|
ಪ್ರಾಚೀನ ಕರ್ನಾಟಕದಲ್ಲಿ, ಅಗ್ರಹಾರ, ಮಠ ಹಾಗೂ ಘಟಿಕಸ್ಥಾನ ಎಂಬ ಶಿಕ್ಷಣ ಸಂಸ್ಥೆಗಳ ಬಲಿಷ್ಠವಾದ ಹಂದರವು ಅಸ್ತಿತ್ವದಲ್ಲಿತ್ತು. ಭೂಮಿ, ಮನೆ ಹಾಗೂ ಇತರ ಸೌಕರ್ಯಗಳನ್ನು ನೀಡಲಾದ ಬ್ರಾಹ್ಮಣ ವಿದ್ವಾಂಸ ವಸಾಹತುಗಳನ್ನು ಅಗ್ರಹಾರವೆಂದು ಕರೆಯ ಲಾಗುತ್ತಿತ್ತು. ಬ್ರಾಹ್ಮಣರಿಂದ ಅಪೇಕ್ಷಿಸಲಾದ ಷಟ್ಕರ್ಮಗಳ ಭಾಗವಾದ ವ್ಯಾಸಂಘಿಕ ಸಾಧನೆಗಳನ್ನು ಪೂರೈಸಲು ಸಾಧ್ಯವಾಗಲೆಂದು ಅವರಿಗೆ ಇವೆಲ್ಲವನ್ನೂ ನೀಡಲಾಗುತ್ತಿತ್ತು. ಆ ಆರು ಕರ್ಮಗಳು ಅಥವಾ ಹೊಣೆಗಾರಿಕೆಗಳು ಯಾವುವೆಂದರೆ, ಯಜ್ಞ (ಬಲಿಗಳನ್ನು ನೀಡುವುದು / ಹೋಮ-ಹವನಾದಿಗಳನ್ನು ಮಾಡುವುದು), ಯಾಜನ (ಹೋಮ-ಹವನಾದಿಗಳ ಪಾರುಪತ್ಯವನ್ನು ವಹಿಸುವುದು), ಅಧ್ಯಯನ (ತಮ್ಮನ್ನು ತಾವು ಓದು/ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು), ಅಧ್ಯಾಪನ (ಬೋಧನೆ), ದಾನ (ಉಡುಗೊರೆಗಳನ್ನು ನೀಡುವುದು) ಹಾಗೂ ಪ್ರತಿಗ್ರಹ (ಉಡುಗೊರೆಗಳನ್ನು ಪಡೆಯುವುದು). |