 |
ಮನುಷ್ಯನ ಮೈ-ಮನಸ್ಸುಗಳು ಆರೋಗ್ಯಪೂರ್ಣವಾಗಿದ್ದು, ಸುಖ-ಸಂತೋಷಗಳು ಪ್ರಾಪ್ತವಾದಾಗ, ಬದುಕು ಉಲ್ಲಾಸಪೂರ್ಣವಾಗುತ್ತದೆ. ಆಗ ಆತ ತನ್ನ ಸುಖ-ಸಂತೃಪ್ತಿ-ಸಂತಸಗಳನ್ನು ತನ್ನ ಅವಯವಗಳ ಚಲನೆಯಿಂದ ಬೇರೆಯವರಿಗೆ ತಿಳಿಸಲು ಯತ್ನಿಸುತ್ತಾನೆ. ವ್ಯಕ್ತಿಗತವಾದ ಈ ಉಲ್ಲಾಸ ಸಮೂಹಗತವಾದಾಗ, ಕೂಗು ಧ್ವನಿಯಾಗುತ್ತದೆ. ಚಪ್ಪಾಳೆ ತಾಳವಾಗುತ್ತದೆ. ಕುಣಿತ ನೃತ್ಯವಾಗುತ್ತದೆ. ಆಗ ಮಾತು ಗೌಣ. |